6
  • Latest

ಕಾಳಿ ಅಣೆಕಟ್ಟಿನಿಂದ ಉತ್ತರ ಕನ್ನಡಕ್ಕೆ ಅನ್ಯಾಯ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಾಳಿ ಅಣೆಕಟ್ಟಿನಿಂದ ಉತ್ತರ ಕನ್ನಡಕ್ಕೆ ಅನ್ಯಾಯ

ಸಿಎಸ್‌ಆರ್ ನಿಧಿ ಮಂಗಮಾಯ | ಜಿಲ್ಲೆಗೆ ಬಿಡಿಗಾಸು ಬಿಚ್ಚದ ವಿದ್ಯುತ್ ನಿಗಮ | ಇಲ್ಲಿನ ದುಡ್ಡು ಅನ್ಯರ ಪಾಲು

AchyutKumar by AchyutKumar
in ಲೇಖನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಇದೇ ಜಿಲ್ಲೆಯಲ್ಲಿ ಸಮುದ್ರ ಸೇರುವ ಕಾಳಿ ನದಿಗೆ ಅಡ್ಡಲಾಗಿ ಒಟ್ಟು ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಈ ಅಣೆಕಟ್ಟುಗಳ ಮೂಲಕ ನಿರಂತರವಾಗಿ ವಿದ್ಯುತ್ ಉತ್ಪಾದನೆ ನಡೆಯುತ್ತದೆ. ಆದರೆ, ವಿದ್ಯುತ್ ಮಾರಾಟದಿಂದ ಬರುವ ಆದಾಯದಲ್ಲಿ ಈವರೆಗೆ ಒಂದೇ ಒಂದು ರೂಪಾಯಿಯನ್ನು ಸಹ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಳಸಿಲ್ಲ.
ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯಿಂದ ಈ ವಿಷಯ ಹೊರಬಿದ್ದಿದೆ. ಎಲ್ಲಾ ಉದ್ದಿಮೆಗಳು ಸಾಮಾಜಿಕ ಹೊಣೆಗಾರಿಕೆ ಅಡಿ ತಮ್ಮ ಲಾಭದಲ್ಲಿ ಒಂದಷ್ಟು ಹಣವನ್ನು ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆ ನೀಡಬೇಕು. ಸರ್ಕಾರಿ ಸ್ವಾಧೀನದ ಕಂಪನಿಗಳು ಸಹ ಇದರಿಂದ ಹೊರತಾಗಿಲ್ಲ. ಸರ್ಕಾರದ ಉದ್ದಿಮೆಗಳ ಒಂದು ಭಾಗವಾದ ಕರ್ನಾಟಕ ಪವರ್ ಕಾರ್ಫೋರೇಶನ್ ಲಿಮಿಟೆಡ್’ನಲ್ಲಿ ಮಾತ್ರ ಇದಕ್ಕೆ ಉತ್ತರವಿಲ್ಲ. ಕಾಳಿ ನದಿಗೆ ಅಡ್ಡಲಾಗಿ ಕೊಡಸಳ್ಳಿ, ಕದ್ರಾ, ಸೂಪಾ, ಬೊಮ್ಮನಳ್ಳಿ ಹಾಗೂ ತಟ್ಟಿಹಳ್ಳದಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಮಳೆಗಾಲದ ವೇಳೆ ಅಣೆಕಟ್ಟು ಪೂರ್ತಿಯಾಗಿ ನೀರು ತುಂಬಿಸಿ, ನಂತರ ವರ್ಷವಿಡೀ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆ ವಿದ್ಯುತ್ ಮಾರಾಟದಿಂದ ನಿಗಮಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಲಾಭ ಬರುತ್ತಿದೆ. ಆದರೆ, ಅಣೆಕಟ್ಟು ಬಂದದ್ದರಿoದ ಸ್ಥಳೀಯರಿಗೆ ಆದ ಉಪಯೋಗಗಳಿಗಿಂತ ಉಪದ್ರವಗಳೇ ಹೆಚ್ಚು.
ಪ್ರತಿ ವರ್ಷ ಮಳೆಗಾಲದಲ್ಲಿ ಅಣೆಕಟ್ಟು ಭರ್ತಿ ಮಾಡಲಾಗುತ್ತದೆ. ಮಳೆ ಇನ್ನಷ್ಟು ಜಾಸ್ತಿ ಆದಾಗ ಏಕಾಏಕಿ ಅಣೆಕಟ್ಟಿನ ದ್ವಾರಗಳನ್ನು ತೆರೆಯುತ್ತಾರೆ. ಇದರಿಂದ ಅಣೆಕಟ್ಟು ತಳಭಾಗದ ಅನೇಕ ಊರುಗಳು ಜಲಾವೃತವಾಗುವುದು ಇಲ್ಲಿನ ಅತಿ ದೊಡ್ಡ ಸಮಸ್ಯೆ. ನೆರೆ ಬಂದಾಗ ಮಾನವೀಯ ನೆಲೆಯಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕೆಲಸವನ್ನು ಸಹ ನಿಗಮ ಮಾಡಿಲ್ಲ. `ತನಗೂ ಇದಕ್ಕೂ ಸಂಬoಧವೇ ಇಲ್ಲ’ ಎಂಬAತೆ ಇರುವ ವಿದ್ಯುತ್ ನಿಗಮ ದಾಖಲೆಗಳ ಪ್ರಕಾರ ವಿದ್ಯುತ್ ಉತ್ಪಾದಿಸಿ ಗುರಿ ಸಾಧಿಸುತ್ತಿದೆ.
ಅಣೆಕಟ್ಟಿನ ಹಿನ್ನಿರಿನ ಪ್ರದೇಶದಲ್ಲಿ ಸಹ ಹಲವು ಊರುಗಳಿವೆ. ಆ ಊರುಗಳ ಅಭಿವೃದ್ಧಿಗೆ ಮೊದಲಿನಿಂದ ತೊಡಕುಗಳಿವೆ. ಅನೇಕ ಹಳ್ಳಿಗರನ್ನು ಅಣೆಕಟ್ಟು ಕಟ್ಟುವ ವೇಳೆಯೇ ಒಕ್ಕಲೆಬ್ಬಿಸಲಾಗಿದೆ. ಆದರೆ, ಒಂದೆರಡು ಕಡೆ ಹೊರತುಪಡಿಸಿದರೆ ಉಳಿದ ಕಡೆ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲ. ಕೊಟ್ಟಿದ್ದು ಸಹ ಮೂರುಕಾಸಿನ ಪರಿಹಾರ.
ಇಷ್ಟೇಲ್ಲ ಬಾಧಕಗಳಿದ್ದರೂ ಅದನ್ನು ಜಿಲ್ಲೆಯ ಜನ ಸಹಿಸಿಕೊಂಡಿದ್ದಾರೆ. ಯಾರೂ ಪ್ರಶ್ನಿಸುವವರು ಇಲ್ಲ ಎಂಬ ಕಾರಣದಿಂದ ಸಾಮಾಜಿಕ ಜವಾಬ್ದಾರಿ ಅಡಿ ಜಿಲ್ಲೆಯ ಅಭಿವೃದ್ಧಿಗೆ ಬರಬೇಕಿದ್ದ ಹಣ ಸಹ ಬಂದಿಲ್ಲ. `ಸಿಎಸ್‌ಆರ್ ನಿಧಿ ಅಡಿ ಉತ್ತರ ಕನ್ನಡ ಜಿಲ್ಲೆಗೆ ವ್ಯಯಿಸಿದ ಹಣ’ದ ಬಗ್ಗೆ ಕೇಳಿದಾಗ `ಜಿಲ್ಲಾವಾರು ಹಣ ಹಂಚುವ ಪದ್ಧತಿ ಇಲ್ಲ’ ಎಂದು ಉತ್ತರ ನೀಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು ಜಾರಿಕೊಂಡಿದ್ದಾರೆ.

ADVERTISEMENT

–  ಅಚ್ಯುತಕುಮಾರ ಯಲ್ಲಾಪುರ

Advertisement. Scroll to continue reading.
Advertisement. Scroll to continue reading.
Previous Post

ವಿಮಾ ಕಂಪನಿ ವಿರುದ್ಧ ಹೋರಾಟ: ಯಲ್ಲಾಪುರದ ವ್ಯಕ್ತಿಗೆ ಜಯ

Next Post

ಪ್ರಧಾನಿ ಮೋದಿ ಭೇಟಿಗೆ ಲತಾ ಕಾತರ

Next Post

ಪ್ರಧಾನಿ ಮೋದಿ ಭೇಟಿಗೆ ಲತಾ ಕಾತರ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ