6
  • Latest

ಡಿಜಿಟಲ್ ಇಂಡಿಯಾದ ನೈಜ ಫಲಾನುಭವಿ ಈತ: ಲಂಚ ಸ್ವೀಕಾರಕ್ಕೂ ಫೋನ್ ಪೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಡಿಜಿಟಲ್ ಇಂಡಿಯಾದ ನೈಜ ಫಲಾನುಭವಿ ಈತ: ಲಂಚ ಸ್ವೀಕಾರಕ್ಕೂ ಫೋನ್ ಪೆ!

AchyutKumar by AchyutKumar
September 16, 2024
in ರಾಜ್ಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಲಂಚ ಸ್ವೀಕಾರ ನಡೆಯುತ್ತಿದೆ. ನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡುವವರಿಗೆ ಅಲ್ಲಿನ ಸಿಬ್ಬಂದಿ ಕೈ ಸನ್ನೆ, ಬಾಯಿ ಸನ್ನೆ ಹಾಗೂ ಕ್ಯಾಲ್ಕುಲೇಟರ್ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ಪಾವತಿಗೆ ನಿಮ್ಮಲ್ಲಿ ಹಣ ಇಲ್ಲದಿದ್ದರೆ ಫೋನ್ ಫೇ ಮೂಲಕ ಸಹ ಕಾಣಿಕೆ ಪಾವತಿಸುವ ವ್ಯವಸ್ಥೆ ಉಪನೊಂದಣಾಧಿಕಾರಿ ಕಚೇರಿಗಳಲ್ಲಿದೆ!

ಪ್ರಸ್ತುತ ಎಲ್ಲಾ ಬಗೆಯ ನೊಂದಣಿಗಳು ಬ್ಯಾಂಕ್ ಚಲನ್ ಮೂಲಕ ನಡೆಯುತ್ತಿದೆ. ಅದಕ್ಕೆ ಜನ ಸಹ ಒಗ್ಗಿಕೊಂಡಿದ್ದು, ಅಧಿಕಾರಿ ಹಾಗೂ ಸಿಬ್ಬಂದಿಯೂ ಆನ್‌ಲೈನ್ ಲಂಚ ಸ್ವೀಕರಿಸುತ್ತಿದ್ದಾರೆ. ಕೆಲ ದಿನದ ಹಿಂದೆ ಯುವಕನೊಬ್ಬ ವಿವಾಹ ನೊಂದಣಿಗೆ ಹಳಿಯಾಳದ ನೊಂದಣಾಧಿಕಾರಿ ಕಚೇರಿಗೆ ತೆರಳಿದ್ದು, ವಿವಾಹ ನೊಂದಣಿ ಪತ್ರ ಪಡೆಯುವ ವೇಳೆ ಫೋನ್ ಪೆ ಮೂಲಕ 350 ರೂ ಲಂಚ ನೀಡಿದ್ದಾನೆ. ಆ ಯುವಕನ ಬಳಿ 500 ರೂಪಾಯಿಗೆ ಅಲ್ಲಿನ ಅಧಿಕಾರಿ ಬೇಡಿಕೆಯಿಟ್ಟಿದ್ದು, ಕೊನೆಗೆ 350 ರೂಪಾಯಿಯನ್ನಾದರೂ ಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಅವರ ಕಾಟ ಸಹಿಸಲಾಗದೇ ಸಿಬ್ಬಂದಿ ಖಾತೆಗೆ ಆ ಯುವಕ ಹಣ ಹಾಕಿದ್ದಾನೆ.

ADVERTISEMENT
ADVERTISEMENT

ಸಿಸಿ ಕ್ಯಾಮರಾ ಅಗತ್ಯ

Advertisement. Scroll to continue reading.

ಉಪನೊಂದಣಾಧಿಕಾರಿ ಕಚೇರಿಗಳ ಒಳಭಾಗದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಭ್ರಷ್ಟರ ಪಾಲಿಗೆ ವರದಾನವಾಗಿದೆ. ಅನೇಕ ಕಡೆ ಅಧಿಕೃತ ದಸ್ತಾವೇಜು ಬರಹಗಾರರಿಗೆ ಬೆಲೆ ನೀಡದೇ ಎಜೆಂಟರ ಮೂಲಕ ದಸ್ತು ನಡೆಸುವ ಕಾರ್ಯ ನಡೆದಿದ್ದು, ಎಜೆಂಟರು ದುಪ್ಪಟ್ಟು ಹಣ ನೀಡುತ್ತಿರುವುದೇ ಇದಕ್ಕೆ ಕಾರಣ.

ಯಾವುದಕ್ಕೆ ಎಷ್ಟು ದರ?

ನೊಂದಣಾಧಿಕಾರಿ ಕಚೇರಿಯಲ್ಲಿ ಎಲ್ಲಾ ಕೆಲಸಗಳಿಗೂ ಇಂತಿಷ್ಟು ಎಂದು ಲಂಚದ ದರ ನಿಗದಿಯಾಗಿದೆ. ವಿವಾಹ ನೊಂದಣಿಗೆ ಕನಿಷ್ಟ 500ರೂ, ಭೂ ನೊಂದಣಿಗೆ ಕನಿಷ್ಟ 10 ಸಾವಿರ ರೂ ಸೇರಿ ಬಗೆ ಬಗೆಯ ಕೆಲಸಗಳಿಗೆ ಬಗೆ ಬಗೆಯ ದರವನ್ನು ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿ ಮೂಲಕ ಈ ಹಣ ಸ್ವೀಕಾರವಾಗುತ್ತಿದೆ.

Advertisement. Scroll to continue reading.

ಯಲ್ಲಾಪುರದಲ್ಲಿ ಬೇರೆ ವ್ಯವಸ್ಥೆ!

ನೊಂದಣಿ, ದೃಢೀಕೃತ ಪ್ರತಿ ಸೇರಿ ವಿವಿಧ ಕೆಲಸಗಳಿಗಾಗಿ ಯಲ್ಲಾಪುರ ಉಪನೊಂದಣಿ ಕಚೇರಿಗೆ ಆಗಮಿಸುವವರಿಂದ ಅಲ್ಲಿನ ಸಿಬ್ಬಂದಿ ನೇರವಾಗಿ ಹಣ ಪಡೆಯುತ್ತಾರೆ. ಕಾವೇರಿ ಆನ್‌ಲೈನ್ ಮೂಲಕ ಪಡೆಯುವ ದಾಖಲೆಗಳಿದ್ದರೆ ಅಲ್ಲಿನ ಸಿಬ್ಬಂದಿಯೊಬ್ಬರು ತಾವೇ ನಡೆಸುವ ಕಂಪ್ಯುಟರ್ ಸೆಂಟರಿಗೆ ಜನರನ್ನು ಕಳುಹಿಸುತ್ತಾರೆ. ಉಪನೊಂದಣಾಧಿಕಾರಿ ಕಚೇರಿ ಸಿಬ್ಬಂದಿಯ ಸಹೋದರ ಮಳಿಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಸರ್ಕಾರಕ್ಕೆ ಪಾವತಿಯಾಗುವ ಹಣಕ್ಕಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ಇಲ್ಲಿ ದಾಖಲೆಗಳು ಮಾರಾಟವಾಗುತ್ತದೆ.

ShareSendTweetShare
ADVERTISEMENT
Previous Post

ನೀರಾವರಿ ಕ್ಷೇತ್ರಕ್ಕೆ 500 ಕೋಟಿ ರೂ: ಮುಖ್ಯಮಂತ್ರಿ ಭೇಟಿಯಿಂದ ಶಾಸಕರಿಗೆ ಸಿಕ್ಕಿದ್ದೇನು?

Next Post

ಕಾರಿಗೆ ಗುದ್ದಿದ ಬಸ್ಸು: ಆಸ್ಪತ್ರೆಗೆ ಹೋಗುತ್ತಿದ್ದವ ಸ್ಮಶಾನಪಾಲು

Next Post

ಕಾರಿಗೆ ಗುದ್ದಿದ ಬಸ್ಸು: ಆಸ್ಪತ್ರೆಗೆ ಹೋಗುತ್ತಿದ್ದವ ಸ್ಮಶಾನಪಾಲು

ತಂತ್ರಜ್ಞಾನ ಆಧಾರಿತ ನಾಟಕಕ್ಕೆ ಭಾರೀ ಮೆಚ್ಚುಗೆ

ಸ್ಕೂಟಿಗೆ ಗುದ್ದಿದ ಬೈಕು: ಸವಾರನಿಗೆ ಗಾಯ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.