ಹಳಿಯಾಳ: ಭೂಮಿಯ ಹಕ್ಕು ಹಾಗೂ ಆಸ್ತಿ ಬದಲಾವಣೆ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಕಾಳಗ ನಡೆದಿದೆ.
ಕಾಳಗಿನಕೊಪ್ಪದ ಪವನ ಶಿವನಗೌಡ ಹಾಗೂ ಅವರ ತಂದೆ ರಾಮ ಶಿವನಗೌಡ ಅವರ ಮೇಲೆ ಪರಶುರಾಮ ಶಿವನಗೌಡ, ಸುಭಾಶ ಶಿವನಗೌಡ, ಬಸು ಶಿವನಗೌಡ ಹಾಗೂ ಲಕ್ಷ ಶಿವನಗೌಡ ಎಂಬಾತರು ಆಕ್ರಮಣ ನಡೆಸಿದ್ದಾರೆ.
ಈ ಎರಡು ಕುಟುಂಬದವರ ನಡುವೆ ಭೂಮಿಯ ಹಕ್ಕಿನ ವಿಷಯದಲ್ಲಿ ಮನಸ್ತಾಪ ಎದುರಾಗಿತ್ತು. ಡಿ 4ರ ರಾತ್ರಿ 10.30ಕ್ಕೆ ಪವನ ಅವರ ಮನೆ ಮುಂದೆ ಬಂದ ನಾಲ್ವರು ಆರೋಪಿತರು ಪಾಟಿಕಲ್ಲಿನಿಂದ ಗುದ್ದಿ ಮನೆ ಬಾಗಿಲು ಒಡೆದು ಒಳನುಗ್ಗಿದ್ದಾರೆ.
ನಂತರ ಅಲ್ಲಿದ್ದ ಕಟ್ಟಿಗೆಯಿಂದ ಪವನ ಹಾಗೂ ರಾಮ ಅವರಿಗೆ ಬಡಿದಿದ್ದಾರೆ. ಅಡುಗೆಮನೆಯಲ್ಲಿದ್ದವರನ್ನು ಎಳೆದು ತಂದು ಬಟ್ಟೆ ಹರಿದಿದ್ದಾರೆ. ಅದರಲ್ಲಿ ಒಬ್ಬ ರಾಮ ಅವರ ಎದೆಮೇಲೆ ಕೂತು ರಪ ರಪ ಹೊಡೆದು ಗಾಯಗೊಳಸಿದ ಬಗ್ಗೆಯೂ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.




