ಹೊಸ ಮನೆ ನಿರ್ಮಾಣ ಸಾಹಸಕ್ಕೆ ಕೈ ಹಾಕಿದ್ದ ಅರುಣ ಶೇಟ್ ಅದೇ ಮನೆ ಮುಂದಿನ ಹೊಸ ಮಳಿಗೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಟ್ಕಳ ವಿಟಿ ರೋಡಿನ ಸೋನಾರಕೇರಿಯಲ್ಲಿ ಅರುಣ ಶೇಟ್ ವಾಸವಾಗಿದ್ದರು. ಚಿನ್ನದ ಕೆಲಸ ಮಾಡುತ್ತಿದ್ದ ಅವರು ಅಕ್ಕಸಾಲಿಗ ವೃತ್ತಿಯಿಂದ ಬೆಳೆದಿದ್ದರು. ಈಚೆಗೆ ಹೊಸ ಮನೆ ನಿರ್ಮಾಣದಲ್ಲಿ ತೊಡಗಿದ್ದರು. ಮನೆ ಮುಂದೆ ಹೊಸದಾಗಿ ಮಳಿಗೆಯನ್ನು ಕಟ್ಟಿದ್ದರು.
ಜನವರಿ 19ರಂದು ಬೇಸರದಲ್ಲಿದ್ದ ಅವರು ಹೊಸ ಮನೆ ಮುಂದಿನ ಅಂಗಡಿಗೆ ತೆರಳಿದ್ದರು. ಅಲ್ಲಿಯೇ ಉರುಳು ಹಾಕಿಕೊಂಡರು. ಬಾಗಿಲಿನ ಮೇಲಿನ ಪಟ್ಟಿಗೆ ನೈಲಾನ್ ಹಗ್ಗ ಬಿಗಿದುಕೊಂಡು ನೇತಾಡುತ್ತಿದ್ದ ಅರುಣ ಶೆಟ್ ಅವರನ್ನು ಅವರ ಅಣ್ಣ ವಿನಾಯಕ ಶೇಟ್ ನೋಡಿ ಕೆಳಗಿಳಿಸಿದರು.
ಅಷ್ಟರೊಳಗೆ ಅರುಣ ಶೇಟ್ ಸಾವನಪ್ಪಿದ್ದರು. ಈ ಹಿನ್ನಲೆ ವಿನಾಯಕ ಶೇಟ್ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.




