6
  • Latest

ಅಗ್ಗದ ಮದ್ಯಕ್ಕೆ ದುಪ್ಪಟ್ಟು ಬೆಲೆ: ಕಾಸು ಕೊಟ್ಟು ಸಿಕ್ಕಿಬಿದ್ದ ವಿದ್ಯಾರ್ಥಿಗಳು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಅಗ್ಗದ ಮದ್ಯಕ್ಕೆ ದುಪ್ಪಟ್ಟು ಬೆಲೆ: ಕಾಸು ಕೊಟ್ಟು ಸಿಕ್ಕಿಬಿದ್ದ ವಿದ್ಯಾರ್ಥಿಗಳು!

AchyutKumar by AchyutKumar
February 2, 2025
in ದೇಶ - ವಿದೇಶ
advt advt advt
ADVERTISEMENT

ಗೋವಾದಿಂದ ಕರ್ನಾಟಕಕ್ಕೆ ಮದ್ಯ ಸಾಗಾಣಿಕೆ ಮಾಡಿದರೆ ಕಾನೂನು ಕ್ರಮವಾಗುತ್ತದೆ ಎಂದು ಅರಿತ ವಿದ್ಯಾರ್ಥಿಗಳು ಮಾಜಾಳಿ ಗಡಿದಾಟಿದ ನಂತರ ದುಪ್ಪಟ್ಟು ಬೆಲೆ ನೀಡಿ ಅಗ್ಗದ ಗೋವಾ ಮದ್ಯ ಖರೀದಿಸಿದ್ದರು. ಆದರೂ ಅಬಕಾರಿ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಿದರು!

ಚಿಕ್ಕಮಂಗಳೂರಿನ ವಿದ್ಯಾರ್ಥಿಗಳು ಮೊನ್ನೆ ಗೋವಾ ಪ್ರವಾಸಕ್ಕೆ ಹೋಗಿದ್ದರು. ಗೋವಾದಿಂದ ಮರಳುವಾಗ ಅಲ್ಲಿನ ಮದ್ಯ ತರುವ ಬಗ್ಗೆ ಮಾತನಾಡಿಕೊಂಡರು. ಆದರೆ, ವಾಹನ ಚಾಲಕ ಅದಕ್ಕೆ ಅನುಮತಿ ನೀಡಲಿಲ್ಲ. ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿ ಹಾಗೂ ಪೊಲೀಸರು ವಾಹನ ತಪಾಸಣೆ ನಡೆಸುವ ಬಗ್ಗೆ ಚಾಲಕ ಎಚ್ಚರಿಸಿದ್ದರು. ಹೀಗಾಗಿ ಗೋವಾದಿಂದ ಮದ್ಯ ತರಲು ಆ ವಿದ್ಯಾರ್ಥಿಗಳು ಮನಸ್ಸು ಮಾಡಿರಲಿಲ್ಲ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿ ವಾಹನ ತಪಾಸಣೆ ನಡೆಸಿದರೂ ಏನು ಸಿಗಲಿಲ್ಲ. ತಪಾಸಣಾ ಕೇಂದ್ರದಿoದ ಕೊಂಚ ಮುಂದೆ ವ್ಯಕ್ತಿಯೊಬ್ಬರು ಗೋವಾ ಮದ್ಯವನ್ನು ಮಾರಾಟ ಮಾಡುವ ಬಗ್ಗೆ ಆ ವಾಹನದಲ್ಲಿದ್ದ ವಿದ್ಯಾರ್ಥಿಯೊಬ್ಬರಿಗೆ ಗೊತ್ತಿತ್ತು. ಹೀಗಾಗಿ ಎಲ್ಲರ ಒತ್ತಾಯದ ಮೇರೆಗೆ ಚಾಲಕನೂ ವಾಹನವನ್ನು ಆ ಕಡೆ ತಿರುಗಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮಗಿಷ್ಟವಾದಷ್ಟು ಮದ್ಯ ಖರೀದಿಸಿದರು. ಇದಕ್ಕಾಗಿ ಗೋವಾಗಿಂತಲೂ ದುಪ್ಪಟ್ಟು ಹಣ ಪಾವತಿಸಿದರು.

ಮದ್ಯದ ಜೊತೆ ವಿದ್ಯಾರ್ಥಿಗಳನ್ನು ಹೊತ್ತ ವಾಹನ ಕಾರವಾರದ ಕಡೆ ಮುಖ ಮಾಡಿತು. ಆದರೆ, ಅಲ್ಲಿ ಅಬಕಾರಿ ಸಿಬ್ಬಂದಿ ಮತ್ತೆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದ್ದರು. ರಾಜ್ಯದ ತೆರಿಗೆ ತಪ್ಪಿಸಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿ ಕ್ರಮ ಜರುಗಿಸಿದರು. ಕಾನೂನುಬಾಹಿರವಾಗಿ ಕರ್ನಾಟಕ ಗಡಿಯಲ್ಲಿ ಮದ್ಯ ಮಾರಾಟ ಮಾಡಿದವನ ವಿರುದ್ಧ ಅಬಕಾರಿ ಸಿಬ್ಬಂದಿ ಕ್ರಮ ಜರುಗಿಸಲಿಲ್ಲ. ಕಾರಣ, ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಮದ್ಯ ಸಾಗಿಸುತ್ತಿರುವ ಬಗ್ಗೆ ಅಕ್ರಮ ಮದ್ಯ ಮಾರಾಟಗಾರನೇ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದರು!

ShareSendTweetShare
ADVERTISEMENT
Previous Post

ಧರೆಗೆ ಗುದ್ದಿದ ಪ್ರವಾಸಿಗರ ಬಸ್ಸು: 9 ಜನರ ಸ್ಥಿತಿ ಗಂಭೀರ

Next Post

ಹಣ ಡಬಲ್ ಮಾಡುವ ಆಟ: ಮೇಸ್ತ್ರಿ ಸಂಪಾದಿಸಿದ ಕಾಸು ಪೊಲೀಸ್ ವಶ!

Next Post
The game of doubling money the money earned by the mason was seized by the police!

ಹಣ ಡಬಲ್ ಮಾಡುವ ಆಟ: ಮೇಸ್ತ್ರಿ ಸಂಪಾದಿಸಿದ ಕಾಸು ಪೊಲೀಸ್ ವಶ!

ಹೊತ್ತಿ ಉರಿದ ತ್ಯಾಜ್ಯ ವಿಲೆವಾರಿ ಘಟಕ!

ಮದುವೆಗೆ ಹೆದರಿ ಓಡಿಹೋದ ವರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.