6
  • Latest

80 ವರ್ಷ ಕಳೆದರೂ ವೃತ್ತಿ ಬಿಟ್ಟಿಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

80 ವರ್ಷ ಕಳೆದರೂ ವೃತ್ತಿ ಬಿಟ್ಟಿಲ್ಲ!

ಪಾಠ ಮಾಡುವುದೇ ಇವರ ಕಾಯಕ | ಮಕ್ಕಳಿಗೂ ಅವರೆಂದರೆ ಅಚ್ಚುಮೆಚ್ಚು

AchyutKumar by AchyutKumar
in ಲೇಖನ

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮಂಜುನಾಥ ಭಟ್ಟ ಅವರು ನಿವೃತ್ತರಾಗಿ 22 ವರ್ಷ ಕಳೆದಿದೆ. ಇದೀಗ ಅವರಿಗೆ 80 ವರ್ಷ. ಆದರೂ, ಅವರು ಪಾಠ ಮಾಡುವುದನ್ನು ಬಿಟ್ಟಿಲ್ಲ.
ನಿತ್ಯ ಶಾಲೆಗೆ ತೆರಳಿ ಅವರು ಮಕ್ಕಳಿಗೆ ಪಾಠ ಹೇಳುತ್ತಾರೆ. ವಿವಿಧ ಆಟವನ್ನು ಆಡಿಸುತ್ತಾರೆ. ಕಥೆಯನ್ನು ಹೇಳುತ್ತಾರೆ. ಶಾಲೆಯಲ್ಲಿ ಕಾರ್ಯಕ್ರಮಗಳು ನಡೆದಾಗ ತಾವೇ ಸಿಹಿ ತಿಂಡಿ ಹಂಚುತ್ತಾರೆ. ಶಾಲಾ ವಾರ್ಷಿಕ ಉತ್ಸವಕ್ಕಾಗಿ ಮಕ್ಕಳಿಗೆ ನಾಟಕಗಳನ್ನು ಕಲಿಸುತ್ತಾರೆ. ಜೊತೆಗೆ ತಮ್ಮ ಜೀವನ ಅನುಭವ ಹಾಗೂ ಗಾದೆ ಮಾತುಗಳನ್ನು ಅರ್ಥಸಹಿತ ವಿವರಿಸುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಲ್ಲೆಮಕ್ಕಿ ಗ್ರಾಮದ ಸುತ್ತಲು ಜನ ಬಿಳಿ ಬಟ್ಟೆ ಧರಿಸಿ ಓಡಾಡುವ ಇವರನ್ನು ಕಂಡರೆ ಜನ ತಲೆಭಾಗಿ ನಮಸ್ಕರಿಸುತ್ತಾರೆ. ಇಡೀ ಊರಿನಲ್ಲಿ `ಗುರುಜಿ’ ಎಂದೇ ಕರೆಯಿಸಿಕೊಳ್ಳುವ ಇವರು ತಮ್ಮ ಸೇವೆಗೆ ಕಿಂಚಿತ್ತು ಹಣ ಪಡೆಯುತ್ತಿಲ್ಲ. ಯಾರಾದರೂ ಹಣ ನೀಡಲು ಬಂದರೂ ಅದನ್ನು ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸುವಂತೆ ಮನವಿ ಮಾಡುತ್ತಾರೆ. ಅವರು ಸುತ್ತಮುತ್ತಲ ಮಕ್ಕಳ ಪಾಲಿಗೆ ಆರಾಧ್ಯದೇವ. ಯಾವ ಮಕ್ಕಳಿಗೆ ಯಾವ ವಿಷಯದಲ್ಲಿ ಅನುಮಾನಗಳಿದ್ದರೂ ಇವರ ಬಳಿ ಬಂದು ಬಗೆಹರಿಸಿಕೊಳ್ಳುತ್ತಾರೆ. ಇವರಿಗೂ ಮಕ್ಕಳ ಕಂಡರೇ ಅಷ್ಟೇ ಅಚ್ಚುಮೆಚ್ಚು. ತಮಗೆ ಬರುವ ಪಿಂಚಣಿ ಹಣವನ್ನು ಸಹ ಅವರು ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸಿದ ಉದಾಹರಣೆಗಳಿವೆ.
ಶಿಕ್ಷಕನಾಗಬೇಕು ಎಂದು ಬಾಲ್ಯದಲ್ಲಿಯೇ ಕನಸು ಕಂಡಿದ್ದ ಅವರು 1961ರಲ್ಲಿ ನೆಚ್ಚಿನ ವೃತ್ತಿಯನ್ನು ಸೇರಿದರು. ನಾಡಿನ ಹಲವು ಶಾಲೆಗಳನ್ನು ಸುತ್ತಿ, ಅಲ್ಲಿನ ಮಕ್ಕಳಿಗೆಲ್ಲ ಪಾಠ ಮಾಡಿದರು. ಹೋಗಿ ಬಂದ ಕಡೆಗಳೆಲ್ಲವೂ ತಮ್ಮದೇ ಆದ ಗೌರವವನ್ನು ಅವರು ಕಾಪಾಡಿಕೊಂಡಿದ್ದಾರೆ. ಅವರು ಪಾಠ ಮಾಡಿದ ಊರಿನಲ್ಲಿರುವ ಮದ್ಯ ವಯಸ್ಕರು ಇಂದಗೂ ತಮ್ಮ ಗುರುಗಳನ್ನು ನೆನೆಯುತ್ತಾರೆ. ಕೊನೆಯದಾಗಿ 2002ರ ಸೆಪ್ಟೆಂಬರ್’ನಲ್ಲಿ ಸಿದ್ದಾಪುರದ ಬಿಳಿಗೋಡ ಶಾಲೆಯಲ್ಲಿ ಅವರು ನಿವೃತ್ತರಾದರು. ಆದರೂ ವೃತ್ತಿ ಮುಂದುವರೆಸಿದರು!
`ಮಕ್ಕಳ ಕಲಿಕೆಗಿಂತ ದೊಡ್ಡ ಸನ್ಮಾನ ನನಗೆ ಬೇರೆ ಇಲ್ಲ. ಅವರ ಸಾಧನೆಯಲ್ಲಿ ನಾನು ಖುಷಿ ಕಂಡಿದ್ದೇನೆ’ ಎನ್ನುವ ಅವರು ಕಾಲಿಗೆ ಚಪ್ಪಲಿ ಧರಿಸಲ್ಲ. ಓಡಾಡಲು ವಾಹನಗಳನ್ನು ಸಹ ಬಳಸಲ್ಲ.

ADVERTISEMENT

– ಅಚ್ಯುತಕುಮಾರ ಯಲ್ಲಾಪುರ

Advertisement. Scroll to continue reading.
Advertisement. Scroll to continue reading.
Previous Post

ಸಾತೊಡ್ಡಿಗೆ ಬಂದವ ಸಾವನಪ್ಪಿದ

Next Post

ಕಪ್ಪೆ ಹಿಡಿದರೆ ಮೂರು ವರ್ಷ ಜೈಲು

Next Post

ಕಪ್ಪೆ ಹಿಡಿದರೆ ಮೂರು ವರ್ಷ ಜೈಲು

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ