6
  • Latest

ನಿನ್ನೆ ಮೊನ್ನೆಯವರೆಗೂ ಸ್ಮಶಾನ.. ಈಗ ವಸತಿ ನಿವೇಶನ: ಹೆಣಗಳ ಮೇಲೆ ಮನೆ ಕಟ್ಟುವವರ ಕಥೆ ಏನು?!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ನಿನ್ನೆ ಮೊನ್ನೆಯವರೆಗೂ ಸ್ಮಶಾನ.. ಈಗ ವಸತಿ ನಿವೇಶನ: ಹೆಣಗಳ ಮೇಲೆ ಮನೆ ಕಟ್ಟುವವರ ಕಥೆ ಏನು?!

AchyutKumar by AchyutKumar
October 3, 2024
in ವಿಡಿಯೋ
advt advt advt
ADVERTISEMENT

ಕಾರವಾರ: ಮಾಜಾಳಿ ದಂಡೇಭಾಗ ಮಜರೆಯಲ್ಲಿ ಸ್ಮಶಾನ ಭೂಮಿಗಾಗಿ ಹೋರಾಟ ನಡೆದಿದೆ. ಇಲ್ಲಿನ ಅಂಬಿಗ ಸಮುದಾಯದವರು ತಲೆತಲಾಂತರಗಳಿ0ದ ಸ್ಮಶಾನ ಎಂದು ನಂಬಿದ್ದ ಭೂಮಿ ಇದೀಗ ಖಾಸಗಿ ಎಂದು ಗೊತ್ತಾಗಿದ್ದು, ಅಲ್ಲಿದ್ದ ಸ್ಮಶಾನವನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ.. ಊರಿನವರದ್ದು ತಪ್ಪು ಎಂದು ಹೇಳುವ ಹಾಗಿಲ್ಲ. ಜಾಗದ ಮಾಲಕರಿಗೂ ಅನ್ಯಾಯ ಆಗುವುದನ್ನು ಸಹಿಸುವಂತಿಲ್ಲ!

ದಾ0ಡೇಭಾಗದ ಪೂರ್ವ ದಿಕ್ಕಿನಲ್ಲಿದ್ದ ಸಮುದ್ರ ಕಿನಾರೆ ಬಳಿ ಅನಾಧಿಕಾಲದಿಂದಲೂ ಮೀನುಗಾರ ಸಮುದಾಯದವರು ಶವ ಸಂಸ್ಕಾರ ನಡೆಸುತ್ತಿದ್ದರು. ಶವ ಸಂಸ್ಕಾರಕ್ಕೆ ಈ ಪ್ರದೇಶ ಶ್ರೇಷ್ಠ ಎಂದು ಅವರು ನಂಬಿದ್ದರು. ಈಚೆಗೆ ತಾವು ಸ್ಮಶಾನ ಎಂದು ನಂಬಿದ್ದ ಭೂಮಿಯ ಅಭಿವೃದ್ಧಿಯನ್ನು ನಡೆಸಿದ್ದರು. ಆದರೆ, ತಮ್ಮ ಮಾಲ್ಕಿ ಭೂಮಿಯಲ್ಲಿ ಶವ ಸಂಸ್ಕಾರ ನಡೆಸುವುದನ್ನು ಕಾರವಾರದಲ್ಲಿರುವ ಕುಟುಂಬದವರು ವಿರೋಧಿಸಿದ್ದರು. ಈ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿದರೂ ನಂತರವೂ ಆ ಭೂಮಿಯನ್ನು ಸ್ಮಶಾನ ಎಂದೇ ಅಂಬಿಗರು ನಂಬಿದ ಕಾರಣ ಜಾಗದ ಮಾಲಕರು ಗ್ರಾ ಪಂ ಕಚೇರಿಗೆ ದೂರು ನೀಡಿದ್ದರು.

ADVERTISEMENT
ADVERTISEMENT

ಊರಿನಲ್ಲಿ ಬೇರೆ ಕಡೆ ಸ್ಮಶಾನ ಇದ್ದರೂ ಬೇರೆಯವರ ಜಾಗದಲ್ಲಿ ಹೆಣ ಸುಡುತ್ತಿರುವ ಬಗ್ಗೆ ಗ್ರಾ ಪಂ ಅಧಿಕಾರಿಗಳು ಅವಲೋಕಿಸಿದ್ದು, ಜಾಗದ ಮಾಲಕರ ಅರ್ಜಿ ಮೇರೆಗೆ ಅಲ್ಲಿ ಹೆಣ ಸುಡಲು ತಡೆ ಒಡ್ಡಿದರು. ಸ್ಮಶಾನ ಅಭಿವೃದ್ಧಿಗಾಗಿ ತಂದಿರಿಸಿದ ಕಬ್ಬಿಣಗಳನ್ನು ಆ ಜಾಗದಿಂದ ಹೊರಗಿಟ್ಟರು. ಈ ವಿಷಯವಾಗಿ ಅಧಿಕಾರಿಗಳು ಹಾಗೂ ಊರಿನವರ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರು ಹಾಗೂ ತಹಶೀಲ್ದಾರರು ಸಹ ಈ ವೇಳೆ ಹಾಜರಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳಕ್ಕೆ ಹಾಜರಿದ್ದು ಜನ ಅವರ ಜೊತೆಯೂ ಜಗಳ ಮಾಡಿದರು.

Advertisement. Scroll to continue reading.
Advertisement. Scroll to continue reading.

`ಮಾಜಾಳಿ ಭಾಗದಲ್ಲಿ ಈಗಾಗಲೇ ನಾಲ್ಕು ಸ್ಮಶಾನಗಳಿವೆ. ಈ ಸಮುದಾಯದವರಿಗೆ ಬೇರೆ ಕಡೆ ಸ್ಮಶಾನ ಅಗತ್ಯವಿದ್ದರೆ ಅದಕ್ಕಾಗಿ ಜಾಗ ಹುಡುಕಾಟ ನಡೆಸಲಾಗುವುದು. ಆದರೆ, ಖಾಸಗಿಯವರ ಜಾಗದಲ್ಲಿ ಹೆಣ ಸುಡಲು ಆ ಜಾಗದ ಮಾಲಕರ ಅನುಮತಿ ಬೇಕಿದ್ದು, ಅತಿಕ್ರಮಣ ತೆರವು ಮಾಡುವಂತೆ ಮನವಿ ಮಾಡಿದ ಹಿನ್ನಲೆ ಗ್ರಾಮ ಪಂಚಾಯತದಿ0ದ ಅದನ್ನು ತೆರವು ಮಾಡಲಾಗಿದೆ’ ಎಂದು ತಹಶೀಲ್ದಾರ್ ನರೋನಾ ತಿಳಿಸಿದರು. ಆದರೆ, `ತಮಗೆ ಅದೇ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕು. ಬೇರೆ ಕಡೆ ಸ್ಮಶಾನ ಭೂಮಿ ಬೇಡ’ ಎಂದು ದಂಡೇಭಾಗದ 70ಕ್ಕೂ ಅಧಿಕ ಕುಟುಂಬದವರು ಪಟ್ಟು ಹಿಡಿದಿದ್ದು ಈ ವಿಷಯ ಇನ್ನೂ ಗೊಂದಲದಲ್ಲಿದೆ.

ತೆರವು ಕಾರ್ಯಾಚರಣೆ ವೇಳೆ ನಡೆದ ವಾಗ್ವಾದ-ಜಟಾಪಟಿಯ ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಯಕ್ಷಶ್ರೀ: ಯಕ್ಷವೇಷ ನೋಡಿ ತಾವೂ ಕುಣಿದ ಗಣಪತಿ ಭಟ್ಟರು

Next Post

ವನ್ಯಜೀವಿ ಹತ್ಯೆ ಗುಮಾನಿ: ಅರಣ್ಯ ಸಿಬ್ಬಂದಿ ಮೇಲೆಯೂ ನೂರು ಅನುಮಾನ!

Next Post

ವನ್ಯಜೀವಿ ಹತ್ಯೆ ಗುಮಾನಿ: ಅರಣ್ಯ ಸಿಬ್ಬಂದಿ ಮೇಲೆಯೂ ನೂರು ಅನುಮಾನ!

ಗ್ರಾಮದೇವಿ ಪ್ರಸಾದ: ನವರಾತ್ರಿ ಅಂಗವಾಗಿ ಅನ್ನ ಸಂತರ್ಪಣೆ

ಗ್ರಾಮ ಆಡಳಿತಾಧಿಕಾರಿ ಹೋರಾಟಕ್ಕೆ ಜನ ಸಾಮಾನ್ಯರ ಬೆಂಬಲ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.