6
  • Latest

ಗೋಕರ್ಣ | ಮುತ್ತಣ್ಣನ ಪಾಲಿನ ದೇವರು ಇನ್ನಿಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸಿನೆಮಾ

ಗೋಕರ್ಣ | ಮುತ್ತಣ್ಣನ ಪಾಲಿನ ದೇವರು ಇನ್ನಿಲ್ಲ!

AchyutKumar by AchyutKumar
in ಸಿನೆಮಾ

ಮಠ, ಎದ್ದೇಳು ಮಂಜುನಾಥ ಸೇರಿ ಹಲವು ಚಿತ್ರಗಳ ನಿರ್ದೇಶನ ಮಾಡಿದ್ದ ನಟ ಗುರುಪ್ರಸಾದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋಕರ್ಣದಲ್ಲಿ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದ ವ್ಯಕ್ತಿಯೊಬ್ಬರ ಜೀವನ ಬದಲಿಸಿದ್ದ ಗುರುಪ್ರಸಾದ ಆತ್ಮಹತ್ಯೆಯ ವಿಷಯ ಅವರ ಒಡನಾಡಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ADVERTISEMENT

2016ರಲ್ಲಿ `ಎರಡನೇ ಸಲ’ ಎಂಬ ಚಿತ್ರ ನಿರ್ಮಾಣಕ್ಕಾಗಿ ಗುರುಪ್ರಸಾದ ಗೋಕರ್ಣಕ್ಕೆ ಬಂದಿದ್ದರು. ಉದ್ದನೇಯ ಗಡ್ಡ, ಕಪ್ಪು ಕನ್ನಡಕ, ಹರಿದ ಬಟ್ಟೆ ಧರಿಸಿ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದ ಮುತ್ತಣ್ಣನನ್ನು ಅವರು ಗಮನಿಸಿದ್ದರು. ಆತನನ್ನು ಮಾತನಾಡಿಸಿ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿಯೂ ಹೇಳಿದ್ದರು. ಆದರೆ, ಮುತ್ತಣ್ಣ ಅದಕ್ಕೆ ಒಪ್ಪಿರಲಿಲ್ಲ.

ಅದಾಗಿಯೂ ಮುತ್ತಣ್ಣನ ಸ್ನೇಹ ಸಂಪಾದಿಸಿದ ಗುರುಪ್ರಸಾದ್ ಮೊದಲು ಅವರ ಕೂದಲು ತೆಗೆಸಿದ್ದರು. ನಂತರ ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿದ್ದರು. ಅದಾದ ಮೇಲೆ ಮುತ್ತಣ್ಣರನ್ನು ಬೆಂಗಳೂರಿಗೆ ಕರೆದೊಯ್ದು ತಿಂಗಳುಗಳ ಕಾಲ ಚಿಕಿತ್ಸೆಯನ್ನು ಕೊಡಿಸಿದರು. ತಾನು ಯಾರು? ಏನು? ಎಲ್ಲಿಯವ? ಎಂದು ಅರಿವಿಲ್ಲದ ಮುತ್ತಣ್ಣನಿಗೆ ನಿರ್ದೇಶಕ ಗುರುಪ್ರಸಾದ ಹೊಸ ಬದುಕು ಕಟ್ಟಿಕೊಟ್ಟಿದ್ದರು.

Advertisement. Scroll to continue reading.

ಗೋಕರ್ಣದಲ್ಲಿ ಅಲೆಯುತ್ತಿದ್ದ ಮುತ್ತಣ್ಣ ಡೈರೆಕ್ಟರ್ ಸ್ಪೇಶಲ್ ಗುರುಪ್ರಸಾದ ಅವರ ಕಣ್ಣಿಗೆ ಬಿದ್ದ ಕಾರಣ ಸಂಪೂರ್ಣವಾಗಿ ಬದಲಾಗಿದ್ದ. ಮಾನಸಿಕ ಅಸ್ವಸ್ಥನಾಗಿ ಭಿಕ್ಷೆ ಬೇಡುವುದನ್ನು ಬಿಟ್ಟು ಆತ ದುಡಿಯಲು ಶುರು ಮಾಡಿದ್ದ. ಅದಾದ ನಂತರವೂ ಅವರು ಮುತ್ತಣ್ಣನ ಜೊತೆ ಅನೇಕ ಸಲ ಕಾಣಿಸಿಕೊಂಡಿದ್ದರು. ಮುತ್ತಣ್ಣ ಸಾಮಾನ್ಯ ಜೀವನ ನಡೆಸಲು ಶುರು ಮಾಡಿದ ಮೇಲೆ ಅವರಿಗೆ ತಮ್ಮದೇ ಕಚೇರಿಯಲ್ಲಿ ಉದ್ಯೋಗ ಕೊಟ್ಟಿದ್ದರು.

Advertisement. Scroll to continue reading.

ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಕಡೆ ಗುರುಪ್ರಸಾದ ಓಡಾಟ ನಡೆಸಿದ್ದಾರೆ. ಅವರ ಜೊತೆ ಇಲ್ಲಿನ ಅನೇಕರು ಒಡನಾಟ ಹೊಂದಿದ್ದರು. ಮಾನಸಿಕ ಅಸ್ವಸ್ಥರಿಗೆ ಸಹ ಸ್ಪೂರ್ತಿ ತುಂಬಿ ಅವರನ್ನು ಮುಖ್ಯವಾಹಿನಿಗೆ ತಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದನ್ನು ಅವರ ಆಪ್ತರಿಂದ ಅರೆಗಿಸಿಕೊಳ್ಳಲಾಗುತ್ತಿಲ್ಲ.

 

Previous Post

ಸ್ಥಳೀಯ ಸಂಸ್ಥೆ | ಅಂಕೋಲಾ-ಯಲ್ಲಾಪುರದಲ್ಲಿ ಮರು ಚುನಾವಣೆ

Next Post

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

Next Post

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ