ಕುಮಟಾ: ಮೂರೂರಿನಲ್ಲಿರುವ ಧನ್ವಂತರಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂ ಹಣ ರವಾನಿಸಿದ್ದಾರೆ.
ಈ ದೇಣಿಗೆಯ ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಘಟಕದ ಯೋಜನಾಧಿಕಾರಿ ಕಲ್ಮೇಶ ಅವರು ದೇಗುಲ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಸಂಘದ ಮೂರೂರು ವಲಯದ ಮೇಲ್ವಿಚಾರಕ ನಾಗಪ್ಪ, ಒಕ್ಕೂಟದ ಅಧ್ಯಕ್ಷ ಜಗದೀಶ ನಾಯಕ, ಕಮಲ ಭಟ್ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳ ಉಪಸ್ಥಿತಿತರಿದ್ದರು.





Discussion about this post