6
  • Latest

ಚಿನ್ನದ ಆಸೆಗೆ ಬಿದ್ದವ ಹಣದ ಜೊತೆ ಅಡಿಕೆಯನ್ನು ಕಳೆದುಕೊಂಡ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಿನ್ನದ ಆಸೆಗೆ ಬಿದ್ದವ ಹಣದ ಜೊತೆ ಅಡಿಕೆಯನ್ನು ಕಳೆದುಕೊಂಡ!

ವೆಲ್ಡಿoಗ್ ಕೆಲಸದವನಿಗೆ ಬಂಗಾರದ ಮೇಲೆ ವ್ಯಾಮೋಹ | ಬ್ಯಾಂಕ್ ಜೊತೆ ಗ್ರಾಹಕನಿಗೂ ಮೋಸ ಮಾಡಿದ ನಕಲಿ ಅಕ್ಕಸಾಲಿಗ | ಬ್ಯಾಂಕಿನಲ್ಲಿ ಚಿನ್ನ ಇಟ್ಟವರ ಎದೆಯಲ್ಲಿ ಡವ ಡವ | ಇನ್ನೂ ಹಲವರಿಗೆ ಅನ್ಯಾಯ ಆಗಿರುವ ಬಗ್ಗೆ ಶಂಕೆ

AchyutKumar by AchyutKumar
June 21, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಕರ್ನಾಟಕ ಬ್ಯಾಂಕ್’ನ `ಗೋಲ್ಡ್ ಅಪ್ರೆoಜರ್’ ಎಂದು ಸುಳ್ಳು ಹೇಳಿ ತಿರುಗಾಡುತ್ತಿದ್ದ ರವೀಂದ್ರ ನಗರದ ತುಳಸಿದಾಸ ಕುರ್ಡೇಕರ ಎಂಬಾತ ನಂದೂಳ್ಳಿಯ ಭಾಸ್ಕರ್ ನಾಯ್ಕ ಎಂಬಾತರಿಗೆ ಇದೇ ರೀತಿ ನಂಬಿಸಿ 1.5 ಲಕ್ಷ ರೂ ಪಡೆದು ನಕಲಿ ಬಂಗಾರ ನೀಡಿ ಮೋಸ ಮಾಡಿದ್ದಲ್ಲದೇ, ಅವರ ಮನೆಯಲ್ಲಿದ್ದ 5.5 ಲಕ್ಷ ರೂ ಮೌಲ್ಯದ ಅಡಿಕೆಯನ್ನು ಪಡೆದು ಪರಾರಿಯಾಗಿದ್ದಾನೆ.

Advertisement. Scroll to continue reading.

ಈ ಎಲ್ಲಾ ವಿದ್ಯಮಾನಗಳಿಂದ ಒಟ್ಟು 799870ರೂ ಕಳೆದುಕೊಂಡು ಅನ್ಯಾಯಕ್ಕೆ ಒಳಗಾದ ಭಾಸ್ಕರ್ ನಾಯ್ಕ ಇದೀಗ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅನಗತ್ಯವಾಗಿ ಇಲ್ಲಿ `ಕರ್ನಾಟಕ ಬ್ಯಾಂಕ್’ ಹೆಸರು ತಳಕು ಹಾಕಿಕೊಂಡಿದೆ.
ಘಟನೆ ವಿವರ:
ನಂದೂಳ್ಳಿ ಬೆಳಖಂಡದ ಭಾಸ್ಕರ್ ನಾಯ್ಕ ವ್ಯಾಪಾರದ ಜೊತೆ ವೆಲ್ಡಿಂಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡವರು. ಇವರನ್ನು ಭೇಟಿ ಮಾಡಿದ ತುಳಸಿದಾಸ ಕುರ್ಡೇಕರ ಎಂಬಾತ ತನ್ನನ್ನು ತಾನು ಕರ್ನಾಟಕ ಬ್ಯಾಂಕಿನ `ಗೋಲ್ಡ್ ಅಪ್ರೆoಜರ್’ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಕರ್ನಾಟಕ ಬ್ಯಾಂಕಿನಲ್ಲಿ ರಾಜೇಶ್ ಮಹಾಲೆ ಎಂಬಾತರು ಅಡವಿಟ್ಟ ಬಂಗಾರ ಇದ್ದು, ಅದನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾನೆ. ಅದರಂತೆ, ರಾಜೇಶ ಅವರ ಜೊತೆ ಭಾಸ್ಕರನನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಭಾಸ್ಕರನಿಂದ 99870ರೂ ತುಂಬಿಸಿ ಅಲ್ಲಿದ್ದ ಒಡವೆಗಳನ್ನು ಬಿಡಿಸಿದ್ದಾನೆ. ಬ್ಯಾಂಕಿನಲ್ಲಿ ಅಡವಿದ್ದ ಒಡವೆಗಳನ್ನು ತುಳಸಿದಾಸ ಕುರ್ಡೇಕರ್ ಪರಿಶೀಲಿಸಿ ಪ್ರಮಾಣಪತ್ರ ನೀಡಿದ್ದಾಗಿದ್ದು, ಈ ಒಡವೆ ಕರಗಿಸಿ 916 ಗುರುತಿನ ನಾಲ್ಕು ಬಳೆ ಮಾಡಿಕೊಡುವುದಾಗಿಯೂ ಭಾಸ್ಕರರನ್ನು ಆತನೇ ನಂಬಿಸಿದ್ದಾನೆ. ಇದಕ್ಕೆ ಒಪ್ಪಿದ ಭಾಸ್ಕರ್ ಮತ್ತೆ 1.5 ಲಕ್ಷ ರೂ ನೀಡಿ, ಉಳಿದ 50 ಸಾವಿರ ರೂ ನಂತರ ನೀಡುವುದಾಗಿ ಹೇಳಿದ್ದು, ಕೆಲ ದಿನಗಳ ನಂತರ ತುಳಸಿದಾಸ್ 4 ಬಳೆಗಳನ್ನು ಭಾಸ್ಕರನಿಗೆ ನೀಡಿ ಹಣ ಕೇಳಿದ್ದಾನೆ.
ಆಗ, ಭಾಸ್ಕರ್ ನಾಯ್ಕ `ತನ್ನಲ್ಲಿ 5.5 ಲಕ್ಷದ ಅಡಿಕೆಗಳಿದ್ದು, ಅದನ್ನು ಮಾರಾಟ ಮಾಡಿ ಹಣ ನೀಡುವೆ’ ಎಂದಾಗ ಇದಕ್ಕೆ ಪ್ರತಿಯಾಗಿ `ತಾನೇ ಉತ್ತಮ ಬೆಲೆಗೆ ಅಡಿಕೆ ಮಾರಿ ಕೊಡುತ್ತೇನೆ’ ಎಂದು ತುಳಸಿದಾಸ್ ತಿಳಿಸಿ ಅಡಿಕೆಯನ್ನು ಅಲ್ಲಿಂದ ಕೊಂಡೊಯ್ದು ಅದರ ಹಣವನ್ನು ಸಹ ಕೊಟ್ಟಿಲ್ಲ. ಈ ನಡುವೆ ತುಳಸಿದಾಸ್ ನೀಡಿದ 4 ಬಳೆಗಳನ್ನು ಇನ್ನೊಬ್ಬರ ಬಳಿ ಪರಿಶೀಲಿಸಿದಾಗ ಅದು ಸಹ ನಕಲಿಯಾಗಿದ್ದು, 916 ಎಂದು ಅಂಟು ಹಾಕಿ ಹಿಡಿಸಿರುವುದು ಬೆಳಕಿಗೆ ಬಂದಿದೆ. ಮೋಸ ಹೋದ ಬಗ್ಗೆ ಅರಿತ ಭಾಸ್ಕರ್ ನಾಯ್ಕ ಈ ಬಗ್ಗೆ ಪ್ರಶ್ನಿಸಲು ರವೀಂದ್ರ ನಗರದಲ್ಲಿರುವ ಮನೆಗೆ ಹೋದಾಗ ಅಲ್ಲಿದ್ದ ತುಳಸಿದಾಸ ಕುರ್ಡೇಕರ್ ಹಾಗೂ ಅವರ ಕುಟುಂಬದವರಾದ ರೇಷಾ ತುಳಸಿದಾಸ, ಸಚಿನ್ ಕುರ್ಡೇಕರ್, ಸೀಮಾ ಕುರ್ಡೇಕರ ರವೀಂದ್ರ ನಗರ ಭಾಸ್ಕರನಿಗೆ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಇನ್ನೂ “ಆರೋಪಿ ತುಳಸಿದಾಸ ಕುರ್ಡೇಕರ್ ತಮ್ಮ ಬ್ಯಾಂಕ್ `ಗೋಲ್ಡ್ ಅಪ್ರೆoಜರ್’ ಅಲ್ಲ. ವರ್ಷದ ಹಿಂದೆ ಅವರನ್ನು ಕೆಲಸದಿಂದ ಕೈ ಬಿಡಲಾಗಿದೆ” ಎಂದು ಕರ್ನಾಟಕ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

Next Post

ತೆಂಗಿನಕಾಯಿ ಆಸೆಗೆ ಜೀವಬಿಟ್ಟ ಮಹಿಳೆ!

Next Post

ತೆಂಗಿನಕಾಯಿ ಆಸೆಗೆ ಜೀವಬಿಟ್ಟ ಮಹಿಳೆ!

ರೈಲ್ವೆ ನೀರಿನ ಪಂಪ್'ನ್ನು ಬಿಡದ ಕಳ್ಳರು!

ಈತ ಗಂಡಸೇ ಅಲ್ಲ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.