6
  • Latest

ಅಗ್ನಿಸ್ಪರ್ಶವೇ ಅತಿ ದೊಡ್ಡ ಅಪಾಯ: ಗ್ಯಾಸ್ ಟ್ಯಾಂಕರ್ ಕೆಳಗೆ ಬಿಸಿ ಬಿಸಿ ಅಡುಗೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಗ್ನಿಸ್ಪರ್ಶವೇ ಅತಿ ದೊಡ್ಡ ಅಪಾಯ: ಗ್ಯಾಸ್ ಟ್ಯಾಂಕರ್ ಕೆಳಗೆ ಬಿಸಿ ಬಿಸಿ ಅಡುಗೆ!

AchyutKumar by AchyutKumar
in ರಾಜ್ಯ

ಕುಮಟಾ: ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲು ಸಾಲು ಸಾಲು ಗ್ಯಾಸ್ ಟ್ಯಾಂಕರ್ ಜೊತೆ ಪೆಟ್ರೋಲ್-ಡಿಸೇಲ್ ಮೊದಲಾದ ಇಂಧನ ತುಂಬಿದ ನಿಲ್ಲುತ್ತಿವೆ. ಈ ವಾಹನಗಳ ಅಂಚಿನಲ್ಲಿ ಗ್ಯಾಸ್‌ ಸ್ಟೋವ್’ಗೆ ಬೆಂಕಿ ಹಚ್ಚಿ ಕೆಲವರು ಅಡುಗೆ ತಯಾರಿಸುತ್ತಿದ್ದು, ಮೊನ್ನೆ ರಾತ್ರಿ ಗ್ಯಾಸ್ ಸ್ಟೋವ್ ಸ್ಪೋಟವಾಗಿ ಅಪಾಯದ ಮುನ್ಸೂಚನೆ ಸಿಕ್ಕರೂ ಸುರಕ್ಷತಾ ಕ್ರಮದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

ADVERTISEMENT

2015ರ ಸೆ 1ರಂದು ಮಂಗಳೂರಿನಿoದ ಅಂಕೋಲಾ ಕಡೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಬರ್ಗಿ ಘಟ್ಟದ ತಿರುವಿನಲ್ಲಿ ಪಲ್ಟಿಯಾಗಿತ್ತು. ಟ್ಯಾಂಕಿನೊಳಗಿರುವ ಅನಿಲಕ್ಕೆ ವಾಸನೆ ಇರದ ಕಾರಣ ಅನಿಲ ಸೋರಿಕೆಯಾದರೂ ಆ ವಿಷಯ ಊರಿನವರಿಗೆ ಅರಿವಾಗಿರಲಿಲ್ಲ. ಬೆಳಗ್ಗೆ ಎದ ಚಹ ಮಾಡುವುದಕ್ಕಾಗಿ ಗ್ಯಾಸ್ ಸ್ಟೋವ್ ಹಚ್ಚಿದ್ದ ಬರ್ಗಿಯ ಜಯಶ್ರೀ ಪಟಗಾರ ಅವರ ಮನೆ ಹೊತ್ತಿ ಉರಿದು ಆ ಕುಟುಂಬದ ಸದಸ್ಯರೆಲ್ಲರೂ ನಿದ್ದೆಯಲ್ಲಿಯೇ ಜೀವ ಕಳೆದುಕೊಂಡಿದ್ದರು. ಕೊನೆಗೆ 13 ಜನ ಸಾವನಪ್ಪಿದ ಲೆಕ್ಕ ಸಿಕ್ಕಿದ್ದು, ಜಾನುವಾರುಗಳ ಸಾವಿನ ವರದಿ ಹೊರಬರಲಿಲ್ಲ. ಊರಿನ ಇತರೆ ಮನೆಗಳು ಸಹ ಬೆಂಕಿಯ ಜ್ವಾಲೆಯಿಂದ ಬೆಂದಿದ್ದವು.

ಅದಾದ ನಂತರ ಕೆಲ ವರ್ಷಗಳವರೆಗೂ ಅತ್ಯಂತ ಕಟ್ಟುನಿಟ್ಟಾದ ನಿಯಮ ಪಾಲಿಸಲಾಯಿತು. ಹೆದ್ದಾರಿಯಲ್ಲಿ ಸಂಚರಿಸುವ ಗ್ಯಾಸ್ ಟ್ಯಾಂಕರ್ ಬಗ್ಗೆ ಹೆಚ್ಚಿನ ನಿಗಾವಹಿಸಲಾಯಿತು. ಬರ್ಗಿಯಲ್ಲಿ ನಡೆದ ಅನಿಲ ದುರಂತವನ್ನು ಜನ ಮರೆತ ನಂತರ ಗ್ಯಾಸ್ ಟ್ಯಾಂಕರ್ ಸುರಕ್ಷತಾ ನಿಯಮಗಳು ದೂರವಾದವು. ಇದೀಗ ಮತ್ತೆ ಅಂಥಹುದೇ ನಿರ್ಲಕ್ಷ್ಯ ಮುಂದುವರೆದಿದ್ದು, ಹೆದ್ದಾರಿ ಅಂಚಿನಲ್ಲಿ ಗ್ಯಾಸ್ ಟ್ಯಾಂಕರ್ ನಿಲ್ಲಿಸಿ ಅದರ ಅಡಿಭಾಗದಲ್ಲಿಯೇ ಬೆಂಕಿ ಹಚ್ಚಿ ಅಡುಗೆ ಮಾಡುವವರಿದ್ದರೂ ಅದನ್ನು ತಡೆಯುವವರಿಲ್ಲ!

Advertisement. Scroll to continue reading.

ಶನಿವಾರ ರಾತ್ರಿ ಸುವರ್ಣಗದ್ದೆ ಬಳಿ ಅಡುಗೆ ಮಾಡುವ ಸಣ್ಣ ಗ್ಯಾಸ್ ಸ್ಟೋವ್ ಸ್ಪೋಟವಾಗಿದೆ. ಸಮೀಪದಲ್ಲಿಯೇ ಗ್ಯಾಸ್ ತುಂಬಿದ ಟ್ಯಾಂಕರ್ ನಿಲ್ಲಿಸಲಾಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಬಹುದೊಡ್ಡ ಅಪಾಯ ತಪ್ಪಿದೆ. `ಜನ ವಸತಿ ಪ್ರದೇಶದ ಅಂಚಿನಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆಗೆ ಅವಕಾಶ ಕೊಡಬಾರದು’ ಎಂದು ಜನ ಆಗ್ರಹಿಸುತ್ತಲೇ ಇದ್ದರೂ ಅದನ್ನು ಹೆದ್ದಾರಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಪಾಯದ ಬಗ್ಗೆ ಅರಿವಿದ್ದರೂ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತ ಐ ಆರ್ ಬಿ ಕಂಪನಿ ಮೌನವಾಗಿದೆ.

Advertisement. Scroll to continue reading.
Previous Post

ಕೌಶಿಕ್ ಕನ್ನಡ ಮಿಡಿಯಂ | ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ!

Next Post

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

Next Post

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ