6
  • Latest

ರೈತರ ನೆರವಿಗೆ “ರಾಣೇಬೆನ್ನೂರು ಕಾ ರಾಜಾ”

ದರೋಡೆ ಮಾಡಿದ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ–ದಂಡ

ದರೋಡೆ ಮಾಡಿದ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ–ದಂಡ

ಶಾಲಾ-ಕಾಲೇಜು ಸಮಯಕ್ಕೆ ಬಾರದ ಬಸ್: ಹೆಚ್ಚುವರಿ ಬಸ್‌ಗೆ ಆಗ್ರಹಿಸಿ ದೇವಗಿರಿಯಲ್ಲಿ ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ

ಶಾಲಾ-ಕಾಲೇಜು ಸಮಯಕ್ಕೆ ಬಾರದ ಬಸ್: ಹೆಚ್ಚುವರಿ ಬಸ್‌ಗೆ ಆಗ್ರಹಿಸಿ ದೇವಗಿರಿಯಲ್ಲಿ ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ

ದಶಕಗಳ ಕಾಯುವಿಕೆಗೆ ತೆರೆ: ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ!

ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ: ಹಕ್ಕುಪತ್ರ ವಿತರಿಸಿದ ಶಾಸಕ ಮಾನೆ ಶ್ರೀನಿವಾಸ

ADVERTISEMENT
  • Home
Friday, September 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ರೈತರ ನೆರವಿಗೆ “ರಾಣೇಬೆನ್ನೂರು ಕಾ ರಾಜಾ”

Kiran Reporter Haveri by Kiran Reporter Haveri
September 3, 2026
in ರಾಜ್ಯ
advt advt advt
ADVERTISEMENT

ರೈತರ ನೆರವಿಗೆ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವದ ವಿಶೇಷ ಸಂಕಲ್ಪ

ರಾಣೇಬೆನ್ನೂರು: ರೈತರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆ ವತಿಯಿಂದ ಈ ಬಾರಿ ವಿನೂತನವಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ.

ADVERTISEMENT

ಕಳೆದ 17 ವರ್ಷಗಳಿಂದ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಸಂಸ್ಥೆ, 2026ರ ಗಣೇಶೋತ್ಸವವನ್ನು “ನಮ್ಮ ಚಿತ್ತ ರೈತನತ್ತ–2026” ಎಂಬ ವಿಶೇಷ ಸಂಕಲ್ಪದೊಂದಿಗೆ ಆಚರಿಸುತ್ತಿದೆ.

ADVERTISEMENT
ADVERTISEMENT

ಮುಂಗಾರು ಆರಂಭದಲ್ಲಿ ಮಳೆಯ ಕೊರತೆಯಿಂದ ರೈತರು ಬಿತ್ತನೆ ಕಾರ್ಯದಲ್ಲಿ ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ, ಈ ಬಾರಿ ಗಣೇಶೋತ್ಸವದ ಅದ್ದೂರಿತನಕ್ಕೆ ಕಡಿವಾಣ ಹಾಕಿ ಒಂದು ದಿನ ಮಾತ್ರ ವಿಜೃಂಭಣೆಯಿಂದ ಉತ್ಸವ ನಡೆಸಿ, ಉಳಿತಾಯವಾಗುವ ಹಣವನ್ನು ಅತಿ ಸಣ್ಣ ರೈತ ಕುಟುಂಬಗಳ ನೆರವಿಗೆ ಬಳಸಲು ಸಂಸ್ಥೆ ನಿರ್ಧರಿಸಿದೆ.

Advertisement. Scroll to continue reading.

ರಾಣೇಬೆನ್ನೂರು ತಾಲೂಕಿನ ಆಯ್ದ 16 ಗ್ರಾಮಗಳ ಸುಮಾರು 2,800ರಿಂದ 3,000 ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ ₹5,000 ಧನಸಹಾಯ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಅರ್ಹ ರೈತರಿಂದ ಗಣೇಶ ಚತುರ್ಥಿಯ ನಂತರ ಆಯಾ ಗ್ರಾಮಗಳಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆಯ ಬಳಿಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸೋಮಲಾಪುರ, ಹೊಸಚಂದಾಪುರ, ಮೈದೂರು, ಅಂಕಸಾಪುರ, ನದಿಹರಳಹಳ್ಳಿ, ವಡೇರಾಯನಹಳ್ಳಿ, ಪತ್ತೆಪುರ, ತುಮ್ಮಿನಕಟ್ಟಿ, ಹಳೇಚಂದಾಪುರ, ಶ್ರೀರಾಮಪುರ ತಾಂಡಾ, ಕೋಡಿಯಾಲ, ಕಮದೋಡ, ಚೌಡಯ್ಯದಾನಪುರ, ಖಂಡೇರಾಯನಹಳ್ಳಿ, ತೆರೇದಹಳ್ಳಿ ಹಾಗೂ ಕಮದೋಡ ತಾಂಡಾ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.

“ಇದು ಕೇವಲ ಧನಸಹಾಯವಲ್ಲ; ಸಂಕಷ್ಟದ ಸಮಯದಲ್ಲಿ ಅನ್ನದಾತನೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವ ಪ್ರಯತ್ನ” ಎಂದು ಸಂಸ್ಥೆ ತಿಳಿಸಿದೆ.

Advertisement. Scroll to continue reading.

ಸೆ.14ರಂದು ಮಹಾಗಣಪತಿ ಪ್ರತಿಷ್ಠಾಪನೆ

2026ರ 18ನೇ ವರ್ಷದ ‘ರಾಣೇಬೆನ್ನೂರು ಕಾ ರಾಜಾ’ ಮಹಾಗಣಪತಿ ಉತ್ಸವವು ಸೆಪ್ಟೆಂಬರ್ 14ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ದರ್ಶನ, ಪ್ರಸಾದ ವಿತರಣೆ ಹಾಗೂ ವಿಶೇಷ ರಕ್ತದಾನ ಶಿಬಿರ ನಡೆಯಲಿದೆ.

Advertisement. Scroll to continue reading.

ರಾತ್ರಿ 11 ಗಂಟೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬಳಿಕ ಕುರುಬಗೇರಿಯ ಬನಶಂಕರಿ ರಸ್ತೆಯಲ್ಲಿರುವ ಕೊಪ್ಪದವರ ಓಣಿಯ ಬಾವಿಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಿ, ಸಾವಿರಾರು ಕುಟುಂಬಗಳಿಗೆ ಆಹಾರ ಮತ್ತು ಔಷಧಿ ಕಿಟ್‌ಗಳನ್ನು ವಿತರಿಸಿದ್ದ ಸಂಸ್ಥೆ, ಇದೇ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿ ಅನ್ನದಾತನ ನೆರವಿಗೆ ಮುಂದಾಗಿದೆ

“ರೈತ ನಕ್ಕರೆ ದೇಶ ನಗುತ್ತದೆ, ಹೊಲ ಹಸಿರಾದರೆ ರೈತನ ಬದುಕು ಹಸನಾಗುತ್ತದೆ” ಎಂಬ ಸಂದೇಶದೊಂದಿಗೆ ಈ ವರ್ಷದ ಗಣೇಶೋತ್ಸವವನ್ನು ರೈತಪರ ಸೇವೆಗೆ ಸಮರ್ಪಿಸಲಾಗಿದೆ.

ShareSendTweetShare
ADVERTISEMENT
Previous Post

ದರೋಡೆ ಮಾಡಿದ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ–ದಂಡ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.