6
  • Latest

ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!

ಜನರಿಗೆ ನ್ಯಾಯ ಕೊಡಿಸುವ ಪೊಲೀಸರಿಗೆ ಅನ್ಯಾಯ | ಹೊಸ ಮನೆ ಪ್ರವೇಶಕ್ಕೂ ಮುನ್ನ ವಿದ್ಯುತ್ ಬಿಲ್ ಹೊರೆ

AchyutKumar by AchyutKumar
June 29, 2024
in ಸ್ಥಳೀಯ
advt advt advt
ADVERTISEMENT

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದೆ. ಆದರೆ, ಈವರೆಗೂ ಅಲ್ಲಿನ ಮನೆಗಳನ್ನು ಅರ್ಹರಿಗೆ ವಿತರಿಸಿಲ್ಲ. ಇದೀಗ ಪ್ರತಿ ಮನೆಗೆ 10 ಸಾವಿರ ರೂ ಲೆಕ್ಕದಲ್ಲಿ ನೀರು ಹಾಗೂ ವಿದ್ಯುತ್ ಬಿಲ್ ಬಂದಿದ್ದು, ಹೊಸಮನೆಗೆ ಪ್ರವೇಶಿಸಲಿರುವ ಪೊಲೀಸರಿಗೆ ಅದು ಹೊರೆಯಾಗಲಿದೆ!
ಒಪ್ಪಂದದ ಪ್ರಕಾರ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕೆಲಸ ಮುಗಿಸಿ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಆದರೆ, ಆಗ ಚುನಾವಣೆ ನೀತಿಸಂಹಿತೆ ನೆಪವೊಡ್ಡಿ ಅದನ್ನು ಅರ್ಹರಿಗೆ ಹಸ್ತಾಂತರಿಸಿರಲಿಲ್ಲ. ಅದಾದ ನಂತರ ಈ ಹಸ್ತಾಂತರ ಪ್ರಕ್ರಿಯೆಗೆ ಹಿರಿಯ ಅಧಿಕಾರಿಗಳಿಗೆ ಪುರಸೋತು ಸಿಕ್ಕಿಲ್ಲ. ಹೀಗಾಗಿ ಆ ಕಟ್ಟಡ ಹೊಸದಾಗಿದ್ದರೂ ಹೊರಗಿನಿಂದ ಪಾಳು ಬಂಗಲೆ ರೀತಿ ಕಾಣುತ್ತಿದೆ. ಇಲ್ಲಿ ಎರಡು ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಕುಟುಂಬಗಳಿಗೆ ಆಶ್ರಯ ಕಲ್ಪಿಸುವುದು ವಸತಿಗೃಹದ ಮುಖ್ಯ ಉದ್ದೇಶ. ಈ ಕಟ್ಟಡದಲ್ಲಿರುವ ಪ್ರತಿ ಮನೆಯೂ ಡಬಲ್ ಬೆಡ್ ರೂಂ ಹೊಂದಿದೆ. ಪ್ರತ್ಯೇಕ ಅಡುಗೆಮನೆ, ಹಾಲ್, ಸ್ನಾನ ಹಾಗೂ ಶೌಚಾಲಯಗಳಿವೆ. ಪೊಲೀಸರ ಮೂಲ ವೇತನದಲ್ಲಿ ಪ್ರತಿ ತಿಂಗಳು ಶೇ 10ರಷ್ಟು ಕಡಿತಗೊಳಿಸಿ ಈ ಮನೆಗಳನ್ನು ಅವರಿಗೆ ನೀಡುವ ಪ್ರಸ್ತಾಪವಿದೆ. ಈ ರೀತಿ ಮಾಡಿದರೆ ಪೊಲೀಸರ ವೇತನದಲ್ಲಿ ಕಡಿತಗೊಳಿಸುವ ಹಣ ಸರ್ಕಾರಿ ಬೊಕ್ಕಸಕ್ಕಾದರೂ ಬರುತ್ತಿತ್ತು. ಪ್ರತಿ ಪೊಲೀಸ್ ಸಿಬ್ಬಂದಿಯಿoದ ಪ್ರತಿ ತಿಂಗಳು ಕನಿಷ್ಟ 4-5 ಸಾವಿರ ರೂ ಬಾಡಿಗೆ ಅಂದರೂ ಇಲಾಖೆಗೆ 1 ಲಕ್ಷ ರೂಗಳಿಗಿಂತ ಅಧಿಕ ವಾರ್ಷಿಕ ಆದಾಯ ಪ್ರತಿ ಮನೆಯಿಂದ ಬರುತ್ತಿತ್ತು. ಹೊಸದಾಗಿ ನಿರ್ಮಿಸಿದ ಮನೆಯನ್ನು ಖಾಲಿ ಬಿಟ್ಟಿರುವುದರಿಂದ ಆ ಹಣ ಸಹ ವಸೂಲಿಯಾಗದೇ ಪೊಲೀಸ್ ಇಲಾಖೆಗೆ ನಷ್ಟವಾಗಿದೆ. ಜೊತೆಗೆ ಈವರೆಗೂ ಮನೆ ಹಸ್ತಾಂತರ ಆಗದ ಕಾರಣ ಅರ್ಹ ಪೊಲೀಸರಿಗೆ ಅನ್ಯಾಯವಾಗಿದೆ.
ಪ್ರಸ್ತುತ 10 ಸಾವಿರದ ಲೆಕ್ಕದಲ್ಲಿ ವಿದ್ಯುತ್ ಹಾಗೂ ನೀರಿನ ಬಿಲ್ ಬಂದಿರುವುದು ಸಹ ಅಲ್ಲಿ ಪ್ರವೇಶಿಸಲಿರುವ ಪೊಲೀಸ್ ಕುಟುಂಬಕ್ಕೆ ಆಘಾತ ತಂದಿದೆ. `ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಬಂಗಲೆಯಲ್ಲಿರುತ್ತಾರೆ. ನಮ್ಮಂಥ ಸಿಬ್ಬಂದಿಗೆ ಬಾಡಿಗೆಮನೆಯೂ ಗತಿ ಇಲ್ಲ. ಹೊಸ ಕಟ್ಟಡ ಹಾಳಾಗುತ್ತಿದ್ದರೂ ಅದನ್ನು ನಾವು ಕೇಳುವ ಹಾಗಿಲ್ಲ. ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ಶಿಕ್ಷೆಯಾಗುತ್ತದೆ. ಕಣ್ಣಮುಂದೆ ಮನೆ ಇದ್ದರೂ ಅದರ ಬಳಕೆಗೆ ಹಕ್ಕಿಲ್ಲ’ ಎಂದು ಪೊಲೀಸ್ ಮನೆಯ ಆಕಾಂಕ್ಷಿಗಳು ಅಸಹಾಯಕತೆ ಹೊರಹಾಕಿದರು. `ಪೊಲೀಸ್ ವರಿಷ್ಠಾಧಿಕಾರಿಗಳಿಗಾದರೂ ನಮ್ಮ ಸಮಸ್ಯೆ ಅರ್ಥವಾದರೆ ಸಾಕು’ ಎನ್ನುತ್ತ ಕೆಲ ಪೊಲೀಸರು ಅಳಲು ತೋಡಿಕೊಂಡರು.

Advertisement. Scroll to continue reading.

– ಅಚ್ಯುತಕುಮಾರ ಯಲ್ಲಾಪುರ

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಮಳೆಗಾಲದ ಮುನ್ನಚ್ಚರಿಕೆವಹಿಸಲು ಡೀಸಿ ಸೂಚನೆ

Next Post

ರೈತ ಬೆಳೆದ ಭತ್ತ ಮಣ್ಣುಪಾಲು

Next Post

ರೈತ ಬೆಳೆದ ಭತ್ತ ಮಣ್ಣುಪಾಲು

ಅಣೆಕಟ್ಟಿನ ಬಳಿ ಅಕ್ರಮ ಮದ್ಯ ಸೇವನೆ: ಪೊಲೀಸ್ ದಾಳಿ

ಶಿವಮೊಗ್ಗಕ್ಕೆ ಹೊರಟವ ಶಿವನಪಾದ ಸೇರಿದ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.