6
  • Latest

ಸತೀಶ್ ಸೈಲ್’ಗೆ ಶೆಟ್ಟಿ.. ಶಿವರಾಮ ಹೆಬ್ಬಾರ್’ಗೆ ಮಿರಾಶಿ.. ಭೀಮಣ್ಣ ನಾಯ್ಕ’ಗೆ ಭಾಗ್ವತ.. ಏನೂ ಇಲ್ಲದ ಅವರೆಲ್ಲ ಶಾಸಕರಿಗೆ ಆಪ್ತರಾಗಿದ್ದು ಹೇಗೆ?!!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಸತೀಶ್ ಸೈಲ್’ಗೆ ಶೆಟ್ಟಿ.. ಶಿವರಾಮ ಹೆಬ್ಬಾರ್’ಗೆ ಮಿರಾಶಿ.. ಭೀಮಣ್ಣ ನಾಯ್ಕ’ಗೆ ಭಾಗ್ವತ.. ಏನೂ ಇಲ್ಲದ ಅವರೆಲ್ಲ ಶಾಸಕರಿಗೆ ಆಪ್ತರಾಗಿದ್ದು ಹೇಗೆ?!!

AchyutKumar by AchyutKumar
in ರಾಜಕೀಯ

ಕಾರವಾರದ ಸತೀಶ್ ಸೈಲ್.. ಯಲ್ಲಾಪುರದ ಶಿವರಾಮ ಹೆಬ್ಬಾರ್.. ಶಿರಸಿಯ ಭೀಮಣ್ಣ ನಾಯ್ಕ ಶಾಸಕರಾಗುವ ಮೊದಲಿನಿಂದಲೂ ಅವರ ಜೊತೆ ಗುರುತಿಸಿಕೊಂಡ ಕೆಲವರಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅವರೆಲ್ಲರೂ ಏನು ಅಲ್ಲ.. ಆದರೆ, ಶಾಸಕರಿಗೆ ಮಾತ್ರ ಎಲ್ಲದಕ್ಕೂ ಅವರೇ ಬೇಕು!

ADVERTISEMENT

ಅವರೆಲ್ಲ ಸಾಮಾನ್ಯ ಕಾರ್ಯಕರ್ತರಲ್ಲ. ಪ್ರಭಾವಿ ನಾಯಕರಲ್ಲ. ಯಾವುದೇ ಅಧಿಕಾರ ಇದ್ದವರಲ್ಲ. ಪಕ್ಷದಲ್ಲಿಯೂ ಉನ್ನತ ಹುದ್ದೆ ಪಡೆದವರಲ್ಲ. ಶಾಸಕರ ಸಂಬoಧಿರಕಲ್ಲ. ಒಟ್ಟಿಗೆ ಓದಿದವರಲ್ಲ. ಬಾಲ್ಯದ ಸ್ನೇಹಿತರಲ್ಲ. ಒಂದೇ ಜಾತಿ – ಸಮುದಾಯದವರೂ ಅಲ್ಲ. ಅದಾಗಿಯೂ ಅಂಥವರು ಶಾಸಕರಿಗೆ ಆಪ್ತರಾಗಿದ್ದಾರೆ. ಶಾಸಕರ ಜೊತೆಯೇ ಸುತ್ತುತ್ತಾರೆ. ಪ್ರತಿ ವಿಷಯದಲ್ಲಿಯೂ ಶಾಸಕರ ಮುಂದೆ ಅವರ ಅಭಿಪ್ರಾಯ ಮಂಡಿಸುತ್ತಾರೆ. ಸಂಭ್ರಮ ಅಂತಲ್ಲ.. ಸಂಕಷ್ಟ ಬಂದಾಗ ಸಹ ಅವರೆಲ್ಲ ಜನಪ್ರತಿನಿಧಿಗಳ ಜೊತೆಯಿದ್ದಾರೆ!

ಸತೀಶ್ ಸೈಲ್
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸತೀಶ್ ಸೈಲ್ ಜೈಲಿಗೆ ಹೋದಾಗ ಸಹ ಶೆಂಬು ಶೆಟ್ಟಿ ಅವರ ಸಂಪರ್ಕದಲ್ಲಿದ್ದರು. ಸತೀಶ್ ಸೈಲ್ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರೊಡನೆ ಓಡಾಡುತ್ತಿದ್ದರು. ಸತೀಶ್ ಸೈಲ್ ಶಾಸಕರಾದ ನಂತರ ಇನ್ನಷ್ಟು ಜನ ಅವರಿಗೆ ಹತ್ತಿರವಾದರು. ಕೆಲವರು ದೂರವಾದರು. ಆದರೆ, ಶಂಬು ಶೆಟ್ಟಿ ಅವರು ಮಾತ್ರ ಅಂದಿಗೂ – ಇಂದಿಗೂ ಸತೀಶ್ ಸೈಲ್ ಜೊತೆ ಹಾಗೇ ಉಳಿದಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಸತೀಶ್ ಸೈಲ್ ಅವರಿಗೆ ಶಂಬು ಶೆಟ್ಟಿ ಹೇಗೆ ಆಪ್ತರು? ಎಂಬುದು ಈವರೆಗೂ ಹೊರಬರದ ರಹಸ್ಯ!

Advertisement. Scroll to continue reading.

ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್ ಸಹ ಶಾಸಕರಾಗುವ ಮೊದಲು ಅವರ ಜೊತೆಯಿದ್ದವರು ವಿಜಯ ಮಿರಾಶಿ. ಶಿವರಾಮ ಹೆಬ್ಬಾರ್ ಕಾಂಗ್ರೆಸ್ಸಿನಲ್ಲಿದ್ದಾಗಲೂ ಮಿರಾಶಿ ಅವರ ಜೊತೆಯಿದ್ದರು. ಬಿಜೆಪಿಗೆ ಹೋದಾಗಲೂ ಅವರ ಜೊತೆ ನಿಂತರು. ಪ್ರಸ್ತುತ ಶಿವರಾಮ ಹೆಬ್ಬಾರ್ ಬಿಜೆಪಿ ಹಾಗೂ ಅವರ ಪುತ್ರ ವಿವೇಕ ಹೆಬ್ಬಾರ್ ಕಾಂಗ್ರೆಸ್’ನಲ್ಲಿದ್ದರೂ ವಿಜಯ ಮಿರಾಶಿ ಅವರ ಕುಟುಂಬದವರ ಜೊತೆಯಿದ್ದಾರೆ.

Advertisement. Scroll to continue reading.

ವಿಜಯ ಮಿರಾಶಿ ಪ್ರತಿ ಚುನಾವಣೆಯಲ್ಲಿಯೂ ಹೆಬ್ಬಾರ್ ಗೆಲುವಿಗೆ ವಿವಿಧ ತಂತ್ರ ರೂಪಿಸುತ್ತಾರೆ. ಶಿವರಾಮ ಹೆಬ್ಬಾರ್ ಅವರು ಎಪಿಎಂಸಿ ಅಧ್ಯಕ್ಷರಾದ ಅವಧಿಯಿಂದಲೂ ವಿಜಯ ಮಿರಾಶಿ ಹೆಬ್ಬಾರ್ ಬೆನ್ನಿಗಿದ್ದಾರೆ. ಶಿವರಾಮ ಹೆಬ್ಬಾರ್ ಮೊದಲ ಬಾರಿ ಶಾಸಕರಾದ ನಂತರ ವಿಜಯ ಮಿರಾಶಿ ಇನ್ನಷ್ಟು ಹತ್ತಿರವಾದರು. ಬಹಿರಂಗವಾಗಿಯೇ `ತಾನೂ ಅವರ ಆಪ್ತ’ ಎಂದು ಕಾಣಿಸಿಕೊಂಡರು. ಶಿವರಾಮ ಹೆಬ್ಬಾರ್ ಅವರಿಗೆ ವಿಜಯ ಮಿರಾಶಿ ಅಷ್ಟೊಂದು ಆಪ್ತರಾಗಿದ್ದು ಹೇಗೆ? ಎಂಬುದು ಇಂದಿಗೂ ಅನೇಕರ ಪಾಲಿಗೆ ದೊಡ್ಡ ಪ್ರಶ್ನೆ!

ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ ಅವರು ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ಸಿಗೆ ಬಂದಾಗಲಿನಿoದಲೂ ಅವರ ಜೊತೆಯಿದ್ದವರು ಎಸ್ ಕೆ ಭಾಗ್ವತ್. ಭೀಮಣ್ಣ ನಾಯ್ಕ ಅವರು ಸಮಾಜವಾದಿ ಪಕ್ಷದಲ್ಲಿದ್ದಾಗಲೂ ಎಸ್ ಕೆ ಭಾಗ್ವತ್ ಅವರ ಪರಿಚಯಸ್ಥರಾಗಿದ್ದರು. ಆದರೆ, ಅವರು ಕಾಂಗ್ರೆಸ್ ಸೇರಿದ ಮೇಲೆ ಅವರ ಜೊತೆಯೇ ಗಟ್ಟಿಯಾದರು.
ನಿತ್ಯ ಬೆಳಗಾದರೆ ಶಿರಸಿಮಕ್ಕಿ ಕ್ರಾಸಿನಿಂದ ನಡೆದು ಬರುವ ಎಸ್ ಕೆ ಭಾಗ್ವತ ಅವರು ಆಗಾಗ ಅವರಿವರ ಬೈಕಿಗೆ ಕೈ ಮಾಡಿ ಸಾಮ್ರಾಟ್ ಹೊಟೇಲಿಗೆ ಬರುತ್ತಾರೆ. ಅಲ್ಲಿ ಒಂದು ಚಹಾ ಕುಡಿದು ಸುಪ್ರಿಯಾ ಹೊಟೇಲ್ ಪ್ರವೇಶಿಸುವ ಅವರು ಮಧ್ಯಾಹ್ನದ ಊಟಕ್ಕೆ ಮನೆಗೆ ಮರಳುತ್ತಾರೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಸುಪ್ರಿಯಾ ಹೊಟೇಲಿನಲ್ಲಿ ಹಾಜರು!
ಎಸ್ ಕೆ ಭಾಗ್ವತ ಅವರ ಕೆಲಸವೇನು? ಅವರು ಏಕೆ ಹೀಗಿದ್ದಾರೆ? ಶಾಸಕರಿಗೆ ಹಾಗೂ ಅವರ ನಡುವಿನ ಬಾಂಧವ್ಯವೇನು? ಎಂಬುದೆಲ್ಲವೂ ಅವರಿಬ್ಬರಿಗೆ ಮಾತ್ರ ಗೊತ್ತಿರುವ ರಹಸ್ಯ!

ಇನ್ನೂ ಶಾಸಕರಿಗೆ ಆಪ್ತರಾಗಿರುವವರು ಬಹುತೇಕ ಬಾರಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಪದೇ ಪದೇ ದೊಡ್ಡ ದೊಡ್ಡ ಬ್ಯಾನರ್-ಫೋಟೋಗೆ ಪೋಸ್ ಕೊಡುವವರೂ ಅಲ್ಲ. ಆದರೆ, ಶಾಸಕರ ಹಿಂದೆ ಬೀಳುವ ಎಲ್ಲಾ ಹಿಂಬಾಲಕರಿಗಿoತಲೂ ಅವರು ಮುಂದಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳುವಿಕೆ, ತಮಗೆ ಬೇಕಾದವರ ರಕ್ಷಣೆ ಸೇರಿ ಶಾಸಕರಿಂದ ಆಗುವ ಎಲ್ಲಾ ಕೆಲಸಗಳು ಅವರಿಂದ ಸಲೀಸು!

ನೀವು ಹೇಳಿದ್ದು.. ನಾವು ಕೇಳಿದ್ದು!

`ಶಾಸಕರು ಹಾಗೂ ಅವರ ಆಪ್ತರಾಗಿರುವವರ ನಡುವೆ ಕೆಲ ವ್ಯವಹಾರಿಕ ಸಂಬoಧವಿದೆ. ಹೀಗಾಗಿ ಅವರು ಒಟ್ಟಿಗೆ ಇರುತ್ತಾರೆ’ ಎನ್ನುವವರಿದ್ದಾರೆ. `ಶಾಸಕರ ಎಲ್ಲಾ ಗುಟ್ಟು ಅವರಿಗೆ ಗೊತ್ತು. ಹೀಗಾಗಿ ಅವರು ಇವರನ್ನು ಅನಿವಾರ್ಯವಾಗಿ ಜೊತೆಗಿಟ್ಟುಕೊಂಡಿದ್ದಾರೆ’ ಎನ್ನುವವರಿದ್ದಾರೆ. ಆದರೆ, ಇದ್ಯಾವುದಕ್ಕೂ ದಾಖಲೆಗಳಿಲ್ಲ. ಇವರೆಲ್ಲರೂ ಅವರಿಗೆ ಹೇಗೆ ಆಪ್ತರು? ಎಂದು ಅವರವರಿಗೆ ಮಾತ್ರ ಗೊತ್ತಿರುವುದರಿಂದ ಊಹಾಪೋಹದ ಮಾತುಗಳು ಸತ್ಯವಲ್ಲ!

Previous Post

ಅವಿಶ್ವಾಸ ಮಂಡನೆ | ಮದನೂರು ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಹಕ್ಕು ಮೊಟಕು!

Next Post

ನೂರು ಜನ್ಮಕೂ | ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ!

Next Post

ನೂರು ಜನ್ಮಕೂ | ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ