6
  • Latest
Yakshagana Artist Series

ಯಕ್ಷಶ್ರೀ: ನಾಲ್ಕು ರೂಪಾಯಿಗೆ 34 ವರ್ಷ ದುಡಿದ ಕಲಾವಿದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ನಾಲ್ಕು ರೂಪಾಯಿಗೆ 34 ವರ್ಷ ದುಡಿದ ಕಲಾವಿದ!

AchyutKumar by AchyutKumar
September 4, 2024
in ಲೇಖನ
Yakshagana Artist Series
advt advt advt
ADVERTISEMENT

ಕಲೆಯಲ್ಲಿ ಆಸಕ್ತಿ-ಪರಂಪರೆಯ ಹಿನ್ನೆಲೆಯಿದ್ದು, ಮೇಳದ ತಿರುಗಾಟಕ್ಕೆ ಅಗತ್ಯವಿರುವಷ್ಟು ಅಭ್ಯಾಸ ಮಾಡಿಯೂ ಸ್ಥಳೀಯವಾಗಿಯೇ ಕಲಾ ಸೇವೆ ಮಾಡಿಕೊಂಡು ಮಾದರಿಯಾದವರು ತೇಲಂಗಾರ ಸಮೀಪದ ಮಾನಿಮೂಲೆಯ ವಿಶ್ವೇಶ್ವರ ಗಾಂವ್ಕರ.

ವಜ್ರಳ್ಳಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಓದಿದ ಅವರು ತಂದೆ ತಮ್ಮಯ್ಯ ಗಾಂವ್ಕರ ಯಕ್ಷಗಾನದ ಭಾಗವತರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ದೊಡ್ಡಪ್ಪ ರಾಮಕೃಷ್ಣ ಗಾಂವ್ಕರ ಅರ್ಥಧಾರಿಯಾಗಿ ಪ್ರಸಿದ್ಧರಾಗಿದ್ದರು. ಇದರಿಂದ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಯಿತು. ಮನೆತನದ ಕಲಾ ಸೇವೆಯ ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕೆಂಬ ಉದ್ದೇಶ ಅವರದ್ದಾಗಿತ್ತು.

ADVERTISEMENT
ADVERTISEMENT

ಮಾಧವ ಗಾಂವ್ಕರ ಕಂಚಿಮನೆ, ವಿಶ್ವನಾಥ ಹೆಗಡೆ ಕಲ್ಮನೆ ಅವರಲ್ಲಿ ಮದ್ದಲೆವಾದನ ಅಭ್ಯಾಸ ಮಾಡಿದರು. 20ನೇ ವಯಸ್ಸಿನಲ್ಲಿ ತಂದೆ ಹಾಗೂ ದೊಡ್ಡಪ್ಪನೊಂದಿಗೆ ಸ್ಥಳೀಯ ಯಕ್ಷಗಾನ, ತಾಳಮದ್ದಲೆಗಳಲ್ಲಿ ಮದ್ದಲೆ ವಾದಕರಾಗಿ ಭಾಗವಹಿಸಲು ಆರಂಭಿಸಿದರು. ತೇಲಂಗಾರ, ವಜ್ರಳ್ಳಿ ಭಾಗದ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು.

Advertisement. Scroll to continue reading.

ಧೋರಣಗಿರಿ, ಶಿರಸಿ, ಕಾರವಾರ, ಅಂಕೋಲಾ, ಗುಂದ ಮೊದಲಾದ ಊರುಗಳಲ್ಲಿ ಅವರು ಆಟ-ಕೂಟಗಳಲ್ಲಿ ಭಾಗವಹಿಸಿದ್ದಾರೆ. `ರಾತ್ರಿಯಿಂದ ಬೆಳಗಿನವರೆಗೆ ಮದ್ದಲೆವಾದನ ಮಾಡಿದರೆ ಮೂರುವರೆಯಿಂದ ನಾಲ್ಕು ರೂ ಸಂಬಳ ಸಿಗುತ್ತಿತ್ತು. ಬಸ್, ಲಾರಿಯನ್ನು ಹತ್ತಿ ಅಥವಾ ನಡೆದುಕೊಂಡು ಕಾರ್ಯಕ್ರಮದ ಸ್ಥಳಕ್ಕೆ ತಲುಪಬೇಕಿತ್ತು. ಆದರೂ ಕಲೆಯ ಮೇಲಿನ ಆಸಕ್ತಿ, ಪ್ರೀತಿಯ ಮುಂದೆ ಆಯಾಸ, ಪ್ರಯಾಸಗಳೆಲ್ಲ ನಗಣ್ಯವಾಗಿತ್ತು’ ಎಂದು ಆ ದಿನಗಳನ್ನು ಅವರು ನೆನಪಿಸಿಕೊಂಡರು.

ಗಾoವ್ಕರ ಅವರ ಮದ್ದಲೆವಾದನದ ಪ್ರತಿಭೆಯನ್ನು ಕಂಡು ಅನೇಕ ಹಿತೈಷಿಗಳು, ಹಿರಿಯರು ಮೇಳಕ್ಕೆ ಹೋಗುವಂತೆ ಒತ್ತಾಯಿಸಿದ್ದರು. ಆದರೆ ಆರೋಗ್ಯದ ಸಮಸ್ಯೆ, ಮೇಳದ ತಿರುಗಾಟದ ಬವಣೆ ಬೇಡ ಎಂದು ಅಲ್ಲಿಂದ ದೂರ ಉಳಿದರು. ಆಗಿನ ಕಾಲದ ಪ್ರಸಿದ್ಧ ಕಲಾವಿದರಾದ ರಾಮಚಂದ್ರ ಭಾಗ್ವತ ಕವಾಳೆ, ಮಹಾಬಲೇಶ್ವರ ಭಾಗ್ವತ, ಹರಿಮನೆ ಕೃಷ್ಣ ಭಾಗವತರು, ಬಾಳಂತಪಾಲ ನಾರಾಯಣ ಗಾಂವ್ಕರ, ಈಶ್ವರ ಗಾಂವ್ಕರ, ತಿಮ್ಮಣ್ಣ ಗಾಂವ್ಕರ ನೆಲೆಪಾಲ, ಗಣಪತಿ ಭಾಗ್ವತ ಕಳಚೆ ಮುಂತಾದ ಕಲಾವಿದರು ಕಲೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಿದ್ದನ್ನು ಈಗಲೂ ಪ್ರೀತಿಯಿಂದ ಅವರು ನೆನೆಯುತ್ತಾರೆ.

Advertisement. Scroll to continue reading.

15 ವರ್ಷಗಳ ಕಾಲ ಕಲಾ ಸೇವೆ ನಡೆಸಿದ ವಿಶ್ವೇಶ್ವರ ಗಾಂವ್ಕರ ನಂತರ ಕೌಟುಂಬಿಕ ಜವಾಬ್ದಾರಿ ಹಾಗೂ ಆರೋಗ್ಯದ ಸಮಸ್ಯೆಯಿಂದ ಕಲೆಯಿಂದ ದೂರ ಸರಿಯುವಂತಾಯಿತು. ವಿಶ್ವೇಶ್ವರ ಗಾಂವ್ಕರ ಅವರು ಕಲಾ ಸೇವೆಯಿಂದ ದೂರ ಸರಿದು 34 ವರ್ಷಗಳೇ ಕಳೆದಿವೆ. ಇಂದಿಗೂ ಕಲೆ, ಕಲಾವಿದರ ಮೇಲೆ ಅಪಾರ ಅಭಿಮಾನ, ಆಸಕ್ತಿ ಹೊಂದಿದ್ದಾರೆ. ಸುತ್ತಮುತ್ತ ನಡೆಯುವ ಯಕ್ಷಗಾನ, ತಾಳಮದ್ದಲೆಗಳನ್ನು ನೋಡಿ, ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ.

– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
ADVERTISEMENT
Previous Post

ಅರಣ್ಯ ಗುತ್ತಿಗೆಯಲ್ಲಿ ನಿಯಮ ಉಲ್ಲಂಘನೆ: ಪರಿಶಿಷ್ಟ ಸಮುದಾಯದವರಿಗೆ ಅನ್ಯಾಯ

Next Post

ಪುರಸ್ಕಾರಕ್ಕೂ ಬೇಕು ರಾಜಕೀಯ ಲಾಭಿ: ಅರ್ಜಿ ಹಾಕಿ ಅಲೆದಾಡಿದವರಿಗೆ ಮಾತ್ರ ಶಿಕ್ಷಕ ಪ್ರಶಸ್ತಿ!

Next Post

ಪುರಸ್ಕಾರಕ್ಕೂ ಬೇಕು ರಾಜಕೀಯ ಲಾಭಿ: ಅರ್ಜಿ ಹಾಕಿ ಅಲೆದಾಡಿದವರಿಗೆ ಮಾತ್ರ ಶಿಕ್ಷಕ ಪ್ರಶಸ್ತಿ!

ಸದ್ಯಕ್ಕೆ ಇಲ್ಲ ಕೊರೊನಾ ಆತಂಕ: ಸರ್ಕಾರದಿಂದಲೇ ಮಾನವ ಸರಪಳಿ ನಿರ್ಮಾಣಕ್ಕೆ ಕರೆ!

ಹುಲಗೋಡು ಸರ್ಕಾರಿ ಶಾಲೆ: ಜಿಲ್ಲಾ ಮಟ್ಟದಲ್ಲಿಯೂ ಮಕ್ಕಳ ಸಾಧನೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.