ಅಂಕೋಲಾ: ಅಂಕೋಲಾದಿ0ದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸು ಅಪಘಾತವಾಗಿದೆ. ಓವರ್ಟೆಕ್ ಮಾಡುವ ತರಾತುರಿಯಲ್ಲಿ ಬಸ್ಸು ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರಿಗೆ ಗುದ್ದಿದೆ.
ಮಂಗಳವಾರ ನಸುಕಿನ 3 ಗಂಟೆಗೆ ಹೆಬ್ಬುಳದ ಬಳಿ ಈ ಅಪಘಾತ ನಡೆದಿದ್ದು, ಬಸ್ಸಿನ ಚಾಲಕ ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಬಸ್ಸಿನ ಚಾಲಕ ಕಾರ್ಕಳದ ರಾಘವೇಂದ್ರ ಜೋಡುಕಟ್ಟೆ ಅವರ ಗಡಿಬಿಡಿಯೇ ಈ ಅಪಘಾತಕ್ಕೆ ಕಾರಣ. ಅಪಘಾತದ ರಭಸಕ್ಕೆ ಬಸ್ಸು ಪಲ್ಟಿಯಾಗಿದೆ.
ಈ ಡಿಕ್ಕಿಯ ರಭಸಕ್ಕೆ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರಿಗೆ ಸಹ ಧಕ್ಕೆಯಾಗಿದೆ. ಗಾಯಗೊಂಡ ಪ್ರಯಾಣಿಕರೆಲ್ಲರೂ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದವರಾಗಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆ ಪ್ರಯಾಣಿಕರು ಹೆಚ್ಚಿದ್ದಾರೆ.




