ಯಲ್ಲಾಪುರ: ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಸವಣಗೇರಿ ಶಾಲೆಯ ಮಕ್ಕಳು ಅಲ್ಲಿಯೂ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ನ 16ರಂದು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಸವಣಗೇರಿ ಶಾಲೆಯ ಸನ್ನಿಧಿ ಗಣಪತಿ ಭಟ್ಟ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿರ್ಣಾಯಕರ ಮನಗೆದ್ದ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
ಧಾರ್ಮಿಕ ಪಠಣದಲ್ಲಿ ವಿಲೋಕ್ ವಿ ಭಟ್ಟ ದ್ವಿತೀಯ ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಸಾಕ್ಷಿತ್ ರವಿ ನಾಯ್ಕ ತೃತೀಯ ಬಹುಮಾನ ಪಡೆದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಮುಖ್ಯ ಶಿಕ್ಷಕ ಸಂಜೀವ್ ಕುಮಾರ್ ಹೊಸ್ಕೇರಿ, ಶಿಕ್ಷಕರಾದ ಗೀತಾ ಜಿ ನಾಯ್ಕ, ಪೂರ್ಣಿಮಾ ಡಿ ನಾಯ್ಕ, ಪವಿತ್ರಾ ಆಚಾರಿ, ಗೀತಾ ಪಟಗಾರ ಮಕ್ಕಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.




