6
  • Latest

ಕಪ್ಪೆ ಹಿಡಿದರೆ ಮೂರು ವರ್ಷ ಜೈಲು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಪ್ಪೆ ಹಿಡಿದರೆ ಮೂರು ವರ್ಷ ಜೈಲು

ಅಕ್ರಮ ಸಾಗಾಟ ತಡೆಗೆ ಕೈ ಜೋಡಿಸಿ | ಅಪರೂಪದ ವನ್ಯಜೀವಿ ಸಂತತಿ ಉಳಿಸಿ

AchyutKumar by AchyutKumar
June 19, 2024
in ಲೇಖನ
advt advt advt
ADVERTISEMENT

ಪ್ರತಿ ವರ್ಷ ಮಳೆಗಾಲ ಶುರುವಾದಾಗ ಜಿಲ್ಲೆಯ ಅನೇಕ ಕಡೆಗಳಿಂದ ನೆರೆ ರಾಜ್ಯ ಗೋವಾಗೆ ಕಪ್ಪೆಗಳ ಅಕ್ರಮ ಸಾಗಾಟ ನಡೆಯುತ್ತದೆ. ಹೀಗೆ ಕಪ್ಪೆ ಹಿಡಿದು ಸಾಗಿಸುವಾಗ ಸಿಕ್ಕಿಬಿದ್ದವರಿಗೆ ಮೂರು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಲು ಅರಣ್ಯಾಧಿಕಾರಿಗಳಿಗೆ ಅವಕಾಶವಿದೆ.
ಹೀಗಾಗಿ ನಾನಾ ಭಾಗದ ಜನ `ಕಪ್ಪೆ ಬೋಜನ’ಕ್ಕಾಗಿ ಗೋವಾಗೆ ಬರುತ್ತಾರೆ. ಕಪ್ಪೆಗಳ ಅಕ್ರಮ ಸಾಗಾಟದಿಂದಾಗಿ ಭಾರತೀಯ ಬುಲ್‌ಫ್ರಾಗ್ ಮತ್ತು ಜೆರ್ಡನ್ಸ್ ಬುಲ್‌ಫ್ರಾಗ್ ಜಾತಿಯ ಕಪ್ಪೆಗಳು ಅಳಿವಿನ ಅಂಚಿನಲ್ಲಿದ್ದು, ಈ ವರ್ಷವೂ ಒಂದು ದಿನ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಒಂದಷ್ಟು ಅಮಾಯಕ ಕಪ್ಪೆಗಳನ್ನು ಬದುಕಿಸಿದ ಪುಣ್ಯ ದೊರೆಯುತ್ತದೆ.
ಇಲ್ಲಿನ ಮಲೆನಾಡು ಹಾಗೂ ಕರಾವಳಿಯಲ್ಲಿನ ಮಂಡೂಕಗಳನ್ನು ಹಳ್ಳಿಯ ಜನ ಹಿಡಿದು ಗೋವಾಗೆ ಸಾಗಿಸುತ್ತಾರೆ. ಸಾಮಾನ್ಯವಾಗಿ ಬಸ್, ಟೆಂಪೋಗಳಲ್ಲಿ ಇದರ ಸಾಗಾಟ ನಡೆಯುತ್ತದೆ. ಸಾವನಪ್ಪಿದ ಕಪ್ಪೆಗಳಿಗೆ ಯಾರೂ ಅಲ್ಲಿ ಕಾಸು ಕೊಡುವುದಿಲ್ಲ. ಹೀಗಾಗಿ ಜೀವಂತ ಕಪ್ಪೆಗಳನ್ನೇ ಸಾಗಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುವ ಕಾರಣ ಗಾಂಜಾ, ಅಫೀಮು ಜೊತೆ ಕಪ್ಪೆಗಳ ಖಾದ್ಯ ಅಲ್ಲಿ ಮಾರಾಟವಾಗುತ್ತದೆ. ಚೀನಾ ಹಾಗೂ ರಷ್ಯಾದ ಜನ ಜೀವಂತ ಕಪ್ಪೆಗಳಿಗೆ ಹಿಂಸೆ ನೀಡುವುದನ್ನು ಕಣ್ಣಾರೆ ನೋಡಿ, ನಂತರ ಅವುಗಳ ಖಾದ್ಯ ಸವಿಯಲು ಹೋಟೆಲ್ ಮಾಲಕರಿಗೆ ಎಷ್ಟು ಬೇಕಾದರೂ ಹಣ ಕೊಡುತ್ತಾರೆ.
ಸಾಮಾನ್ಯವಾಗಿ ಬುಲ್ ಫ್ರಾಗ್ ಎಂಬ ಪ್ರಬೇಧದ ದೊಡ್ಡ ಗಾತ್ರದ ಕಪ್ಪೆಗಳನ್ನು ಮಾಂಸ ಭಕ್ಷಣೆಗಾಗಿ ಉಪಯೋಗಿಸುತ್ತಾರೆ. ಈ ಕಪ್ಪೆಯು ಹೆಚ್ಚಾಗಿ ಕರಾವಳಿ ಭಾಗದ ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಮಲೆನಾಡು ಭಾಗದ ಜೋಗಗಳಲ್ಲಿ ಇವೆ. ಜೂನ್ ತಿಂಗಳ ಮೊದಲ ಮಳೆಹನಿಗೆ ಹೊಲಗದ್ದೆಯತ್ತ ಮುಖಮಾಡುವ ಈ ಕಪ್ಪೆಗಳು ಗಾತ್ರದಲ್ಲಿ ಬಲು ದೊಡ್ಡದಿರುತ್ತವೆ. ಇವು ಸುಮಾರು ನಾಲ್ಕು ವರ್ಷ ಬದುಕುತ್ತದೆ. ಜೂನ್ ತಿಂಗಳಲ್ಲಿ ಗಂಡು ಕಪ್ಪೆಯು ಹಳದಿ ಬಣ್ಣಕ್ಕೆ ತನ್ನ ದೇಹವನ್ನು ಪರಿವರ್ತಿಸಿಕೊಂಡು ಹೆಣ್ಣಿನೊಂದಿಗೆ ಮಿಲನ ಹೊಂದಿ ಸಂತಾನಾಭಿವೃದ್ಧಿ ಮಾಡುತ್ತವೆ.
ಈ ಸಮಯದಲ್ಲಿಯೇ ಈ ಕಪ್ಪೆಗಳನ್ನು ಅಕ್ರಮ ದಂಧೆಕೋರರು ಜೀವಂತ ಹಿಡಿದು ಬೇಡಿಕೆ ಇರುವ ಗೋವಾದ ಹೋಟಲ್’ಗಳಿಗೆ ಕಾಡಿನ ದಾರಿ ಮೂಲಕವೂ ಸಾಗಿಸುತ್ತಾರೆ. ಇನ್ನೂ ಅಕ್ರಮ ದಂದೆ ಕೋರರಿಗೆ ಕಪ್ಪೆಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆ ಸಿಗುತ್ತದೆ. ಜೀವಂತವಾಗಿಯೇ ತರುವ ಈ ಕಪ್ಪೆಗಳ ಹೆಚ್ಚು ಮಾಂಸವಿರುವ ಹಿಂಭಾಗದ ಕಾಲುಗಳನ್ನು ಮಾತ್ರ ತುಂಡರಿಸಿ ತೂಕ ಹಾಕಲಾಗುತ್ತದೆ. ಒಂದು ಕೆಜಿ ಮಾಂಸಕ್ಕಾಗಿ ಕನಿಷ್ಟ 200 ಕಪ್ಪೆಗಳ ಬಲಿ ಖಚಿತ.
ಇನ್ನೂ ಗೋವಾದಲ್ಲಿ ಬುಲ್ ಫ್ರಾಗ್ ಕಪ್ಪೆಗಳ ಹಿಂಭಾಗದ ಕಾಲುಗಳನ್ನು ಮಾತ್ರ ಸೂಪ್ ಹಾಗೂ ಫ್ರೈ ಮಾಡಲು ಬಳಸುತ್ತಾರೆ. ಹೀಗಾಗಿ ಜೀವಂತವಿರುವ ಕಪ್ಪೆಯ ಕಾಲನ್ನು ಮಾತ್ರ ಬಳಸಲಾಗುವುದರಿಂದ ಇಲ್ಲಿ ಸತ್ತ ಕಪ್ಪೆಗೆ ಬೆಲೆ ಇರುವುದಿಲ್ಲ. ಗೋವಾಕ್ಕೆ ಬರುವ ವಿದೇಶಿಯರಿಗೆ ಈ ಕಪ್ಪೆಗಳ ಖಾದ್ಯ `ಜಂಪಿAಗ್ ಚಿಕನ್ ಡಿಶ್’ ಎಂದೇ ಪ್ರಸಿದ್ಧವಾಗಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ, ಕೆಲವು ಡೇರಾಗಳಲ್ಲಿ ಮಾತ್ರ ಇವು ಸಿಗುತ್ತವೆ. ಅದನ್ನು ಸೇವಿಸುವಾಗ ಸಿಕ್ಕಿಬಿದ್ದರೆ ಅದಕ್ಕೂ ಶಿಕ್ಷೆ ಖಚಿತ.

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

80 ವರ್ಷ ಕಳೆದರೂ ವೃತ್ತಿ ಬಿಟ್ಟಿಲ್ಲ!

Next Post

ನಾಯಿಗೆ ಬೆದರಿ ಹೊಂಡಕ್ಕೆ ಬಿದ್ದ ಮುದೋಳದ ಚಾಲಕ!

Next Post

ನಾಯಿಗೆ ಬೆದರಿ ಹೊಂಡಕ್ಕೆ ಬಿದ್ದ ಮುದೋಳದ ಚಾಲಕ!

ಅಂಕೋಲಾ ಬಸ್ ನಿಲ್ದಾಣದಲ್ಲಿ ಬೈಕ್ ಕದಿಯುವುದು ದೇವಸ್ಥಾನದಲ್ಲಿ ಚಪ್ಪಲಿ ಕದಿಯುವುದಕ್ಕಿಂತ ಸಲೀಸು!

ಯಲ್ಲಾಪುರದ ಇಬ್ಬರಿಗೆ ಶಿರಸಿಯಲ್ಲಿ ಪೆಟ್ಟು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.