6
  • Latest

ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Wednesday, July 1, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!

AchyutKumar by AchyutKumar
in ಸ್ಥಳೀಯ

ಕಾರವಾರ: ಆಯುಷ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಸಂಗಮೇಶ ಅವರ ಮೇಲೆ ಡಿ 11ರಂದು ಹಲ್ಲೆ ನಡೆದಿದ್ದು, ಆ ದಿನ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ ವಿನೋದ ಮಾಳ್ಸೆಕರ್ ಇದೀಗ ಹೊಸ ಕಥೆ ಬಿಚ್ಚಿಟ್ಟಿದ್ದಾರೆ. ರೋಗಿಯಿಂದ ಹಲ್ಲೆ ನಡೆದ ಬಗ್ಗೆ ವೈದ್ಯರು ದೂರು ನೀಡಿದ್ದು, `ವೈದ್ಯರೇ ತನಗೆ ಹೊಡೆದಿದ್ದಾರೆ’ ಎಂದು ಇದೀಗ ವಿನೋದ ಮಾಳ್ಸೆಕರ್ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ಏಳೆಂಟು ವರ್ಷದಿಂದ ಪೈಲ್ಸ ಸಮಸ್ಯೆಯಿಂದ ಬಳಲುತ್ತಿದ್ದ ವಿನೋದ ಮಾಳ್ಸೇಕರ್ ಆ ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಡಾ ಸಂಗಮೇಶ್ ಅವರು ಬರೆದುಕೊಟ್ಟ ಔಷಧಿಯನ್ನು ಅವರು ಪಡೆದಿದ್ದರು. ಔಷಧಿ ಪಡೆಯುವ ವಿಧಾನದ ಬಗ್ಗೆ ವಿಚಾರಿಸಲು ಹೋದಾಗ ಡಾ ಸಂಗಮೇಶ ಪ್ರವಚನ ಶುರು ಮಾಡಿದರು. `ಪ್ರವಚನ ಕೇಳಲು ಪುರಸೋತ್ತಿಲ್ಲ. ಪ್ರವಚನ ಕೇಳುವುದಾದರೆ ನಾನು ಮಠಕ್ಕೆ ಹೋಗುತ್ತಿದ್ದೆ’ ಎಂದು ವಿನೋದ ಮಾಳ್ಸೇಕರ್ ಹೇಳಿದರು. `ಇದರಿಂದ ಸಿಟ್ಟಾದ ಡಾ ಸಂಗಮೇಶ ಪರಂಡಿ ತನನ್ನು ದೂಡಿ, ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ’ ಎಂಬುದು ವಿನೋದ ಮಾಳ್ಸೇಕರ್ ಅವರ ಆರೋಪ.

`ವಿನೋದ ಮಾಳ್ಸೆಕರ್ ಅವರು ಫೈಲ್ಸ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಯುಷ್ ಆಸ್ಪತ್ರೆಗೆ ಬಂದಿದ್ದರು. ಫಾರ್ಮಸಿಯಿಂದ ಔಷಧ ಡಬ್ಬಿ ಹಿಡಿದು ಬಂದ ವಿನೋದ ಮಾಳ್ಸೆಕರ್ ಮೊದಲು ಕೆಟ್ಟ ಶಬ್ದದಿಂದ ನಿಂದಿಸಿದರು. ಅದಾದ ನಂತರ `ಸೀಲ್ ಆಗಿರುವ ಡಬ್ಬ ಕೊಡು’ ಎಂದು ಕೂಗಾಡಿ ಕೆನ್ನೆ ಮೇಲೆ ಬಾರಿಸಿದರು’ ಎಂಬುದು ಡಾ ಸಂಗಮೇಶ ಅವರ ದೂರು.

ಇದನ್ನು ಓದಿ: ಆಯುಷ್ ವೈದ್ಯನಿಗೆ ಕಪಾಳ ಮೋಕ್ಷ

`ಆಸ್ಪತ್ರೆಯಲ್ಲಿನ ಮಾತ್ರೆಗಳು ಹಾಳಾಗಿವೆ. ಕೆಲವರು ಅದನ್ನು ಸುಟ್ಟು ನಾಶ ಮಾಡಿದ್ದಾರೆ’ ಎಂದು ಡಾ ಸಂಗಮೇಶ್ ಮೇಲಧಿಕಾರಿಗಳಿಗೆ ದೂರಿದ್ದರು. `ಡಾ ಸಂಗಮೇಶ್ ಅವರೇ ಔಷಧಿ ಕದ್ದು, ಅದನ್ನು ಸುಟ್ಟಿದ್ದಾರೆ’ ಎಂದು ಆಸ್ಪತ್ರೆ ನೌಕರರು ಆರೋಪಿಸಿದ್ದರು. ಈ ಎರಡು ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ದಿನ ನಡೆದಿದ್ದೇನು? ಎನ್ನುವುದರ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

 

ShareSendTweetShare
Previous Post

ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!

Next Post

ಗ್ಯಾಸ್ ಸಿಲೆಂಡರ್ ಸೋರಿಕೆ: ಹೊತ್ತಿ ಉರಿದ ಹೊಟೇಲ್!

Next Post

ಗ್ಯಾಸ್ ಸಿಲೆಂಡರ್ ಸೋರಿಕೆ: ಹೊತ್ತಿ ಉರಿದ ಹೊಟೇಲ್!

ಮುರುಡೇಶ್ವರ | ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಶಿರಸಿಯ ಪೋರನಿಗೆ ಪ್ರಧಾನಿ ರ‍್ಯಾಲಿಗೆ ಆಹ್ವಾನ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.