ಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ ನಡೆಸಿದ ನಂತರ ಸೇತುವೆಯನ್ನು ಕೆಡವಲಾಗಿದೆ.
1948ರಲ್ಲಿ ಈ ಸೇತುವೆ ರಚಿಸಲಾಗಿತ್ತು. ಐದು ಕಂಬಗಳನ್ನು ಕಲ್ಲು-ಗಾರೆಗಳಿಂದ ನಿರ್ಮಿಸಿ ಸೇತುವೆ ಮೇಲೆ ಸಿಮೆಂಟ್ ಸುರಿಯಲಾಗಿತ್ತು. ಪ್ರವಾಹದ ಅಬ್ಬರಕ್ಕೆ 10 ವರ್ಷದ ಹಿಂದೆ ಸೇತುವೆಗೆ ಹಾನಿಯಾಗಿದ್ದು, ಅದಾದ ನಂತರ ರಿಪೇರಿ ಕಾರ್ಯ ನಡೆದಿತ್ತು. ಆದರೆ, ಇದೀಗ ಪೂರ್ತಿ ಸೇತುವೆಯನ್ನು ಕೆಡವಲಾಗಿದೆ.
50 ಅಡಿಯ ಪ್ರಪಾತ, ಎರಡು ಕಡೆ ಕಡಿದಾದ ಮಣ್ಣು ದಿನ್ನೆ ಹೊಂದಿರುವ ಈ ಸೇತುವೆಯಿದ್ದ ಪ್ರದೇಶದಲ್ಲಿ ವರ್ಷವಿಡೀ ನೀರು ಹರಿಯುತ್ತದೆ. ಸಣ್ಣ ಮಳೆ ಸುರಿದರೂ ಬೆಣ್ಣೆಹೊಳೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಬರುತ್ತದೆ. ಹೀಗಾಗಿ ತಾತ್ಕಾಲಿಕ ಸಂಚಾರಕ್ಕೆ ಮಾಡಿರುವ ರಸ್ತೆಯೂ ಕೊಚ್ಚಿ ಹೋಗುವ ಸಾಧ್ಯತೆಯಿದ್ದು, ಈ ಸೇತುವೆ ಕೆಡವುದು ಗುತ್ತಿಗೆ ಕಂಪನಿಗೆ ಸವಾಲಾಗಿತ್ತು. ಅದಾಗಿಯೂ ಸಾಹಸ ಮಾಡಿ ಹಳೆ ಸೇತುವೆ ಕೆಡವಲಾಗಿದೆ. ಪ್ರಸ್ತುತ ಸೇತುವೆಯನ್ನು ಪೂರ್ತಿ ಕೆಡವಲಾಗಿದ್ದು, ಕಬ್ಬಣವನ್ನು ಹೊರ ತೆಗೆಯಲಾಗುತ್ತಿದೆ. ಇದೇ ಜಾಗದಲ್ಲಿ ಹೊಸ ಸೇತುವೆ ಬರಲಿದೆ.
ಇನ್ನೂ ಈ ಮಾರ್ಗದಲ್ಲಿನ ಎಲ್ಲಾ ಸೇತುವೆಗಳನ್ನು ತೆರವು ಮಾಡಲಾಗುತ್ತಿದೆ. ಒಂದೆರಡು ದಿನದಲ್ಲಿ ಹೊಸ ಸೇತುವೆಯ ಪೌಂಡೇಶನ್ ಕಾರ್ಯ ಶುರುವಾಗಲಿದೆ. ಶಿರಸಿಯಿಂದ ಕುಮಟಾವರೆಗೆ ಒಟ್ಟೂ 9 ಸೇತುವೆಗಳನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಗುತ್ತಿಗೆ ಕಂಪನಿಗೆ ಅಮ್ಮಿನಳ್ಳಿಯ ಚಂಡಮುರುಕನ ಹಳ್ಳ, ಖುರ್ಸೆ ಸಮೀಪದ ಹಳ್ಳ ಸೇರಿ ಕೆಲ ಸೇತುವೆಗಳ ಕಾಮಗಾರಿ ಸವಾಲಿನ ಕೆಲಸವಾಗಿದೆ. ಈ ಮಾರ್ಗದಲ್ಲಿ ಫೆ 25ರವರೆಗೆ ಮಾತ್ರ ವಾಹನ ಸಂಚಾರ ನಿಷೇಧದ ಅನುಮತಿಯಿದ್ದು, ಎಲ್ಲವೂ ಅಂದುಕೊAಡAತೆ ವೇಗವಾಗಿ ನಡೆದರೆ ಹೊಸ ಸೇತುವೆ ನಾಲ್ಕು ತಿಂಗಳಿನಲ್ಲಿ ನಿರ್ಮಾಣವಾಗಲಿದೆ.




