6
  • Latest

ಗ್ರಾಮಸ್ಥರ ಪ್ರತಿಷ್ಠೆಗೆ ಬಲಿಯಾದ ಬೈಲಂದೂರು: ಪ್ರತ್ಯೇಕ ಶಾಲೆಗೆ ಪಟ್ಟು ಹಿಡಿದ ಪಾಲಕರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗ್ರಾಮಸ್ಥರ ಪ್ರತಿಷ್ಠೆಗೆ ಬಲಿಯಾದ ಬೈಲಂದೂರು: ಪ್ರತ್ಯೇಕ ಶಾಲೆಗೆ ಪಟ್ಟು ಹಿಡಿದ ಪಾಲಕರು!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಪ್ರತ್ಯೇಕ ಜಿಲ್ಲೆ, ಪ್ರತ್ಯೇಕ ರಾಜ್ಯದ ಕೂಗಿನ ನಡುವೆ ಬೈಲಂದೂರಿನ ಶಾಲಾ ಮಕ್ಕಳು ಪ್ರತ್ಯೇಕ ಶಾಲೆಗೆ ಬೇಡಿಕೆ ಇಟ್ಟಿದ್ದಾರೆ. `ಪ್ರತ್ಯೇಕ ಶಾಲೆ ನೀಡುವವರೆಗೂ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪಾಲಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳಿನಿoದ ಬೈಲಂದೂರು ಶಾಲೆಯ 30ರಷ್ಟು ಅಧಿಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ!

ADVERTISEMENT

ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಬೈಲಂದೂರು ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಈ ಪೈಕಿ 30 ಮಕ್ಕಳ ಪಾಲಕರು ಪ್ರತ್ಯೇಕ ಶಾಲೆಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿನಿoದ ಇಲ್ಲಿನ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಹಾಗೂ ಪೊಲೀಸರು ಊರಿಗೆ ತೆರಳಿ ಮನವರಿಕೆ ಮಾಡಿದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಲ್ಲ.

ಅಧ್ಯಕ್ಷ ಸ್ಥಾನದ ಹಪಾಹಪಿ!
ಬೈಲಂದೂರು ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಮೂಲಭೂತ ಸೌಕರ್ಯಕ್ಕೆ ಸಹ ಅಡೆತಡೆಗಳಿಲ್ಲ. ಅದಾಗಿಯೂ 30 ಪಾಲಕರು ಪ್ರತ್ಯೇಕ ಶಾಲೆಗೆ ಬೇಡಿಕೆ ಇಡುತ್ತಿರುವುದರ ಹಿಂದೆ `ಪ್ರತಿಷ್ಠೆ’ಯ ಪ್ರಶ್ನೆ ಕಾಣಿಸುತ್ತಿದೆ. `ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನವನ್ನು ನಮಗೆ ಕೊಡಬೇಕು’ ಎಂದು ಒಂದು ಗುಂಪಿನವರು ಹೋರಾಟ ನಡೆಸಿದ್ದು, ಆ ಹೋರಾಟಕ್ಕೆ ಜಯ ಸಿಗದ ಕಾರಣ ಮಕ್ಕಳನ್ನು ಅವರು ಆ ಶಾಲೆಗೆ ಕಳುಹಿಸುತ್ತಿಲ್ಲ ಎಂಬುದು ಈವರೆಗೆ ಸಿಕ್ಕ ಮಾಹಿತಿ.

Advertisement. Scroll to continue reading.

ಈ ಶಾಲೆಗೆ ಬರುವ ಅನೇಕ ಮಕ್ಕಳು ಹಿಂದುಳಿದ ಸಮುದಾಯದವರು. ಪಾಲಕರಲ್ಲಿಯೂ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡವರೇ ಅಧಿಕ. ಅದರಲ್ಲಿಯೂ ವರ್ಷದ ಮೂರು ತಿಂಗಳು ಕೆಲ ಪಾಲಕರು ಬೇರೆ ಕಡೆ ದುಡಿಯಲು ಹೋಗುತ್ತಾರೆ. ಆ ವೇಳೆ ಮಕ್ಕಳು ಸಹ ಅವರ ಜೊತೆ ಊರು ಬಿಡುತ್ತಾರೆ. ನಡುವೆ ಸಿಗುವ ಶೈಕ್ಷಣಿಕ ದಿನಗಳಲ್ಲಿ ಕಲಿತ ಪಾಠ ಮಾತ್ರ ಶಾಶ್ವತ. ಆದರೆ, ಇದೀಗ ಆ ಶಿಕ್ಷಣಕ್ಕೆ ಸಹ ಅಡ್ಡಿ ಉಂಟಾಗಿದೆ.

Advertisement. Scroll to continue reading.

ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು ಶಿಕ್ಷಣಾಧಿಕಾರಿಗಳ ಸಂಕಷ್ಟಕ್ಕೂ ಕಾರಣವಾಗಿದೆ. ಎರಡು ಗುಂಪುಗಳನ್ನು ಒಂದುಗೂಡಿಸುವ ಎಲ್ಲಾ ಪ್ರಯತ್ನವೂ ನಡೆದಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರ ಸಮ್ಮುಖದಲ್ಲಿ ಮಾತುಕಥೆ ನಡೆದರೂ ಶಾಲೆ ವಿಷಯದಲ್ಲಿ ಸಹಬಾಳ್ವೆ ನಡೆಸಲು ಕೆಲವರು ಒಪ್ಪುತ್ತಿಲ್ಲ. ಹೀಗಾಗಿ ಪಾಲಕರ ಪ್ರತಿಷ್ಠೆಯಿಂದ ಮಕ್ಕಳ ಶೈಕ್ಷಣಿಕ ಬದುಕಿಗೆ ದೊಡ್ಡ ಸಮಸ್ಯೆಯಾಗಿದೆ.

`ಪ್ರತ್ಯೇಕ ಶಾಲೆಗೆ ಬೇಡಿಕೆಯಿಟ್ಟು ಮಕ್ಕಳು ಶಾಲೆಗೆ ಬಾರದಿರುವುದು ಸತ್ಯ. 6-7ನೇ ತರಗತಿಯ ಕೆಲ ಮಕ್ಕಳು ಹೊಸಳ್ಳಿ ಶಾಲೆಗೆ ಸೇರಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವ ಮುನ್ನ ಹೊಸ ಶಾಲೆಗೆ ಬೇಡಿಕೆ ಇಟ್ಟಿರುವುದು ಸಮಸ್ಯೆಯಾಗಿದೆ. ಅದಾಗಿಯೂ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂಬ ದೃಷ್ಠಿಯಿಂದ ಅಲ್ಲಿನವರ ಬೇಡಿಕೆಗೆ ತಕ್ಕಂತೆ ಹೊಸ ಶಾಲೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ’ ಎಂದು ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಪ್ರತಿಕ್ರಿಯಿಸಿದರು.

Previous Post

ಬೈಕಿನಿಂದ ಬಿದ್ದ ಅಪ್ಪ-ಮಗನಿಗೆ ಗಾಯ: ದಾರಿಹೋಕನಿಂದ ದೂರು!

Next Post

ಮಹಿಳೆಯನ್ನು ಬಲಿ ಪಡೆದ ವಿಷಜಂತು!

Next Post

ಮಹಿಳೆಯನ್ನು ಬಲಿ ಪಡೆದ ವಿಷಜಂತು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ