6
  • Latest

ಕದ್ದಿದ್ದು 77 ಸಾವಿರ.. ಸಿಕ್ಕಿದ್ದು 25 ಸಾವಿರ : ATM ಕಾರ್ಡ ಎಗರಿಸೋದೇ ಈತನ ಬಿಜಿನೆಸ್ಸು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕದ್ದಿದ್ದು 77 ಸಾವಿರ.. ಸಿಕ್ಕಿದ್ದು 25 ಸಾವಿರ : ATM ಕಾರ್ಡ ಎಗರಿಸೋದೇ ಈತನ ಬಿಜಿನೆಸ್ಸು!

AchyutKumar by AchyutKumar
in ರಾಜ್ಯ

ಅಂಕೋಲಾ: ಎಟಿಎಂ ಕೇಂದ್ರಕ್ಕೆ ಬರುವವರ ಪಾಸ್‌ವರ್ಡ ಕದ್ದು, ಕಾರ್ಡ ಬದಲಿಸಿ ಹಣ ಎಗರಿಸುತ್ತಿದ್ದ ವಂಚಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣವನ್ನು ಜಪ್ತು ಮಾಡಿದ್ದಾರೆ.

ADVERTISEMENT

ಸೆ 22ರಂದು ಸಕಲಬೇಣದ ಸುರೇಖಾ ಸುಧೀರ ನಾಯ್ಕ ಅವರು ಅಂಕೋಲಾದ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹೋದಾಗ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಎದುರಾಗಿದ್ದ. ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಆತ ಸುರೇಖಾ ಅವರ ಎಟಿಎಂ ಪಾಸ್‌ವರ್ಡ’ನ್ನು ನೋಡಿಕೊಂಡಿದ್ದ. ಅದಾದ ನಂತರ ತನ್ನ ಬಳಿಯಿದ್ದ ಎಟಿಎಂ ಕಾರ್ಡನ್ನು ಅವರ ಕೈಗಿರಿಸಿ ಅವರ ಎಟಿಎಂ ಕಾರ್ಡನ್ನು ಜೇಬಿಗೆ ಇಳಿಸಿದ್ದ. ಸುರೇಖಾ ಅವರು ಅಲ್ಲಿಂದ ಹೊರಟ ನಂತರ ಕದ್ದ ಎಟಿಎಂ ಕಾರ್ಡ ಬಳಸಿ 40 ಸಾವಿರ ರೂಪಾಯಿ ಎಗರಿಸಿದ್ದ. ಅಪರಿಚಿತನಿಂದ ಅನ್ಯಾಯವಾದ ಬಗ್ಗೆ ಸುರೇಖಾ ಅವರು ಸೆ 22ರಂದು ಪೊಲೀಸ್ ದೂರು ದಾಖಲಿಸಿದ್ದರು.

ನ 8ರಂದು ಸಹ ಅಂಕೋಲಾಗೆ ಬಂದಿದ್ದ ಆತ ಅದೇ ಎಸ್‌ಬಿಐ ಎಟಿಎಂ ಕೇಂದ್ರದ ಎದುರು ಉಮೇಶ ವಾಸು ಗೌಡರನ್ನು ವಂಚಿಸಿದ್ದ. ಅವರಿಗೂ ಸಹಾಯ ಮಾಡುವ ನೆಪದಲ್ಲಿ ಕಾರ್ಡ ಬದಲಿಸಿ ನಂತರ ಕುಮಟಾಗೆ ತೆರಳಿ ಅವರ ಖಾತೆಯಲ್ಲಿದ್ದ 37 ಸಾವಿರ ರೂ ಹಣ ಪಡೆದಿದ್ದ. ಈ ಬಗ್ಗೆಯೂ ದೂರು ದಾಖಲಾದ ನಂತರ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ನೇತ್ರತ್ವದಲ್ಲಿ ಕಳ್ಳನ ಹುಡುಕಾಟ ನಡೆದಿದ್ದು, ಡಿವೈಎಸ್‌ಪಿ ಗಿರೀಶ ಎಸ್ ವಿ ಹಲವು ಆಯಾಮದಲ್ಲಿ ತನಿಖೆ ನಡೆಸಿದರು. ಸಿಪಿಆಯ್ ಚಂದ್ರಶೇಖರ ಮಠಪತಿ, ಪಿಎಸ್‌ಐ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೇಪ್ಪನವರ್ ಸೇರಿ ಚರ್ಚಿಸಿದಾಗ ಅರುಣಕುಮಾರ್ ಎಂಬಾತನ ಮೇಲೆ ಅನುಮಾನ ಮೂಡಿದ್ದವು.

Advertisement. Scroll to continue reading.

ಪೊಲೀಸ್ ಸಿಬ್ಬಂದಿ ಮಹೇದೇವ ಸಿದ್ದಿ, ಅಂಬರೀಶ ನಾಯ್ಕ, ಆಸಿಪ್ ಆರ್ ಕೆ, ಮನೋಜ ಡಿ, ಶ್ರೀಕಾಂತ ಕಟಬರ, ರಯಿಸ ಭಗವಾನ್ ಸೇರಿ ಸಿಡಿಆರ್ ಸಿಬ್ಬಂದಿ ಉದಯ ಗುನಗಾ ಅವರ ನೆರವು ಯಾಚಿಸಿದರು. ವಿವಿಧ ತಂತ್ರಜ್ಞಾನಗಳನ್ನು ಬಳಸಿ ಆತನ ಹುಡುಕಾಟ ನಡೆಸಿದಾಗ ತುಮಕೂರಿನಲ್ಲಿ ಅರುಣಕುಮಾರ ಎಂಬಾತ ಸಿಕ್ಕಿಬಿದ್ದಿದ್ದ. ಕೂಡಲೇ ಅರುಣಕುಮಾರ ಮಲ್ಲೇಶಪ್ಪ ಮಾದೇನಳ್ಳಿಯನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣದ ಜೊತೆ ಎಟಿಎಂ ಕಾರ್ಡು, ಮೊಬೈಲನ್ನು ಜಪ್ತು ಮಾಡಿದರು.

Advertisement. Scroll to continue reading.

ATM ಕೇಂದ್ರದೊಳಗೆ ಅಪರಿಚಿತರ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ನೀವು ಜಾಗೃತರಾಗಿರಿ

Previous Post

ಸವಣಗೇರಿ ಮಕ್ಕಳ ಸಾಧನೆ: ಶಿಕ್ಷಕರ ಸಂತಸ

Next Post

ಶಿರಸಿ | ಹಿಸ್ಸಾ ಪಂಚಾಯಿತಿಗೆ ಮುಹೂರ್ತ: ಪ್ರತ್ಯೇಕ ಜಿಲ್ಲೆಗಾಗಿ ಡೊಳ್ಳು ಕುಣಿತ!

Next Post

ಶಿರಸಿ | ಹಿಸ್ಸಾ ಪಂಚಾಯಿತಿಗೆ ಮುಹೂರ್ತ: ಪ್ರತ್ಯೇಕ ಜಿಲ್ಲೆಗಾಗಿ ಡೊಳ್ಳು ಕುಣಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ