6
  • Latest

ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!

AchyutKumar by AchyutKumar
in ಸ್ಥಳೀಯ

ಶಿರಸಿ: ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದಲ್ಲದೇ, ಆಕೆಯನ್ನು ಪರರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದ ಸುನೀಲ ಬೋವಿವಡ್ಡರ್’ಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವುದಕ್ಕಾಗಿ ಸರ್ಕಾರಿ ವಕೀಲೆ ತನಿಜಾ ಬಿ ಹೊಸಪಟ್ಟಣ ಅವರು 27 ಸಾಕ್ಷಿದಾರರ ವಿಚಾರಣೆ ನಡೆಸಿ, 55 ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ವಾದ ಮಂಡಿಸಿದ್ದರು.

ಬನವಾಸಿ ಕಪ್ಪೆಗುಡ್ಡೆಯ ಮಮತಾಜ್ ಬೇಗಂ (ಹೆಸರು ಬದಲಿಸಿದೆ) ಎಂಬಾತರನ್ನು ಸುನೀಲ ಬೋವಿವಡ್ಡರ್ ಪ್ರೀತಿಸುವ ನಾಟಕವಾಡಿದ್ದ. ಆಕೆ ಒಪ್ಪಿಗೆ ಸೂಚಿಸದೇ ಇದ್ದರೂ ಪದೇ ಪದೇ ಪೀಡಿಸುತ್ತಿದ್ದ. 2021ರ ಡಿಸೆಂಬರ್ 12ರಂದು ಆಕೆಯನ್ನು ಅರಣ್ಯ ಪ್ರದೇಶಕ್ಕೆ ಆಹ್ವಾನಿಸಿದ್ದ. ಅಲ್ಲಿಂದ ಮುಂದೆ ತನ್ನ ಬೈಕಿನಲ್ಲಿ ಅಕ್ಕಿ ಆಲೂರಿಗೆ ಕರೆದೊಯ್ದಿದ್ದ. ಅಕ್ಕಿ ಆಲೂರಿನಲ್ಲಿದ್ದ ಸರೋಜಿನಿ ಹಾಗೂ ಜಯರಾಮ ಹುರುಳಿ ಸೇರಿ ಆ ಬಾಲಕಿಯನ್ನು ಶಿಖಾರಿಪುರಕ್ಕೆ ಕಳುಹಿಸಿದ್ದರು.

ಶಿಖಾರಿಪುರದ ಅಮಟೆಕೊಪ್ಪದಲ್ಲಿ ಸುನೀಲ ಬೋವಿವಡ್ಡರ್’ನ ಸಂಬoಧಿಕರ ಮನೆಯಲ್ಲಿ ಬಾಲಕಿ ವಾಸವಾಗಿದ್ದು, ರಾತ್ರಿ ವೇಳೆ ಬಾಲಕಿ ಮೇಲೆ ಸುನೀಲ ಅತ್ಯಾಚಾರವೆಸಗಿದ್ದ. ಅದಾದ ಎರಡು ದಿನ ಬಿಟ್ಟು ಆಕೆಯನ್ನು ಅಕ್ಕಿ ಆಲೂರಿಗೆ ಕರೆತಂದು ಬಿಟ್ಟಿದ್ದ. ಅಲ್ಲಿದ್ದ ಸರೋಜಿನಿ ಹಾಗೂ ಜಯರಾಮ ಹುರುಳಿ ಸಂತ್ರಸ್ತ ಬಾಲಕಿಯನ್ನು ರೈಲಿನ ಮೂಲಕ ಗುಜರಾತಿಗೆ ಕಳುಹಿಸಲು ತಯಾರಿ ನಡೆಸಿದ್ದರು. ಬಾಲಕಿ ಕೈಗೆ ಕಾಸು ಕೊಟ್ಟು ಇಡೀ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದರು.

ಈ ಎಲ್ಲಾ ವಿಷಯದ ಬಗ್ಗೆ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಸುನೀಲ ಬೋವಿವಡ್ಡರ್’ಗೆ 20 ವರ್ಷ ಜೈಲಿನ ಜೊತೆ 1 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿ ಆದೇಶ ಹೊರಡಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ವರ್ಷ ಜೈಲು ಶಿಕ್ಷೆ ವಿಸ್ತರಿಸುವುದಾಗಿಯೂ ಎಚ್ಚರಿಸಿದೆ.

ShareSendTweetShare
Previous Post

ಖರೀದಿ ಆಸ್ತಿ | ಅಭಿವೃದ್ಧಿಗೆ ಹೋದವರಿಗೆ ಪೆಟ್ರೋಲ್ ಪ್ರೋಕ್ಷಣೆ!

Next Post

ಆ ಅಂಗವಿಕಲೆ ಅಪ್ರಾಪ್ತೆ: ಅದಾಗಿಯೂ ಕನಿಕರ ತೋರದ ವಿಕೃತ ಕಾಮಿಗೆ ಕಠಿಣ ಶಿಕ್ಷೆ!

Next Post

ಆ ಅಂಗವಿಕಲೆ ಅಪ್ರಾಪ್ತೆ: ಅದಾಗಿಯೂ ಕನಿಕರ ತೋರದ ವಿಕೃತ ಕಾಮಿಗೆ ಕಠಿಣ ಶಿಕ್ಷೆ!

ತಂದೆ ಕೊಂದ ಮಗನಿಗೆ 5 ವರ್ಷ ಜೈಲು!

ಕಂದಾಯ ಅತಿಕ್ರಮಣದಾರರಿಗೆ ಹಕ್ಕು ಪತ್ರ: ಇದು ರಾಜ್ಯವೇ ಖುಷಿ ಪಡುವ ಸುದ್ದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.