ಕೊಡ್ಲಗದ್ದೆ ಬಳಿಯ ಪಾರ್ವತಿ ಡಾಬಾದ ಮೇಲೆ ಯಲ್ಲಾಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ದಾಸ್ತಾನು ಮಾಡಿದ್ದ ಬಗೆ ಬಗೆಯ ಮದ್ಯಗಳು ಸಿಕ್ಕಿವೆ.
ಕೇರಳದ ಸತೀಶಕುಮಾರ ಮಣಪಟ್ಟಿ ಎಂಬಾತ ಕೊಡ್ಲಗದ್ದೆಯಲ್ಲಿ ಪಾರ್ವತಿ ಎಂಬ ಹೊಟೇಲ್ ನಡೆಸುತ್ತಿದ್ದು, ಅಲ್ಲಿ ರಾಜಾರೋಷವಾಗಿ ಸರಾಯಿ ವ್ಯಾಪಾರ ಮಾಡುತ್ತಿದ್ದರು. ಫೆ 12ರ ನಸುಕಿನ 4 ಗಂಟೆಗೆ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ ಆ ಹೊಟೇಲ್ ಮೇಲೆ ದಾಳಿ ಮಾಡಿದರು. ಆಗ, ಅಲ್ಲಿ 7 ಬಗೆಯ ಮದ್ಯದ ಪೌಚು ಹಾಗೂ ಬಾಟಲಿಗಳು ಕಾಣಿಸಿದವು.
ಈ ಮದ್ಯ ಮಾರಾಟಕ್ಕೆ ಪಡೆದ ಅನುಮತಿ ಪತ್ರ ತೋರಿಸುವಂತೆ ಪೊಲೀಸರು ಕೇಳಿದರು. ಆಗ, ಸತೀಶಕುಮಾರ ಮಣಪಟ್ಟಿ ಅನುಪತಿ ಇಲ್ಲದಿರುವ ಬಗ್ಗೆ ಒಪ್ಪಿಕೊಂಡರು. ಒಟ್ಟು 34320ರೂ ಮೌಲ್ಯದ ಸರಾಯಿಯನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.