6
  • Latest

ಮಹಿಳಾ ಅಧಿಕಾರಿಗೆ ವಿಚಿತ್ರ ಶಿಕ್ಷೆ: ದಿನವಿಡಿ ಕಾದರೂ ಸಿಗಲಿಲ್ಲ ಅಧಿಕಾರ ಖುರ್ಚಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಹಿಳಾ ಅಧಿಕಾರಿಗೆ ವಿಚಿತ್ರ ಶಿಕ್ಷೆ: ದಿನವಿಡಿ ಕಾದರೂ ಸಿಗಲಿಲ್ಲ ಅಧಿಕಾರ ಖುರ್ಚಿ!

AchyutKumar by AchyutKumar
in ಸ್ಥಳೀಯ

ಕಾರವಾರ: ಹಾವೇರಿಯಿಂದ ಕಾರವಾರಕ್ಕೆ ಮುಂಬಡ್ತಿಪಡೆದು ವರ್ಗವಾಗಿ ಬಂದ ಮಹಿಳಾ ಅಧಿಕಾರಿಯೊಬ್ಬರು ಎರಡು ದಿನ ಕಾದರೂ ಈ ಹಿಂದೆ ಇದ್ದ ಅಧಿಕಾರಿ ಖುರ್ಚಿ ಬಿಟ್ಟು ಕೊಟ್ಟಿಲ್ಲ.

ADVERTISEMENT

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಸೆ 11ರಂದು ಸರೋಜ ವಿ ಹಳಕಟ್ಟಿ ಅವರಿಗೆ ಮುಂಬಡ್ತಿ ನೀಡಿ ಆದೇಶಿಸಿತ್ತು. ಅದರ ಪ್ರಕಾರ ಸರೋಜ ಹಳಕಟ್ಟಿ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಾರವಾರಕ್ಕೆ ಹೋಗಿದ್ದರು. ಆದರೆ, ಅಲ್ಲಿ ಅವರಿಗೆ ಅಧಿಕಾರದ ಖುರ್ಚಿ ಸಿಗಲಿಲ್ಲ. ಕಾರಣ ಈ ಹಿಂದೆ ಅದೇ ಹುದ್ದೆಯಲ್ಲಿದ್ದ ಜಿ ಸತೀಶ್ ಎಂಬಾತರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ.

ಇದರಿಂದ ನೊಂದ ಅವರು ಜಿಲ್ಲಾ ಪಂಚಾಯತ ಕಚೇರಿಗೆ ಹೋಗಿ ಅಲ್ಲಿನ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಆಗ ಕಚೇರಿ ಟಪಾಲಿನಲ್ಲಿ ವಿಚಾರಿಸುವ ಬಗ್ಗೆ ಉತ್ತರ ಬಂದಿದ್ದು, ಅದರ ಪ್ರಕಾರ ತಾವು ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಗ್ಗೆ ಅವರು ಅಲ್ಲಿ ವರದಿ ಮಾಡಿಕೊಂಡರು. ಇದಾದ ನಂತರ ತಮ್ಮ ಕಚೇರಿಗೆ ತೆರಳಿ ಕಚೇರಿ ವ್ಯವಸ್ಥಾಪಕರಿಂದ ಫೋನ್ ಮಾಡಿಸಿದರೂ ಈ ಹಿಂದಿನ ಅಧಿಕಾರಿ ಬಂದು ಬೀಗದ ಕೀ ಕೊಡಲಿಲ್ಲ. ವರ್ಗಾವಣೆ ಆದೇಶ ಬಂದ ಕೂಡಲೇ ಈ ಹಿಂದಿನ ಅಧಿಕಾರಿ ಕಚೇರಿ ಎಲ್ಲಾ ಕಂಪ್ಯುಟರ್’ನ ಪಾಸ್‌ವರ್ಡ ಬದಲಿಸಿದ್ದು, ಬೆಂಗಳೂರು ಕಚೇರಿಯಿಂದ ಬಂದ ಇಮೇಲ್ ನೋಡಲಾಗದೇ ಸಿಬ್ಬಂದಿ ಪರದಾಟ ನಡೆಸಿದರು.

Advertisement. Scroll to continue reading.

ಈ ಹಿಂದೆ ದಶಕಗಳ ಕಾಲ ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಎಲ್ಲಿಯೂ ಅವರಿಗೆ ಈ ರೀತಿಯ ಕೆಟ್ಟ ಅನುಭವ ಆಗಿರಲಿಲ್ಲ. ನಿವೃತ್ತಿ ಅಂಚಿನಲ್ಲಿರುವ ಸರೋಜ ಹಳಕಟ್ಟಿ ಅವರು `ಸೇವಾ ದಿನದ ಕೊನೆ ದಿನಗಳಲ್ಲಾದರೂ ಮುಂಬಡ್ತಿ ದೊರೆಯಿತು’ ಎಂಬ ಖುಷಿಯಲ್ಲಿದ್ದರು. ಆದರೆ, ಮೊದಲ ದಿನವೇ ಅವರು ಸಾಕಷ್ಟು ಸಮಸ್ಯೆ ಅನುಭವಿಸಿದರು. ಮರುದಿನ ಸಹ ಕರ್ತವ್ಯಕ್ಕೆ ಹೋದಾಗಲೂ ತೊಂದರೆ ಎದುರಿಸಿದರು. ಎರಡು ದಿನ ಕಾದರೂ ಅವರಿಗೆ ಕಾರವಾರದಲ್ಲಿ ಸೂಕ್ತ ಸ್ಪಂದನೆ ಸಿಗಲಿಲ್ಲ.

Advertisement. Scroll to continue reading.

ಕಳೆದ ಒಂದು ವರ್ಷದ ಹಿಂದೆಯೇ ಸರೋಜ ಅವರಿಗೆ ಮುಂಬಡ್ತಿ ಬರಬೇಕಿತ್ತು. ಆದರೆ, ಮುಂಬಡ್ತಿಗೂ ತಡವಾಯಿತು. ಮುಂಬಡ್ತಿ ಪಡೆದು ಕಾರವಾರಕ್ಕೆ ಬಂದಾಗ ಅವರಿಗೆ ಜಿಲ್ಲಾ ಪಂಚಾಯತ ಅಧಿಕಾರಿಗಳು ಒಳಗೆ ಬಿಟ್ಟುಕೊಳ್ಳಲಿಲ್ಲ. ಇನ್ನೂ ಈಗಾಗಲೇ ಈ ಹುದ್ದೆಯಲ್ಲಿರುವ ಸತೀಶ್ ಅವರ ಮಾತೃ ಇಲಾಖೆ ಇದಲ್ಲ. ಮಾತೃ ಇಲಾಖೆಗೆ ಹಿಂತಿರುಗಿದರೆ ಜಿಲ್ಲಾ ಮಟ್ಟದ ಹುದ್ದೆ ಸಿಗಲ್ಲ ಎಂಬ ಕಾರಣಕ್ಕೆ ಅವರು ಆ ಖುರ್ಚಿ ಬಿಡಲು ಸಿದ್ಧರಿಲ್ಲ ಎಂಬ ಮಾತು ದಟ್ಟವಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ಎರಡು ದಿನ ಗುದ್ದಾಡಿ ಈ ಹಿಂದೆ ಆ ಹುದ್ದೆಯಲ್ಲಿದ್ದ ಅಧಿಕಾರಿ ತಾನೇ ಮುಂದುವರೆಯುವ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, `ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಖುರ್ಚಿಯಲ್ಲಿ ಅಂಥ ವಿಶೇಷ ಏನಿದೆ’? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

Previous Post

ಬಡ ಹೋರಾಟಗಾರಿನಿಗೆ ಸಿಗಲ್ಲ ಚುನಾವಣಾ ಟಿಕೆಟು!

Next Post

ಜಿಂಕೆ ಹಿಂದೆ ಹೋದವನಿಗೆ ಜೈಲು: ವನ್ಯಜೀವಿಗೆ ಇದ್ದಿದ್ದು ಎರಡೇ ಕಾಲು!

Next Post

ಜಿಂಕೆ ಹಿಂದೆ ಹೋದವನಿಗೆ ಜೈಲು: ವನ್ಯಜೀವಿಗೆ ಇದ್ದಿದ್ದು ಎರಡೇ ಕಾಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ