ಕುಮಟಾ: ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಜಿಲ್ಲೆಗೆ ಬಂದ ಬೆಂಗಳೂರಿನ ಯುವತಿಯ ಉದ್ದಿಮೆಗೆ ಬೆಂಕಿ ಬಿದ್ದಿದೆ. ಎರಡು ತಿಂಗಳ ಹಿಂದೆ ಹೋಂ ಸ್ಟೇ ಶುರು ಮಾಡಿದ್ದ ಅವರ ಟೆಂಟ್ ಹೌಸ್’ಗಳಿಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದು, ದುಷ್ಕರ್ಮಿಗಳ ಕಾಟಕ್ಕೆ ಅವರು ನಲುಗಿದ್ದಾರೆ!
ಬೆಂಗಳೂರಿನ ಬನ್ನೆರುಘಟ್ಟ ನಿಸರ್ಗ ಲೇಔಟಿನ ರುತ್ವಿಕಾ ಸಿಂಗ್ ದುಬ್ಬಿನಸಸಿ ಬಳಿಯಿರುವ ಪತಂಗ ಬೀಚ್ ರೆಸಾರ್ಟ ಬಳಿ `ಬಿಂಬಾ ಗ್ಲೋಂಪಿoಗ್ ರಿಟ್ರೀಟ್’ ಎಂಬ ಹೋಂ ಸ್ಟೇ ನಡೆಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಅವರು ತಮ್ಮ ಉದ್ದಿಮೆ ಶುರು ಮಾಡಿದ್ದರು. ಇದನ್ನು ಸಹಿಸದ ಕಿಡಿಗೇಡಿಗಳು ಅಕ್ಟೋಬರ್ 1ರಂದು ಟೆಂಟ್’ವೊoದನ್ನು ಹರಿದಿದ್ದಾರೆ. ಇನ್ನೊಂದು ಟೆಂಟ್’ಗೆ ಬೆಂಕಿ ಹಚ್ಚಿದ್ದಾರೆ.
ಇದರಿಂದ ಹೊಸದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ರುತ್ವಿಕಾ ಅವರಿಗೆ 2. 40ಲಕ್ಷ ರೂ ನಷ್ಟವಾಗಿದೆ. ಅಭಿಜಿತ್ ಹೊನ್ನಪ್ಪ ನಾಯಕ ಈ ಕೃತ್ಯ ಎಸಗಿರುವ ಅನುಮಾನವಿರುವುದಾಗಿ ರುತ್ವಿಕಾ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.




