6
  • Latest
ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ದಾಂಡೇಲಿಯ ಚಿಣ್ಣರಲೋಕಕ್ಕೆ ನಿಮಗಿದೋ ಸ್ವಾಗತ!

ಕಾರ್ಟೂನ್ ಲೋಕದ ಕಿಂಗ್ ಈ ಇಕೋ ಪಾರ್ಕ

AchyutKumar by AchyutKumar
June 28, 2024
in ಲೇಖನ
advt advt advt
ADVERTISEMENT

ಟಾಮ್ ಅಂಡ್ ರ‍್ರಿ, ಮಿಕ್ಕಿಮೌಸ್, ಡೊರೆಮನ್, ಟಿಮಾನ್, ಕಾಂಗಾ, ಎಂವರ‍್ಸ್, ಪಾಪೆಯೆ, ಮಿಚಿಗನ್, ಶ್ರೇಕ್, ಆಂಗ್ರಿ ಬರ್ಡ್ಸ್, ಛೋಟಾ ಭೀಮ್, ಅಲಾದಿನ್, ಜಂಗಲ್ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸ್ಕೆçರಲ್, ಚಿಪ್ ಆಂಡ್ ಡೆಲ್, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪ್ಲಿನ್ ಎಲ್ಲವನ್ನು ಒಂದೇ ಕಡೆ ನೋಡಬೇಕು ಎಂದರೆ ನೇರವಾಗಿ ದಾಂಡೇಲಿಗೆ ಬರಬೇಕು!


ದಾಂಡೇಲಿ ಪಟ್ಟಣದ ಬಸ್ಸು ನಿಲ್ದಾಣದ ಹಿಂದೆ 25 ಎಕರೆ ಜಾಗದಲ್ಲಿ `ದಂಡಾಕಾರಣ್ಯ ಇಕೋ ಪಾರ್ಕ್’ ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ ಉತ್ಸಾಹಕ್ಕೆ ಈ ಉದ್ಯಾನವನ ಉದ್ಘಾಟನೆಯಾಗಿದ್ದು, ಒಳಗೆ ಕಾಲಿಡುತ್ತಿದ್ದಂತೆ ಇರುವೆಗಳ ದೊಡ್ಡ ಸಾಲು ದರ್ಶನವಾಗುತ್ತದೆ. `ಅರೇ ಇರುವೆಗಳು ಕಚ್ಚಬಹುದು ನಿಧಾನವಾಗಿ ನಡೆಯಿರಿ’ ಎಂದು ಹೇಳುತ್ತಾ ಮುಂದೆ ಸಾಗಿದಾಗ ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ಸಿಗುತ್ತಾನೆ. ತಮಾಷೆ ಪ್ರಸಂಗವೊAದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ ಕಾಣುತ್ತದೆ. ಚಾಪ್ಲಿನ್ ಟ್ರೇಡ್ ಮಾರ್ಕ್ ಎನಿಸಿರುವ ಟೋಪಿ ತಲೆಯ ಮೇಲಿದ್ದರೂ ಕೋಲನ್ನು ಅವರು ಎಲ್ಲಿಯೋ ಬಿಟ್ಟು ಬಂದಿರುವoತಿದೆ.

ADVERTISEMENT
ADVERTISEMENT


ಯಾವುದೇ ಮಾನಸಿಕ ಒತ್ತಡ ಇಲ್ಲದೇ ಹಾಯಾಗಿರುವ ಕಥಾ ಹಂದರ ಹೊಂದಿರುವ ಶಿನ್ ಚಾನ್, ಮೆಲ್ ಪ್ರಾಗ್ 19-20ನೇ ಶತಮಾನದ ಹಾಡುಗಳನ್ನು ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಇರುವ ಮಿಚಿಗನ್, ಪುರಪುರಿಯಲ್ಲಿ ವಾಸಿಸುವ ಮೋಟು ಮತ್ತು ಪತ್ಲು ಎಂಬ ಆಪ್ತಸ್ನೇಹಿತರು ಎಲ್ಲರೂ ಇಲ್ಲಿ ಸಿಗುತ್ತಾರೆ. ಮೋಟು ಯಾವಾಗಲೂ ಸಮಸ್ಯೆಗಳನ್ನು ಸೃಷ್ಠಿಸುತ್ತಾನೆ. ಪತ್ಲು ಮಾತ್ರ ಅವುಗಳಿಗೆ ಪರಿಹಾರ ಹುಡುಕುತ್ತಲೇ ಇರುತ್ತಾನೆ. ದೋಲಕಪುರದ ಛೋಟಾ ಭೀಮ ಕುಟುಂಬ ಒಂದೆಡೆಯಾದರೆ, ಇನ್ನೊಂದೆಡೆ ಕಾಡಿನ ಪ್ರಾಣಿಗಳ ಸಹವಾಸದಲ್ಲಿ ಬೆಳೆದ ಮೊಗ್ಲಿ. ಆಮೆಯೊಂದರ ಮೇಲೆ ಸವಾರಿ ಮಾಡುತ್ತಿರುವ ದೃಶ್ಯ ನಗೆ ಉಕ್ಕಿಸುತ್ತದೆ. ಸೂಪರ್ ಮ್ಯಾನ್ ಸಹ ಇಲ್ಲಿ ತನ್ನ ತೋಳ್ಬಲ ಪ್ರದಶಿಸುತ್ತಾನೆ. ಜೀವನವಿಡೀ ಸಗಣಿಯನ್ನು ಉಂಡೆಮಾಡಿ ಅದನ್ನು ಉರುಳಿಸಕೊಂಡು ಹೋಗುವುದರಲ್ಲೇ ಕಾಲ ಕಳೆಯುವ ಕಾಪೋರೋಫಾಗಸ್ ಕೀಟಗಳು ಇಲ್ಲಿವೆ. ಶುಭ್ರವಾದ ನಯವಾದ ಸಗಣಿಯನ್ನು ಹುಡುಕುವುದರೊಂದಿಗೆ ತನ್ನ ದಿನ ಪ್ರಾರಂಭಿಸುವ `ಡಂಗ್-ಬೀಟಲ್ಸ್’ ಸಹ ಸಿಮೆಂಟಿನಲ್ಲಿ ಕೆತ್ತನೆಯಾಗಿದೆ.
40ಕ್ಕೂ ಅಧಿಕ ಕಲಾವಿದರು ಪರಿಶ್ರಮವಹಿಸಿ 106 ಕಾರ್ಟೂನ್ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇಟ್ಟಿಗೆ, ಕಬ್ಬಿಣ, ಮರಳು ಇತರೆ ಕಚ್ಚಾ ಸಾಮಗ್ರಿಗಳನ್ನು ರಸವತ್ತಾಗಿ ಬಳಸಲಾಗಿದೆ. ಜೊತೆಗೆ ಮನರಂಜನೆಗಾಗಿ ಜಿಮಾಶಿಯಂ, ಮಲ್ಟಿ ಪ್ಲೇ ಮಾಡಲಾಗಿದೆ. ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನು ಕಡಿಯದೇ, ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ನಾಟಿ ಮಾಡಿ ಕಾರ್ಟೂನ್ ಲೋಕ ಸೃಷ್ಟಿಸಲಾಗಿದೆ.

Advertisement. Scroll to continue reading.
Advertisement. Scroll to continue reading.


ಪ್ರತಿ ಶನಿವಾರ ಮತ್ತು ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನು ಇಲ್ಲಿ ನಡೆಸಲಾಗುತ್ತದೆ. ಈ ಕಾರ್ಟೂನ್ ಲೋಕ ಎಲ್ಲರಿಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡುವುದರ ಜೊತೆ ಮನರಂಜನೆಯನ್ನು ನೀಡುತ್ತದೆ.

– ಟಿ ಶಿವಕುಮಾರ್
ಹಾನಗಲ್, ಹಾವೇರಿ

ShareSendTweetShare
ADVERTISEMENT
Previous Post

ಅಸಹಾಯಕ ಅನಾಥನಿಗೆ ಆಸರೆಯಾದ ಅಕ್ಷರಕ್ರಾಂತಿ

Next Post

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

Next Post

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

ಸರ್ಕಾರಕ್ಕೆ ನಷ್ಟ - ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

ರೈತ ಬೆಳೆದ ಭತ್ತ ಮಣ್ಣುಪಾಲು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.