6
  • Latest

ಸಾವಿಗೂ ಮುನ್ನ ಸತ್ಯ ಹೇಳಿದ ವೃದ್ಧೆ: ಎರಡುವರೆ ಸಾವಿರದ ಆಸೆಗೆ ಕೊಲೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾವಿಗೂ ಮುನ್ನ ಸತ್ಯ ಹೇಳಿದ ವೃದ್ಧೆ: ಎರಡುವರೆ ಸಾವಿರದ ಆಸೆಗೆ ಕೊಲೆ!

AchyutKumar by AchyutKumar
November 11, 2024
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಹತ್ತು ವರ್ಷದ ಹಿಂದೆ ಪಾರ್ಶವಾಯುವಿಗೆ ಒಳಗಾಗಿದ್ದ 74ರ ವೃದ್ಧೆಯನ್ನು 2500ರೂ ಹಣದ ಆಸೆಗೆ ನೆರೆಮನೆಯಾತ ಕೊಲೆಗೆ ಪ್ರಯತ್ನಿಸಿದ್ದು, ಸಾಯುವ ಮುನ್ನ ವೈದ್ಯರಲ್ಲಿ ಈ ವಿಷಯ ಹೇಳಿ ಕಾಶಿ ತಾಂಡೇಲ್ ಸಾವನಪ್ಪಿದ್ದಾರೆ!

ಹೊನ್ನಾವರದ ಕಾಸರಕೋಡಿನ ಶಂಕರ್ ಮಾದೇವ ತಾಂಡೇಲ್ (42) ತಮ್ಮ ಪತ್ನಿ ಪತ್ನಿ ಅನುಸೂಯಾ ಹಾಗೂ ಆಕಾಶ, ರಚಿತಾ, ಗಣೇಶ ಜೊತೆ ವಾಸವಾಗಿದ್ದರು. ವೃದ್ಧ ತಾಯಿ ಕಾಶಿ ಮಾದೇವ ತಾಂಡೇಲ್ ಅವರನ್ನು ಸಹ ಈ ಕುಟುಂಬದವರು ಆರೈಕೆ ಮಾಡುತ್ತಿದ್ದರು. ಶಂಕರ್ ತಾಂಡೇಲ್ ಮೀನುಗಾರಿಕೆ ವೃತ್ತಿಯವರಾಗಿದ್ದು, ಅವರ ಪತ್ನಿ ಅನುಸೂಯಾ ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮೀನುಗಾರಿಕೆಗೆ ತೆರಳಿದ ಶಂಕರ್ ತಾಂಡೇಲ್ 3-4 ದಿನ ಬಿಟ್ಟು ಮನೆಗೆ ಮರಳುವುದು ಸಾಮಾನ್ಯವಾಗಿತ್ತು.

ADVERTISEMENT
ADVERTISEMENT

ನ 2ರಂದು ಮೀನುಗಾರಿಕೆಗೆ ತೆರಳಿದ್ದ ಶಂಕರ್ ತಾಂಡೇಲ್ ನ 6ರಂದು ಮನೆಗೆ ಬಂದಾಗ ಅವರ ತಾಯಿ ಕಾಶಿ ತಾಂಡೇಲ್ ಪೆಟ್ಟು ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಿಸಿದಾಗ `ಪಕ್ಕದಮನೆಯ ತುಕಾರಾಮ ತಾಂಡೇಲ್ ತನ್ನ ಕೊಲೆಗೆ ಪ್ರಯತ್ನಿಸಿದ’ ಎಂಬ ಮಾಹಿತಿ ನೀಡಿದ್ದರು. `ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಸ್ಟೂಲಿನಿಂದ ಹೊಡೆದಿದ್ದರಿಂದ ಗಾಯವಾಗಿದೆ. ತನ್ನ ಬಳಿಯಿದ್ದ 2500ರೂ ಹಣ ಸಹ ಕಾಣೆಯಾಗಿದೆ’ ಎಂದು ಕಾಶಿ ತಾಂಡೇಲ್ ಮಗನಲ್ಲಿ ಹೇಳಿದ್ದರು. ಆದರೆ, ತುಕಾರಾಮ ತಾಂಡೇಲ್ ಬಳಿ ವಿಚಾರಿಸಿದಾಗ ಆತ `ನಾನು ಹಾಗೇ ಮಾಡಿಲ್ಲ’ ಎಂದು ಹೇಳಿದ್ದ. ಪತ್ನಿಯ ಬಳಿ ವಿಚಾರಿಸಿದಾಗ `ತಾನು ಮೀನು ಮಾರಾಟಕ್ಕೆ ಹೋಗಿದ್ದೆ’ ಎಂದಿದ್ದರು. ಮಗಳನ್ನು ಕೇಳಿದಾಗ `ತಾನು ಟಿವಿ ನೋಡುತ್ತಿದ್ದೆ’ ಎಂದಿದ್ದರು. ತುಕಾರಾಮ ತಾಂಡೇಲ್ ಈ ಕೃತ್ಯ ಎಸಗಿದ ಬಗ್ಗೆ ಸಾಕ್ಷಿ ಇಲ್ಲದ ಕಾರಣ ಶಂಕರ್ ತಾಂಡೇಲ್ ಸಹ ಸುಮ್ಮನಾಗಿದ್ದರು.

Advertisement. Scroll to continue reading.
Advertisement. Scroll to continue reading.

ಗಾಯಗೊಂಡ ತಾಯಿಯನ್ನು ಶಂಕರ್ ತಾಂಡೇಲ್ ಅವರ ಪತ್ನಿ ಉಡುಪಿ ಕ್ಲಿನಿಕ್’ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಗುಣಮುಖವಾಗದ ಹಿನ್ನಲೆ ಶಂಕರ್ ತಾಂಡೇಲ್ ಅವರನ್ನು ಸ್ನೇಹಕುಂಜ ಆಸ್ಪತ್ರೆ, ಅದಾದ ಮೇಲೆ ಕಾಸರಕೋಡಿನಲ್ಲಿ ಚಿಕಿತ್ಸೆ ಕೊಡಿಸಿದರು. ನ 8ರಂದು ಶ್ರೀದೇವಿ ಆಸ್ಪತ್ರೆಗೆ ಕರೆತಂದು `ತಾಯಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ’ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರ ಬಳಿ ಕಾಶಿ ತಾಂಡೇಲ್ `ನಾನು ಶೌಚಕ್ಕೆ ಹೋದಾಗ ಪಕ್ಕದಮನೆಯ ತೂಕಾರಾಮ ತಾಂಡೇಲ್ ಕುತ್ತಿಗೆಗೆ ಟವಲ್ ಹಾಕಿ ಕೊಲೆಗೆ ಪ್ರಯತ್ನಿಸಿದ. ಸ್ಟೂಲ್’ನಿಂದ ಹಲ್ಲೆ ಮಾಡಿದ. ಹೀಗಾಗಿ ಪೆಟ್ಟಾಗಿದೆ’ ಎಂದು ವಿವರಿಸಿದ್ದರು.

ನ 10ರಂದು ನೋವು ತಾಳಲಾರದೇ ಕಾಶಿ ತಾಂಡೇಲ್ ಸಾವನಪ್ಪಿದ್ದು, ವೈದ್ಯರ ಬಳಿ ತಾಯಿ ನೀಡಿದ ಹೇಳಿಕೆ ಆಧರಿಸಿ ಶಂಕರ್ ತಾಂಡೇಲ್ ಪೊಲೀಸ್ ದೂರು ನೀಡಿದ್ದಾರೆ. `ತಾಯಿ ಸಾವಿನ ಬಗ್ಗೆ ತಮಗೆ ಅನುಮಾನವಿದೆ’ ಎಂದು ಶಂಕರ್ ತಾಂಡೇಲ್ ಹೇಳಿದ್ದಾರೆ.

ShareSendTweetShare
ADVERTISEMENT
Previous Post

ನೌಕರರ ಚುನಾವಣೆಗೂ ವ್ಯಾಪಿಸಿದ ರೆಸಾರ್ಟ ರಾಜಕೀಯ.. ಕಾಂಚಾಣದ ಸದ್ದು!

Next Post

ಪೊಲೀಸ್ ಅಧೀಕ್ಷಕರಿಂದಲೂ ಸತ್ಯ ಶೋಧನೆ: ಅದು ಕಳ್ಳ ಪಕ್ಷಿ ಅಲ್ಲ.. ಒಳ್ಳೆಯ ಹಕ್ಕಿ!

Next Post

ಪೊಲೀಸ್ ಅಧೀಕ್ಷಕರಿಂದಲೂ ಸತ್ಯ ಶೋಧನೆ: ಅದು ಕಳ್ಳ ಪಕ್ಷಿ ಅಲ್ಲ.. ಒಳ್ಳೆಯ ಹಕ್ಕಿ!

ಗಣೇಶ ಉತ್ಸವ: ನಿಮ್ಮೂರಿನಲ್ಲಿ ಲಕ್ಕಿ ಡ್ರಾ – ಬಹುಮಾನ ಇದ್ದರೆ ಇಲ್ಲಿ ತಿಳಿಸಿ…

ರೈತರ ಬಾಯಿಗೆ ಸಕ್ಕರೆ: ಕಬ್ಬು ಬೆಳೆಗಾರರಿಗೆ ಖುಷಿ ಸುದ್ದಿ ಕೊಟ್ಟ ಜಿಲ್ಲಾಧಿಕಾರಿ!

ಸೊರಬದಿಂದ ಬಂದವಳು ಶಿರಸಿಯಲ್ಲಿ ಸತ್ತಳು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.