6
  • Latest

ಪ್ರಶ್ನಿಸಿದವರ ವಿರುದ್ಧ ಪ್ರತಿಭಟನೆ: ಕ್ಷಮೆ ಕೇಳಿದರೆ ರಾಜಿಯಾಗುವ ಸೂಚನೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಪ್ರಶ್ನಿಸಿದವರ ವಿರುದ್ಧ ಪ್ರತಿಭಟನೆ: ಕ್ಷಮೆ ಕೇಳಿದರೆ ರಾಜಿಯಾಗುವ ಸೂಚನೆ!

AchyutKumar by AchyutKumar
in ರಾಜಕೀಯ

`ನನಗೂ ಕುಟುಂಬವಿದೆ. ಸಣ್ಣ ಮಕ್ಕಳು ಮನೆಯಲ್ಲಿದ್ದಾರೆ. ವಯಸ್ಸಾದ ತಂದೆ-ತಾಯಿಯಿದ್ದಾರೆ. ಹೀಗಿರುವಾಗ ಆಸ್ಪತ್ರೆ ವಿಷಯವಾಗಿ ಹೋರಾಟ ಮಾಡಿದರೆ ವಕೀಲರ ಆಫೀಸು, ಪೊಲೀಸ್ ಸ್ಟೇಶನ್ನು ಹಾಗೂ ಕೋರ್ಟು-ಕಚೇರಿ ಅಲೆದಾಡುವ ಹಾಗೇ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾಧ್ಯಮದವರ ಮುಂದೆ ನೋವು ತೋಡಿಕೊಂಡಿದ್ದಾರೆ.

ADVERTISEMENT

`ಪ್ರಶ್ನೆ ಮಾಡಿದವರ ವಿರುದ್ಧ ಶಾಸಕರು ಪ್ರತಿಭಟನೆ ಮಾಡಿಸುತ್ತಾರೆ. ಪ್ರತಿಕೃತಿದಹಿಸಿ ಅವಮಾನ ಮಾಡಿಸುತ್ತಾರೆ. ಅನಗತ್ಯ ನೋಟಿಸ್ ನೀಡಿ ಕೋರ್ಟು-ಕಚೇರಿ ಅಲೆದಾಡಿಸುವಂತೆ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ’ ಎಂದು ಅನಂತಮೂರ್ತಿ ಹೆಗಡೆ ಅಳಲು ತೋಡಿಕೊಂಡಿದ್ದಾರೆ.

`ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ ಸರ್ಕಾರ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೈಟೆಕ್ ಅಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ನಡೆದಿದೆ’ ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ. `ಇದನ್ನು ಶಾಸಕರ ಆಪ್ತರೇ ಹೇಳಿಕೊಂಡಿದ್ದು, ಸರ್ಕಾರ ಅನುದಾನ ಕೊಡದ ಕಾರಣ ಆಸ್ಪತ್ರೆಯನ್ನು ಕೆಳದರ್ಜೆಗಿಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹ’ ಎಂದು ಹೇಳಿದ್ದಾರೆ.

Advertisement. Scroll to continue reading.

`ಶಿರಸಿ ಹೈಟೆಕ್ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಆದರೆ, ಶಾಸಕ ಭೀಮಣ್ಣ ನಾಯ್ಕ ಅದನ್ನು ಮುಂದುವರೆಸಿಲ್ಲ’ ಎಂಬುದು ಅನಂತಮೂರ್ತಿ ಹೆಗಡೆ ಅವರ ಆರೋಪ. `ಹೈಟೆಕ್ ಆಸ್ಪತ್ರೆಗಿರುವ ಸೌಲಭ್ಯವನ್ನು ನಿರಾಕರಿಸಿ ಕೆಳದರ್ಜೆಯ ಆಸ್ಪತ್ರೆಯನ್ನಾಗಿಸುವುದು ಎಂದಿಗೂ ಸರಿಯಲ್ಲ. ಹೊಸ ವೈದ್ಯಾಧಿಕಾರಿಗಳನ್ನ ನೇಮಿಸಿಕೊಂಡು ಸಲಕರಣೆಗಾಗಿ 30 ಕೋಟಿ ಬದಲಿಗೆ 5.20 ಕೋಟಿ ಪ್ರಸ್ತಾವನೆ ಕಳುಹಿಸಿರುವುಸು ಸಮಂಜಸವಲ್ಲ’ ಎಂದು ಅನಂತಮೂರ್ತಿ ಹೇಳಿದ್ದಾರೆ.

Advertisement. Scroll to continue reading.

15 ದಿನದ ಗಡುವು:
`ಆಸ್ಪತ್ರೆ ಕುರಿತಾದ ಗೊಂದಲ ನಿವಾರಣೆಗೆ ಇನ್ನೂ 15 ದಿನ ಕಾಯುತ್ತೇವೆ. ಹೈಟೆಕ್ ಆಸ್ಪತ್ರೆ ವಿಚಾರದಲ್ಲಿ ಶಾಸಕ ಭೀಮಣ್ಣ ನಾಯ್ಕ ಜನತೆಯ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಇಲ್ಲವಾದಲ್ಲಿ ಬೀದಿ ಬೀದಿ ಸಂಚರಿಸಿ ಸಹಿ ಅಭಿಯಾನ ನಡೆಸುವೆ’ ಎಂದು ಹೇಳಿದ್ದಾರೆ.

ಆದರೆ, ಈವರೆಗೂ ಭೀಮಣ್ಣ ನಾಯ್ಕ ಅನಂತಮೂರ್ತಿ ಹೆಗಡೆ ಅವರ ಯಾವ ಬೇಡಿಕೆಗೂ ಬಗ್ಗಿಲ್ಲ. ಹೀಗಾಗಿ ಈ ಪ್ರಕರಣ ರಾಜಿಯಲ್ಲಿ ಬಗೆಹರಿಯುವ ಸಾಧ್ಯತೆಗಳು ಕಾಣುತ್ತಿಲ್ಲ.

Previous Post

ಯಲ್ಲಾಪುರ: ಗ್ರಾಮದೇವಿಗೆ ಸ್ವರ್ಣ ಕಿರೀಟ!

Next Post

ಆರ್ಥಿಕ ಮುಗ್ಗಟ್ಟು: ವಿಷ ಕುಡಿದ ಯುವಕ ಸಾವು!

Next Post

ಆರ್ಥಿಕ ಮುಗ್ಗಟ್ಟು: ವಿಷ ಕುಡಿದ ಯುವಕ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ