6
  • Latest
ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದ ಸಾಮಾಜಿಕ ಸಂಸ್ಥೆ

ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದ ಸಾಮಾಜಿಕ ಸಂಸ್ಥೆ

ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ಪೋ: ಹಯಗ್ರೀವ ಸಿನಿಮಾ ನಾಯಕ ಧನ್ವೀರ್, ನಾಯಕಿ ಸಂಜನಾ ಭಾಗಿ

ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ಪೋ: ಹಯಗ್ರೀವ ಸಿನಿಮಾ ನಾಯಕ ಧನ್ವೀರ್, ನಾಯಕಿ ಸಂಜನಾ ಭಾಗಿ

ADVERTISEMENT
  • Home
Friday, March 27, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

AchyutKumar by AchyutKumar
in ದೇಶ - ವಿದೇಶ
advt advt advt
ADVERTISEMENT

ಬೆಂಗಳೂರು, ಮಾರ್ಚ್ 24, 2026 – ಬೆಂಗಳೂರಿನ ಯಲಹಂಕದಲ್ಲಿರುವ ವಿಸ್ತಾರವಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್‌ ಪಿ ಎಫ್) ಆವರಣದಲ್ಲಿ ಮೂರು ಎಕರೆ ವಿಸ್ತೀರ್ಣದ ನೂತನ ಕೆರೆ ನಿರ್ಮಿಸಲಾಗಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಪಾಲುದಾರರ ನೇತೃತ್ವದ ಮೂರು ತಿಂಗಳ ಯೋಜನೆ ಈಗ ಸಂಪೂರ್ಣಗೊಂಡಿದೆ.
ಆಟೋಮೊಟಿವ್ ತಂತ್ರಜ್ಞಾನದಲ್ಲಿ, ಮುಂಚೂಣಿಯಲ್ಲಿರುವ ಟೆಕಿಯಾನ್ ಸಂಸ್ಥೆ ಮತ್ತು ಬ್ಲೂ ಡಾಟ್ ಪ್ರತಿಷ್ಠಾನದ ನೇತೃತ್ವದಲ್ಲಿ, ಹಾಗೂ ಇತರೆ ಕಂಪನಿಗಳ ಸಹಭಾಗಿತ್ವದೊಂದಿಗೆ, ಒಂದು ಕಾಲದಲ್ಲಿ ಕೆಸರು ಮತ್ತು ಮಣ್ಣಿನಿಂದ ಹೂಳು ತುಂಬಿದ್ದ ತೀವ್ರ ಹದಗೆಟ್ಟ ಪರಿಸ್ಥಿತಿಯ ಚಿಕ್ಕ ಕೆರೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಸ್ಥಳ ಈಗ ಆರಂಭದಿಂದಲೇ ಅಚ್ಚುಕಟ್ಟಾಗಿ ವಿನ್ಯಾಸಗೊಂಡ ಸಮೃದ್ಧ ಪರಿಸರ ವ್ಯವಸ್ಥೆ ಹೊಂದಿದೆ. “ಈ ಸಹಭಾಗಿತ್ವದ ಕಾರ್ಯದಿಂದ ನಮ್ಮ ಯಲಹಂಕ ಸಿ ಆರ್‌ ಪಿ ಎಫ್ ಆವರಣದಲ್ಲಿ ಮೂರು ಏಕರೆ ವ್ಯಾಪ್ತಿಯಲ್ಲಿ ಜೀವಂತ ಕೆರೆಯೊಂದು ನಿರ್ಮಾಣವಾಗಿದೆ, ಇದು ಜೈವಿಕ ವೈವಿಧ್ಯತೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಿದೆ,” ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ ಉಪ ಮಹಾನಿರೀಕ್ಷಕರಾದ ಪದ್ಮ ಕುಮಾರ್ ಹೇಳಿದರು.
ಈ ಯೋಜನೆಯು ದೀರ್ಘಕಾಲದ ಸ್ಥಿರತೆಯ ವೈಜ್ಞಾನಿಕ ಕ್ರಮಗಳನ್ನು ಒಳಗೊಂಡಿದೆ, ಉದಾಹರಣೆಗೆ ನಿಶ್ಚಿತ ಆಳ ಮತ್ತು ನೀರಿನ ಸಾಮರ್ಥ್ಯ ಹೆಚ್ಚಿಸಲು ಕೆಸರನ್ನು ತೆಗೆಯುವುದು, ಮಳೆ ನೀರನ್ನು ಗರಿಷ್ಠವಾಗಿ ಸಂಗ್ರಹಿಸಲು ಕುಸಿತ ಪ್ರದೇಶದ ಸುಧಾರಣೆಗಳನ್ನು ಮಾಡುವುದು. ಪಕ್ಷಿಗಳು ಹಾಗೂ ವನ್ಯಜೀವಿಗಳಿಗೆ ಸಹಾಯ ಮಾಡಲು ಸ್ಥಳೀಯ ಸಸ್ಯಗಳನ್ನು ನೆಡಲಾಯಿತು. “ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಹೊಸ ವಾಸಸ್ಥಾನವಾಗಲು ನಾವು ವೈಜ್ಞಾನಿಕವಾಗಿ ಈ ಕೆರೆಯನ್ನು ನಿರ್ಮಿಸಿದ್ದೇವೆ, ಪರಿಸರ ಸಮತೋಲನ ಕಾಪಾಡಲು ನಮ್ಮ ಪ್ರಾಥಮಿಕ ಗಮನ ಸಂಪೂರ್ಣ ಸ್ಥಳೀಯ ಸಸ್ಯಗಳ ಮೇಲೆ ಇರಿಸಿದೆ.” ಎಂದು ಬ್ಲೂಡಾಟ್‌ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ನಿರ್ದೇಶಕ ಹರ್ಷ ತೇಜ್ ಹೇಳಿದರು.

Advertisement. Scroll to continue reading.

ಈ ಯೋಜನೆ ಟೆಕಿಯಾನ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯ ವಿಜಯನ್ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಬಿನು ಮೆಥ್ಯೂ ನೇತೃತ್ವದಲ್ಲಿ ನಡೆದ ಗಿಡ ನೆಡುವ ಕಾರ್ಯದಿಂದ ಆಚರಿಸಲಾಯಿತು. ಪರಿಸರಬದ್ಧತೆಯ ಭಾಗವಾಗಿ, ಟೆಕಿಯಾನ್ ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಒಂದೊಂದು ಕೆರೆಯನ್ನು ಜೀರ್ಣೋದ್ಧಾರ ಮಾಡುವ ಉದ್ದೇಶಿಸಿದೆ. “ಕಳೆದ 4 ವರ್ಷಗಳಲ್ಲಿ, ನಾವು ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಆರು ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ,” ಎಂದು ಟೆಕಿಯಾನ್‌ ಸಂಸ್ಥೆಯ ಹಿರಿಯ ನಿರ್ದೇಶಕ ಅರವಿಂದ ಗೌಡ ಹೇಳಿದರು.
ನೈಸರ್ಗಿಕ ಜಲಮೂಲಗಳು ತೀವ್ರ ಒತ್ತಡದಲ್ಲಿರುವ ನಗರ ಪ್ರದೇಶಗಳಲ್ಲಿ ಇಂತಹ ಯೋಜನೆಗಳು ಅತ್ಯಂತ ಮುಖ್ಯವೆಂದು ಗಮನಿಸಿದ ಸಿ ಆರ್‌ ಪಿ ಎಫ್ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಕೆರೆ ಮುಂಬರುವ ಮಳೆಗಾಲದಲ್ಲಿ ಹರಿಯುವ ನೀರನ್ನು ಸಂಗ್ರಹಿಸಲು ಈಗ ಸಜ್ಜಾಗಿದೆ.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.