ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
28 ವಯಸ್ಸಿನ ಹರವಿಂದರ್ ಕುಮಾರ್ ರಾಮ್ ಭದ್ರತೆಗಾಗಿ ಮೀಸಲಿದ್ದ ಬಂದೂಕಿನಿoದ ತಲೆಗೆ ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರವಿಂದರ್ ಕುಮಾರ್ ರಾಮ್ ಬಿಹಾರ ಮೂಲದವರು. ಅವರು CISF ಯೋಧರಾಗಿದ್ದರು.
ಹರವಿಂದರ್ ಕುಮಾರ್ ರಾಮ್ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಹಿನ್ನಲೆ ಭದ್ರತೆಗಾಗಿ ಅವರಿಗೆ ರೈಪಲ್ ನೀಡಲಾಗಿತ್ತು. ಭದ್ರತಾ ವಾಹನದಲ್ಲಿದ್ದ ವೇಳೆ ಅವರು ಗುಂಡು ಸಿಡಿಸಿಕೊಂಡಿದ್ದಾರೆ. ತಲೆಭಾಗಕ್ಕೆ ಗುಂಡು ಸಿಡಿದಿದ್ದರಿಂದ ತಲೆ ಎರಡು ಹೋಳಾಗಿದೆ. ಅದೇ ವಾಹನದಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ.
ಗುಂಡಿನ ದಾಳಿಯಿಂದ ಅವರು ಕೂತಿದ್ದ ವಾಹನ ಹಾಗೂ ಬಟ್ಟೆಗಳೆಲ್ಲವೂ ರಕ್ತಮಯವಾಗಿದ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಶವವನ್ನು ಜಿಲ್ಲಾಸ್ಪತ್ರೆಗೆ ತರಲಾಗುತ್ತಿದೆ.




