ಶಿರಸಿಯಲ್ಲಿ ಹೊಸದಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದ್ದು, ಈ ಠಾಣೆಯ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಪೊಲೀಸರು ಗುರುವಾರ ಶಿರಸಿಯ ವಿವಿಧ ವೃತ್ತಗಳ ಬಳಿ ಕಾಣಿಸಿದರು. ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಅವರು ಮನವರಿಕೆ ಮಾಡಿದರು. ಜೊತೆಗೆ ಕಾರು ಚಾಲಕರಿಗೂ ಸೀಟ್ಬೆಲ್ಟ್ ಧರಿಸುವಂತೆ ಸೂಚಿಸಿದರು.
`ಸಂಚಾರಿ ನಿಯಮ ಉಲ್ಲಂಘಿಸಬೇಡಿ’ ಎಂದು ಜನರಲ್ಲಿ ಅರಿವು ಮೂಡಿಸಿದರು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದ್ದರಿಂದ ಆಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಿದರು. ನಿಯಮ ಉಲ್ಲಂಘನೆಯಿAದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು.
ಅದಾದ ನಂತರ ಸಂಚಾರಿ ನಿಯಮ ಉಲ್ಲಂಘಿಸಿದರೆ ನೀಡುವ ಶಿಕ್ಷೆ ಹಾಗೂ ದಂಡದ ಪ್ರಮಾಣದ ಬಗ್ಗೆಯೂ ಜನರಿಗೆ ಮಾಹಿತಿ ನೀಡಿದರು. ಟ್ರಾಫಿಕ್ ಪಿಎಸ್ಐ ಮಾಂತೇಶ ಕುಂಬಾರ ನೇತ್ರತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.







