6
  • Latest
Janiwara case Srimattha backs the victimized students!

ಜನಿವಾರ ಪ್ರಕರಣ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಶ್ರೀಮಠದ ಅಭಯ!

Foreign ship enters Karwar Pakistani citizen trapped at sea!

ಕಾರವಾರ ಪ್ರವೇಶಿಸಿದ ವಿದೇಶಿ ಹಡಗು: ಸಮುದ್ರದಲ್ಲಿ ಸಿಕ್ಕಿಬಿದ್ದ ಪಾಪಿಸ್ತಾನದ ಪ್ರಜೆ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಬೈಕಿಗೆ ಗುದ್ದಿದ ಬುಲೆರೋ: ಸ್ಥಳದಲ್ಲಿಯೇ ಸಾವನಪ್ಪಿದ ಬೈಕ್ ಸವಾರ

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಮರಕ್ಕೆ ಗುದ್ದಿದ ದೇವರ ಕಲ್ಲು ಸಾಗಿಸುವ ಲಾರಿ: ಗಟಾರಕ್ಕೆ ಬಿದ್ದ ಕ್ಲೀನರಿಗೆ ಗಾಯ!

  • Home
Wednesday, May 14, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
Home ರಾಜ್ಯ

ಜನಿವಾರ ಪ್ರಕರಣ: ಸಂತ್ರಸ್ತ ವಿದ್ಯಾರ್ಥಿಗಳಿಗೆ ಶ್ರೀಮಠದ ಅಭಯ!

AchyutKumar by AchyutKumar
in ರಾಜ್ಯ, ಸ್ಥಳೀಯ
Janiwara case Srimattha backs the victimized students!

`ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ತಾಕೀತು ಮಾಡಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಜನಿವಾರದ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ಎಲ್ಲರಿಗೂ ಸಹಾಯಹಸ್ತ ಚಾಚಲು ಶ್ರೀಮಠ ಸಿದ್ಧ’ ಎಂದು ಶ್ರೀಗಳು ಘೋಷಿಸಿದ್ದಾರೆ.

`ಜನಿವಾರದ ಕಾರಣಕ್ಕಾಗಿ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ವಿಷಾಧನೀಯ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ ತುಂಡರಿಸಿರುವುದು ಸಹ ಸಹಿಸಲು ಸಾಧ್ಯವಿಲ್ಲ’ ಎಂದವರು ಪ್ರತಿಕ್ರಿಯಿಸಿದ್ದಾರೆ. `ಪ್ರತಿಭಟನೆಯ ಮೂಲಕ ಇದನ್ನು ಸಮುದಾಯದವರು ಖಂಡಿಸಬೇಕು’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ. `ಅಧಿಕಾರಿಗಳ ಈ ವರ್ತನೆಯ ಹಿಂದೆ ಜಾತಿದ್ವೇಷ ಹಾಗೂ ಜನಿವಾರ ಧರಿಸುವ ಜಾತಿಯವರನ್ನು ಸಂಪೂರ್ಣವಾಗಿ ತುಳಿಯುವ ಭಾವ ಕಾಣಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಮಾನಸಿಕ ಒತ್ತಡದಲ್ಲಿರುವಾಗ ಅಧಿಕಾರಿಗಳು ಈ ರೀತಿ ಕ್ರೌರ್ಯ ಮೆರೆದಿರುವುದು ಖಂಡನೀಯ’ ಎಂದು ಹೇಳಿದ್ದಾರೆ.

Advertisement. Scroll to continue reading.
ADVERTISEMENT

`ಜನಿವಾರ ಕೀಳುವಾಗ ಮನಸ್ಸಿಗೆ ಎಂಥ ನೋವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣರು ಇಂಥ ನೋವನ್ನು ಸಹಿಸಬಾರದು. ಈ ಪ್ರಕರಣವನ್ನು ಹಾಗೇ ಬಿಟ್ಟರೆ ದೇಶದಲ್ಲಿ ಬದುಕಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ರಾಘವೇಶ್ವರ ಶ್ರೀ ಆತಂಕವ್ಯಕ್ತಪಡಿಸಿದ್ದಾರೆ. `ಈ ಕೃತ್ಯವನ್ನು ಬ್ರಾಹ್ಮಣರು ಸಂಘಟಿತರಾಗಿ ಪ್ರತಿಭಟಸುವುದು ಅಗತ್ಯ ಮಾತ್ರವಲ್ಲ. ಅನಿವಾರ್ಯವೂ ಹೌದು. ಇದು ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ. ಬೇರೆಯವರೂ ಜನಿವಾರವನ್ನು ಗೌರವದಿಂದ ಧಾರಣೆ ಮಾಡುತ್ತಾರೆ. ಲಿಂಗಾಯಿತರು ಕೂಡಾ ಲಿಂಗವನ್ನು ಧರಿಸುತ್ತಾರೆ. ಅದನ್ನೂ ಇಂಥದ್ದೇ ಸೂತ್ರದಿಂದ ಧರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ಸಮಾಜಕ್ಕೆ ಅಪಾಯ ಕಾದಿದೆ’ ಎಂದು ಎಚ್ಚರಿಸಿದ್ದಾರೆ.

Advertisement. Scroll to continue reading.

`ಧಾರ್ಮಿಕ ಚಿಹ್ನೆಯನ್ನು ತೆಗೆದುಹಾಕಿದರೆ ಪರೀಕ್ಷೆ ಬರೆಯುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಂಡ ವಿದ್ಯಾರ್ಥಿಗೆ ಅಭಿನಂದನೆ. ಧಾರ್ಮಿಕತೆಯಲ್ಲಿ ರಾಜಿ ಮಾಡಿಕೊಳ್ಳದ ವಿದ್ಯಾರ್ಥಿಯನ್ನು ಪ್ರತಿಯೊಬ್ಬರು ಮೆಚ್ಚಬೇಕು. ಇಡೀ ಬ್ರಾಹ್ಮಣ ಸಮಾಜ ಮಾತ್ರವಲ್ಲ. ಭಾರತೀಯರೆಲ್ಲರೂ ಒಗ್ಗೂಡಿ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಆಶಿಸಿದ್ದಾರೆ.

ಹವ್ಯಕ ಮಹಾಮಂಡಲವೂ ಜನಿವಾರ ತೆಗೆಯುವ ಪ್ರಯತ್ನದ ಘಟನೆಯನ್ನು ಖಂಡಿಸಿದ್ದು, ಸಮಗ್ರ ಹವ್ಯಕ ಮಹಾಮಂಡಲ ಸಭೆಯಲ್ಲಿ ಈ ಬಗ್ಗೆ ಖಂಡನಾ ನಿರ್ಣಯ ಆಂಗೀಕರಿಸಿದೆ. `ಅಕ್ಷಮ್ಯ ಅಪರಾಧ ಎಸಗಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ, ವಿದ್ಯಾರ್ಥಿಯ ಭವಿಷ್ಯ ಹಾಗೂ ಆತ್ಮಗೌರವ ರಕ್ಷಿಸಬೇಕು’ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಆಗ್ರಹಿಸಿದ್ದಾರೆ.

Previous Post

ಮದುವೆಗೆ ಹೋಗಬೇಕಿದ್ದ ಮಹಿಳೆ ಕಾಣೆ: ಮಕ್ಕಳ ಬಗ್ಗೆಯೂ ಸಿಕ್ಕಿಲ್ಲ ಸುಳಿವು!

Next Post

ಜೋಗದ ಅಡಿ ಸೆಲ್ಪಿ ಹುಚ್ಚು: ಅಪಾಯಕ್ಕೆ ಸಿಲುಕಿದವರಿಗೆ ಅಪರ ಜಿಲ್ಲಾಧಿಕಾರಿಗಳ ಪಾಠ!

Related Posts

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!
ರಾಜ್ಯ

ಬೈಕಿಗೆ ಗುದ್ದಿದ ಬುಲೆರೋ: ಸ್ಥಳದಲ್ಲಿಯೇ ಸಾವನಪ್ಪಿದ ಬೈಕ್ ಸವಾರ

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!
ಸ್ಥಳೀಯ

ಮರಕ್ಕೆ ಗುದ್ದಿದ ದೇವರ ಕಲ್ಲು ಸಾಗಿಸುವ ಲಾರಿ: ಗಟಾರಕ್ಕೆ ಬಿದ್ದ ಕ್ಲೀನರಿಗೆ ಗಾಯ!

Gokarna security tightened
ರಾಜ್ಯ

ಗೋಕರ್ಣ ಭದ್ರತೆ ಇನ್ನಷ್ಟು ಬಲಿಷ್ಠ

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!
ಸ್ಥಳೀಯ

ರಂಗಿನಕಟ್ಟಾ ಬಳಿ ರಕ್ತದ ರಂಗೋಲಿ: ಅಪರಿಚಿತ ಆಟೋ ಬಡಿದು ವೃದ್ಧ ಸಾವು!

Working age debauchery Drug dealers arrested!
ಸ್ಥಳೀಯ

ದುಡಿಯುವ ವಯಸ್ಸಿನಲ್ಲಿ ಅಡ್ಡದಾರಿ: ಮಾದಕ ವ್ಯಸನ ಮಾರಾಟಗಾರರ ಸೆರೆ!

A woman who came to Karwar stole a car and fled!
ರಾಜ್ಯ

ಅನಂತನ ಅವಾಂತರ: ಕಾರವಾರಕ್ಕೆ ಬಂದ ನಾರಿ: ಕಾರು ಕದ್ದು ಪರಾರಿ!

Siddhi community delegation prepares for Siddha meeting!
ರಾಜ್ಯ

ಸಿದ್ದು ಭೇಟಿಗೆ ಸಿದ್ಧತೆ ನಡೆಸಿದ ಸಿದ್ದಿ ಸಮುದಾಯ!

A yoga teacher by name: What he did was intoxicating!
ಸ್ಥಳೀಯ

ಕಿಕ್ಕು ನೀಡದ ಬೀಡಿ-ಸಿಗರೇಟು: ಗಾಂಜಾ ಗುಂಗಿನಲ್ಲಿ ತೇಲಾಡಿದ ಮಹೇಶ!

Bomb attack there - building collapse here None of this is true.. Wartime drills!
ಸ್ಥಳೀಯ

ಅಲ್ಲಿ ಬಾಂಬ್ ದಾಳಿ – ಇಲ್ಲಿ ಕಟ್ಟಡ ಕುಸಿತ: ಇದ್ಯಾವುದು ನಿಜವಲ್ಲ.. ಯುದ್ಧಕಾಲದ ಸಮರಾಭ್ಯಾಸ!

Hundreds of houses destroyed for cheap liquor: Kamaripet Sarai fights with Goan liquor!
ಸ್ಥಳೀಯ

ಮದ್ಯ ಮಾರಾಟದ ಒಡತಿ.. ಈ ಮಹಿಳಾ ಮಾರಾಟಗಾರ್ತಿ!

Next Post
Selfie craze during jogging Additional District Magistrate warns those in danger!

ಜೋಗದ ಅಡಿ ಸೆಲ್ಪಿ ಹುಚ್ಚು: ಅಪಾಯಕ್ಕೆ ಸಿಲುಕಿದವರಿಗೆ ಅಪರ ಜಿಲ್ಲಾಧಿಕಾರಿಗಳ ಪಾಠ!

https://www.safestarsouharda.com/ https://www.safestarsouharda.com/ https://www.safestarsouharda.com/
ADVERTISEMENT
Srinews

Publisher & Printer:
Chinthana Chiranthana
Chandguli, Yellapur
RN: ukk-s15-2014-15

contact us:
email: ukskofc@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

- Select Visibility -

    You cannot copy content of this page

    No Result
    View All Result
    • ಲೇಖನ
    • ವಾಣಿಜ್ಯ
    • ಸ್ಥಳೀಯ
    • ರಾಜ್ಯ
    • ದೇಶ – ವಿದೇಶ
    • ರಾಜಕೀಯ
    • ಸಿನೆಮಾ
    • ವಿಡಿಯೋ

    © 2025 JNews - Premium WordPress news & magazine theme by Jegtheme.

    ನಿಮ್ಮ ಸಹಾಯಕ್ಕೆ ನಾನಿದ್ದೇನೆ!