6
  • Latest

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

AchyutKumar by AchyutKumar
in ಸ್ಥಳೀಯ

ಕುಮಟಾ: ನೂತನವಾಗಿ ನಿರ್ಮಿಸಿದ ಆಡಳಿತ ಸೌಧದಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರು ಇಲ್ಲ. ಹೀಗಾಗಿ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಅಶೋಕ ಭಟ್ಟ ಹಾಗೂ ತಾಲೂಕಾ ದಂಡಾಧಿಕಾರಿ ಸತೀಶ್ ಗೌಡ ಸೇರಿ ಸಿಬ್ಬಂದಿ ಜೊತೆ ಕಚೇರಿಯ ಕಸ ಗುಡಿಸಿದರು!

ADVERTISEMENT

ತಾಲೂಕಾ ಆಡಳಿತ ಸೌಧದಲ್ಲಿ ಮೂರು ಮಹಡಿಗಳಿದ್ದು ಕಂದಾಯ, ಭೂ ಮಾಪನಾ, ಮುದ್ರಾಂಕ, ಭೂ ಸ್ವಾಧೀನದ ಜೊತೆ ಸಹಾಯಕ ಆಯುಕ್ತರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಎಲ್ಲಾ ಕಚೇರಿಗಳಲ್ಲಿಯೂ ಡಿ ದರ್ಜೆಯ ನೌಕರರು ಅಗತ್ಯಕ್ಕೆ ತಕ್ಕಂತೆ ಇಲ್ಲ. ಹೀಗಾಗಿ ಕಚೇರಿ ಕಸ ಗುಡಿಸುವುದು ಇಲ್ಲಿ ನಿತ್ಯದ ಸಮಸ್ಯೆ.

ಕಟ್ಟಡ ಉದ್ಘಾಟನೆ ಆದ ನಂತರ ಈವರೆಗೆ ಒಮ್ಮೆಯೂ ಪೂರ್ತಿ ಕಟ್ಟಡ ಸ್ವಚ್ಚತಾ ಕಾರ್ಯ ನಡೆದಿರಲಿಲ್ಲ. ಕಟ್ಟಡ ನಿರ್ವಹಣಾ ಸಮಿತಿ ಸಹ ರಚನೆ ಆಗದ ಪರಿಣಾಮ ಕಟ್ಟಡ ಸ್ವಚ್ಛತೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆಡಳಿತ ಸೌಧದ ಹಿಂದಿನ ವಾಹನ ನಿಲುಗಡೆ ಪ್ರದೇಶದಿಂದ ಹಿಡಿದು ಮೂರನೇ ಮಹಡಿಯವರೆಗೆ ಈವರೆಗೂ ಎಲ್ಲೆಂದರಲ್ಲಿ ತ್ಯಾಜ್ಯ ಸಿಗುತ್ತಿದ್ದವು.

Advertisement. Scroll to continue reading.

ಈ ಹಿನ್ನಲೆ ಆಡಳಿತ ಸೌಧ ಗೆಬ್ಬೆದ್ದರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ಶಾಸಕರು ಸಹ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಸ್ವಚ್ಛತೆ ಬಗ್ಗೆ ಅರಿವು ಹೊಂದಿದ ಅಧಿಕಾರಿಗಳು `ನಮ್ಮ ಕಚೇರಿ – ನಮ್ಮ ಹೆಮ್ಮೆ’ ಎಂಬ ಅಭಿಯಾನಕ್ಕೆ ಸಿದ್ಧತೆ ನಡೆಸಿದರು. ಅದರ ಪರಿಣಾಮವಾಗಿ ಅಧಿಕಾರಿ-ಸಿಬ್ಬಂದಿ ಎಲ್ಲರೂ ಸೇರಿ ಭಾನುವಾರದ ರಜಾ ದಿನ ಎರಡು ತಾಸು ಕಟ್ಟಡ ಸ್ವಚ್ಛತೆಯ ಬಗ್ಗೆ ಮಾತನಾಡಿದರು.

Advertisement. Scroll to continue reading.

ಸ್ವಚ್ಛತೆಗಾಗಿ ಎರಡು ತಂಡ ರಚನೆ ಮಾಡಲಾಗಿದ್ದು, ಕುಮಟಾ ತಹಶೀಲ್ದಾರ್ ಜೊತೆಗಿನ ತಂಡದವರು ನೆಲ ಮಹಡಿಹಾಗೂ ಕಟ್ಟಡದ ಸುತ್ತಲು ಸ್ವಚ್ಛ ಮಾಡಿದರು. ಅಶೋಕ ಭಟ್ಟ ಅವರ ತಂಡದವರು ಎರಡು ಹಾಗೂ ಮೂರನೇ ಮಹಡಿ ಸ್ವಚ್ಛಗೊಳಿಸಿದರು. ಸ್ವತಃ ಎರಡು ತಹಶೀಲ್ದಾರರು ಪೊರಕೆ ಹಿಡಿದು ಕಸ ಗುಡಿಸಿದ್ದು, ಇದರಿಂದ ಪ್ರೇರಣೆಗೊಂಡ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಜೊತೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಎರಡು ತಾಸಿನ ಅವಧಿಯಲ್ಲಿ ಕಟ್ಟಡದ ಅಡಿಯಿಂದ ಮುಡಿಯವರೆಗೂ ಸ್ವಚ್ಛಗೊಳಿಸಿದರು. ಶ್ರಮದಾನ ಮುಗಿದ ನಂತರ ಎಲ್ಲರೂ ಸೇರಿ ಫೋಟೋ ಕ್ಲಿಕ್ಕಿಸಿಕೊಂಡರು.

Previous Post

ಅಗ್ನಿಸ್ಪರ್ಶವೇ ಅತಿ ದೊಡ್ಡ ಅಪಾಯ: ಗ್ಯಾಸ್ ಟ್ಯಾಂಕರ್ ಕೆಳಗೆ ಬಿಸಿ ಬಿಸಿ ಅಡುಗೆ!

Next Post

ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಔಷಧಿ ಕಳ್ಳ.. ಆತ ಕಳ್ಳ ಅಲ್ಲ ವೈದ್ಯ!

Next Post

ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಔಷಧಿ ಕಳ್ಳ.. ಆತ ಕಳ್ಳ ಅಲ್ಲ ವೈದ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ