6
  • Latest
Yakshagana | ಯಕ್ಷಶ್ರೀ: ಕೃಷಿ ಜೊತೆ ಬಿಡುವಿಲ್ಲದ ಪೌರೋಹಿತ್ಯದ ಬದುಕು. ಆದರೂ ಕಲಾ ಸೇವೆಗೆ ಆಗಿಲ್ಲ ಸಮಯದ ಕೊರತೆ!

Yakshagana | ಯಕ್ಷಶ್ರೀ: ಕೃಷಿ ಜೊತೆ ಬಿಡುವಿಲ್ಲದ ಪೌರೋಹಿತ್ಯದ ಬದುಕು. ಆದರೂ ಕಲಾ ಸೇವೆಗೆ ಆಗಿಲ್ಲ ಸಮಯದ ಕೊರತೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, June 27, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Yakshagana | ಯಕ್ಷಶ್ರೀ: ಕೃಷಿ ಜೊತೆ ಬಿಡುವಿಲ್ಲದ ಪೌರೋಹಿತ್ಯದ ಬದುಕು. ಆದರೂ ಕಲಾ ಸೇವೆಗೆ ಆಗಿಲ್ಲ ಸಮಯದ ಕೊರತೆ!

AchyutKumar by AchyutKumar
in ಲೇಖನ

ಕೃಷಿ, ಪೌರೋಹಿತ್ಯದ ಜೊತೆಗೆ ಯಕ್ಷಗಾನಗಳಲ್ಲಿ (Yakshagana) ಮದ್ದಲೆ ವಾದಕರಾಗಿ ಪರಿಚಿತರಾದವರು ಗಾಣಗದ್ದೆಯ ಚಂದ್ಗುಳಿಯ ಸುಬ್ರಾಯ ಭಟ್ಟ. ಗಾಣಗದ್ದೆ ಸುಬ್ಬಣ್ಣ ಎಂದೇ ಚಿರಪರಿಚಿತರಾಗಿರುವ ಅವರು ಯಲ್ಲಾಪುರ ತಾಲೂಕಿನ ಚಂದ್ಗುಳಿಯ ಗಾಣಗೆದ್ದೆ ನಿವಾಸಿ.

ಏಳನೇ ತರಗತಿಯವರೆಗಿನ ಶಾಲಾ ವಿದ್ಯಾಭ್ಯಾಸದ ನಂತರ ಶೃಂಗೇರಿಯಲ್ಲಿ ಕೆಲವು ಕಾಲ ಮಂತ್ರಾಭ್ಯಾಸವನ್ನು ಮಾಡಿದರು. ಬಾಲ್ಯದಿಂದಲೂ ಇದ್ದ ಯಕ್ಷಗಾನಾಸಕ್ತಿ ಅವರ ಬೆಳವಣಿಗೆಯ ಜೊತೆಯೇ ಹೆಚ್ಚಾಯಿತು. ಅದರಲ್ಲೂ ಮದ್ದಳೆ ಕಲಿಕೆಯ ಹಂಬಲ ತೀವ್ರವಾದಾಗ 1980ರಲ್ಲಿ ಕೋಟಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಯಾದರು. ನಾರ್ಣಪ್ಪ ಊಪ್ಪುರು, ದುರ್ಗಪ್ಪ ಗುಡಿಗಾರ, ಕೆ.ಪಿ ಹೆಗಡೆ, ಕವ್ವಾಳೆ ಗಣಪತಿ ಭಾಗವತರಂಥ ಮಹಾನ್ ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. ಮೂರು ವರ್ಷ ಕವ್ವಾಳೆ ಗಣಪತಿ ಭಾಗವತರು ಮತ್ತು ಶಂಕರ ಭಾಗವತರು ಶಿಕ್ಷಕರಾಗಿದ್ದ ಕವಡಿಕೆರೆಯಲ್ಲಿ ಆಯೋಜನೆಗೊಂಡಿದ್ದ ಯಕ್ಷಗಾನ ತರಗತಿಯಲ್ಲಿ ಮೂರು ತಿಂಗಳು ಮದ್ದಳೆವಾದನದ ಕುರಿತು ಅಭ್ಯಾಸ ಮಾಡಿದರು.

ನಂತರ ಚಂದಗುಳಿ, ಕವಡಿಕೆರೆ ದೇವಳಗಳಲ್ಲಿ ಮತ್ತು ಊರಿನಲ್ಲಿ ನಡೆಯುವ ಆಟ ಕೂಟಗಳಲ್ಲಿ ಭಾಗವಹಿಸುತ್ತ ಅನುಭವ ಸಂಪಾದಿಸಿದರು. ಲಕ್ಷ್ಮೀನಾರಾಯಣ ತಾಳಮದ್ದಳೆ ಕೂಟ ದೇವರಗೆದ್ದೆ, ಮಹಾಗಣಪತಿ ತಾಳಮದ್ದಳೆ ಕೂಟ ಮಾಗೋಡು ಮುಂತಾದ ತಾಳಮದ್ದಳೆ ತಂಡಗಳಲ್ಲಿ ಮದ್ದಳೆಗಾರರಾಗಿ ಭಾಗವಹಿಸಿದರು. ಯಲ್ಲಾಪುರ, ಅಂಕೋಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜರುಗುವ ಹವ್ಯಾಸಿ ಆಟಗಳಲ್ಲಿ ಅವರದ್ದು ಖಾಯಂ ಹಾಜರಾತಿ. ಇದರೊಂದಿಗೆ ಹವ್ಯಾಸಿ ಕಲಾಸಂಘಗಳಲ್ಲಿ ಶಿಕ್ಷಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.

2000ನೇ ಇಸ್ವಿಯಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ತಾಳಮದ್ದಳೆ ಸ್ಪರ್ಧೆಯ ಮದ್ದಳೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಅವರದ್ದು. ಸುಬ್ಬಣ್ಣನವರು ಭಾಗವಹಿಸಿರುವ 25ಕ್ಕೂ ಹೆಚ್ಚು ಕಾರ್ಯಕ್ರಮಗಳು ಕಾರವಾರ ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಿoದ ಪ್ರಸಾರವಾಗಿದೆ. ಹಲವಾರು ಸಂಘಸoಸ್ಥೆಗಳಿoದ ಸನ್ಮಾನಿತರಾಗಿರುವ ಸುಬ್ಬಣ್ಣ ಉತ್ತಮ ಕೃಷಿಕರುಕೂಡ ಹೌದು. ಹಿತಮಿತ ಮಾತು, ಸರಳ ನಡೆವಳಿಕೆ, ಕರ್ತವ್ಯದಲ್ಲಿರುವ ನಿಷ್ಠೆ, ಶ್ರದ್ಧೆಯ ಕಾರಣ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.

-ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
Previous Post

Training | ತರಬೇತಿ ಉಚಿತ – ಉದ್ಯಮಿಯಾಗುವುದು ಖಚಿತ: ವಾಣಿಜ್ಯ ತೋಟಗಾರಿಕೆ ಮಾಡುವುದು ಹೇಗೆ?

Next Post

Gurupurnima | ದೇವರ ಸನ್ನಿಧಿಯಲ್ಲಿ ಗುರು ನಮನ – ಸಂಗೀತ ಆಲಾಪ: ಧ್ವಜಾರೋಹಣ ನಡೆಸಿ ಇಲ್ಲಿ ಬನ್ನಿ!

Next Post

Gurupurnima | ದೇವರ ಸನ್ನಿಧಿಯಲ್ಲಿ ಗುರು ನಮನ - ಸಂಗೀತ ಆಲಾಪ: ಧ್ವಜಾರೋಹಣ ನಡೆಸಿ ಇಲ್ಲಿ ಬನ್ನಿ!

Independence Day | ರಾಷ್ಟ್ರಧ್ವಜ ಹಿಡಿದು ನಗರ ಸಂಚಾರ ನಡೆಸಿದ ಜಿಲ್ಲಾಧಿಕಾರಿ

Land | ಉಳುವವನೇ ಭೂ ಒಡೆಯ: ಆದರೂ ರೈತರ ಭೂಮಿ ಮೇಲೆ ಸರ್ಕಾರದ ಹಕ್ಕು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.