6
  • Latest
ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!

ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!

AchyutKumar by AchyutKumar
in ಲೇಖನ
ಅಂತಿoಥವರಲ್ಲ ಈ ವಿಜ್ಞಾನಿ: ಗಿಡ-ಮರಗಳೇ ಇವರ `ಮನೆ’ ದೇವರು!

ಮನೆ ನಿರ್ಮಾಣದ ವೇಳೆ ಮೂರು ಮರ ಕಡಿತ ತಪ್ಪಿನ ಪ್ರಾಯಶ್ಚಿತಕ್ಕಾಗಿ ಡಾ ಕಿರಣ್ ಎಂಬ ವಿಜ್ಞಾನಿ ಕುಮಟಾ ಬಳಿಯ ಹಿರೆಗುತ್ತಿಯಲ್ಲಿ 101 ಗಿಡಗಳನ್ನು ನೆಟ್ಟಿದ್ದು, ಅದರ ಸಂಪೂರ್ಣ ಆರೈಕೆಯ ಹೊಣೆ ಹೊತ್ತಿದ್ದಾರೆ.

ADVERTISEMENT

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾದ ಡಾ ಕಿರಣ್ ಅಂಕ್ಲೇಕರ್ ಅವರು ಓದಿದ್ದು, ಬೆಳೆದಿದ್ದು ಎಲ್ಲವೂ ಗೋಕರ್ಣದಲ್ಲಿ. ವನ್ಯಜೀವಿ ಛಾಯಾಚಿತ್ರದಲ್ಲಿಯೂ ಆಸಕ್ತಿ ಇರುವ ಅವರು ವನ್ಯಜೀವಿ ಹಾಗೂ ಇತರೆ ಪ್ರಾಣಿಗಳ ಆರೋಗ್ಯಕ್ಕೆ ಸಂಬoಧಿಸಿದ ಕಂಪನಿಯಲ್ಲಿ ವಿಜ್ಞಾನಿಯಾಗಿದ್ದಾರೆ. ಪುಣೆಯಲ್ಲಿರುವ ಅವರು ಕಂಪನಿ ತಯಾರಿಸುವ ಔಷಧಗಳ ಗುಣಮಟ್ಟ ಕಾಯ್ದಿರಿಸುವಿಕೆಯ ಜವಾಬ್ದಾರಿ ಹೊಂದಿದ್ದಾರೆ.
ಎoದಿಗೂ ಬೇರೆಯವರ ಮನಸ್ಸು ನೋಯಿಸದ ಅವರು ಕಳೆದ ವರ್ಷ ಅನಿವಾರ್ಯವಾಗಿ 2 ತೆಂಗು ಹಾಗೂ 1 ಮಾವಿನ ಮರ ತೆಗೆಸಿದರು. ಬಾಲ್ಯದಲ್ಲಿ ಫಲ ಕೊಟ್ಟ ಮರ ನಾಶವಾಗುವುದನ್ನು ನೋಡಲು ಅವರಿಂದ ಆಗಲಿಲ್ಲ. ಮರ ಕಡಿಸಿದ ನೋವು ಅವರನ್ನು ನಿತ್ಯ ಕಾಡಿಸುತ್ತಿತ್ತು. ಆ ಮರಗಳ ಸಾವಿನ ಸೂತಕದಿಂದ ಹೊರಬರಲಾರದೇ ಅವರು ಒದ್ದಾಡುತ್ತಿದ್ದರು. ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ 101 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ ಅವರು ಆ ಗಿಡಗಳ ಕಾವಲು, ನೀರುಣಿಸುವುದು ಸೇರಿ ಅವುಗಳ ಬೆಳವಣಿಗೆಯ ಸಮಗ್ರ ಹೊಣೆವಹಿಸಿಕೊಂಡಿದ್ದಾರೆ.

ಮಕ್ಕಳು – ಶಿಕ್ಷಕರು ಹಾಗೂ ಅರಣ್ಯಾಧಿಕಾರಿಗಳ ಸಾಕ್ಷಿಯಾಗಿ 101 ಗಿಡ ನೆಟ್ಟು ಅವುಗಳ ಆರೈಕೆಯ ಹೊಣೆ ಹೊತ್ತ ಡಾ ಕಿರಣ್ ಅಂಕ್ಲೇಕರ್

ಪರರಾಜ್ಯದಲ್ಲಿದ್ದರೂ ಹಾತೊರೆಯುವ ಕನ್ನಡ ಮನ:
ಇನ್ನೂ ಕಲೆ, ಸಾಹಿತ್ಯ, ನಾಟಕ, ಸಂಗೀತದಲ್ಲಿಯೂ ಅವರಿಗೆ ಅಪಾರ ಆಸಕ್ತಿ. ಹೀಗಾಗಿ `ಸಂಗಾಡಿ ಬಳಗ’ ಎಂಬ ತಂಡಕಟ್ಟಿಕೊoಡು ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ ಅವರು ತಾವು ಸಂಚರಿಸಿದ 20 ದೇಶಗಳಲ್ಲಿಯೂ ಕನ್ನಡಿಗರನ್ನು ಕೊಂಡಾಡಿದ್ದಾರೆ. ಜಿಲ್ಲೆಯ ಸಂಸ್ಕೃತಿಗಳ ಬಗ್ಗೆ ಇತರರಿಗೆ ಪರಿಚಯಿಸಿದ್ದಾರೆ. ಗೋಕರ್ಣದಲ್ಲಿ ಬಾಲ್ಯ ಕಳೆದ ನೆನಪುಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದು, `ನೂರೊಂದು ಹನಿಗವನ’ ಎಂಬ ಇನ್ನೊಂದು ಪುಸ್ತಕವೂ ಸಿದ್ಧವಾಗಿದೆ. `ನನ್ನ ತಂದೆ-ತಾಯಿ ಶಿಕ್ಷಕರಾಗಿದ್ದರು. ನನ್ನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಅವರೇ ಪ್ರೇರಣೆ’ ಎನ್ನುತ್ತ ಡಾ ಕಿರಣ್ ಭಾವುಕರಾದರು.

Advertisement. Scroll to continue reading.
Advertisement. Scroll to continue reading.
Previous Post

`ಗುಡ್ಡಗಾಡು ಜನರ ಅಭಿವೃದ್ಧಿಗೆ ನರೆಗಾ ಬಳಕೆ’

Next Post

ಪ್ರವಾಸಿ ಮಾರ್ಗದರ್ಶಕರು ಬೇಕಾಗಿದ್ದಾರೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ..

Next Post
ಪ್ರವಾಸಿ ಮಾರ್ಗದರ್ಶಕರು ಬೇಕಾಗಿದ್ದಾರೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ..

ಪ್ರವಾಸಿ ಮಾರ್ಗದರ್ಶಕರು ಬೇಕಾಗಿದ್ದಾರೆ: ಆಸಕ್ತರು ಇಂದೇ ಅರ್ಜಿ ಸಲ್ಲಿಸಿ..

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ