6
  • Latest

ಅಭಿಮಾನಿಗಳ ಸಿಟ್ಟಿಗೆ ಅನಂತಮೂರ್ತಿ ಭಸ್ಮ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಅಭಿಮಾನಿಗಳ ಸಿಟ್ಟಿಗೆ ಅನಂತಮೂರ್ತಿ ಭಸ್ಮ!

AchyutKumar by AchyutKumar
in ರಾಜಕೀಯ

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಶಾಸಕರ ಬೆಂಬಲಿಗರು ಅನಂತಮೂರ್ತಿ ಹೆಗಡೆ ಅವರ ಪ್ರತಿಕೃತಿ ಹಾಗೂ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿಗರು ಅನಗತ್ಯವಾಗಿ ಹಾಲು ಕುಡಿಯುವ ಮಗುವಿಗೂ ಧಿಕ್ಕಾರ ಕೂಗಿದ್ದಾರೆ!

ADVERTISEMENT

ವೈದ್ಯರ ಜೊತೆ ಒಪ್ಪಂದದ ಶಂಕೆ!
`ಶಾಸಕರ ಮೇಲೆ ಅಪನಂಬಿಕೆ ಬರುವ ರೀತಿ ಅನಂತಮೂರ್ತಿ ಹೆಗಡೆ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ. `ಅನಂತಮೂರ್ತಿ ಹೆಗಡೆ ಚುನಾವಣೆಗೆ ಸ್ಪರ್ಧಿಸುವ ಇಂಗಿತದಿoದ ಹುಚ್ಚು ಹೇಳಿಕೆ ನೀಡುತ್ತಿದ್ದು, ಬಿಜೆಪಿಗರು ಅವರಿಗೆ ಕನಿಷ್ಟ ಗ್ರಾಮ ಪಂಚಾಯತ ಚುನಾವಣೆಗಾದರೂ ಅವಕಾಶ ಮಾಡಿಕೊಡಬೇಕು’ ಎಂದು ಪ್ರಸನ್ನ ಶೆಟ್ಟಿ ಆಗ್ರಹಿಸಿದ್ದಾರೆ!
`ವೈದ್ಯ ಗಜಾನನ ಭಟ್ ಅವರ ವರ್ಗಾವಣೆ ಸರ್ಕಾರದ ಪ್ರಕ್ರಿಯೆ. ಆದರೆ, ಆಸ್ಪತ್ರೆ ಹೋರಾಟದ ವಿಷಯದಲ್ಲಿ ಅನಂತಮೂರ್ತಿ ಹೆಗಡೆ ನಡೆ ಗಮನಿಸಿದರೆ ಗಜಾನನ ಭಟ್ಟ ಅವರ ಜೊತೆ ಒಪ್ಪಂದ ನಡೆದಂತೆ ಭಾಸವಾಗುತ್ತದೆ’ ಎಂದು ಪ್ರಸನ್ನ ಶೆಟ್ಟಿ ಹೇಳಿದ್ದಾರೆ. `ಶಿರಸಿ ಹಳೆಯ ಬಸ್ ನಿಲ್ದಾಣದ ಕಾಮಗಾರಿ ನಡೆಯುವ ವೇಳೆಯಲ್ಲಿ ಸಹ ಕೆಲ ಎಡ ಬಿಡಂಗಿಗಳು ಅಪಪ್ರಚಾರ ನಡೆಸಿದ್ದರು. ಯಾವುದೇ ಅಡೆ-ತಡೆ ಇಲ್ಲದೇ ಕೆಲಸ ಮುಗಿದಿದೆ. ಆಸ್ಪತ್ರೆ ವಿಷಯದಲ್ಲಿ ಸಹ ಅನುಮಾನ ಬೇಡ’ ಎಂದು ಅವರು ಹೇಳಿದ್ದಾರೆ.

200ಕೋಟಿಗೂ ಅಧಿಕ ಅನುದಾನ!
`ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಒಂದುವರೆ ವರ್ಷದಲ್ಲಿ 200ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ. ಅದಾಗಿಯೂ ಅವರ ವಿರುದ್ಧ ಅನಂತಮೂರ್ತಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಹೇಳಿದ್ದಾರೆ. `ಶಾಸಕರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಮುಂದುವರೆಸಿದರೆ ಇನ್ನಷ್ಟು ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ.

Advertisement. Scroll to continue reading.

ಹಾಲು ಕುಡಿಯುವ ಮಗುವಿಗೆ ಧಿಕ್ಕಾರ!
ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಅನಂತಮೂರ್ತಿ ಹೆಗಡೆ ಹೇಳಿಕೆ ಖಂಡಿಸಿ ಶಿರಸಿ ಇಳಸೂರು ಹಾಗೂ ದೊಡ್ನಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು `ಅನಂತಮೂರ್ತಿ ಹೆಗಡೆ ಹಾಲು ಕುಡಿಯುವ ಮಗು’ ಎಂದು ಮೊದಲಿಸಿದರು. `ಅನಂತಮೂರ್ತಿ ಹೆಗಡೆಗೆ ಧಿಕ್ಕಾರ’ ಎಂದು ಕೂಗಿದರು. ಅನಂತಮೂರ್ತಿ ಹೆಗಡೆ ಅವರ ಫೋಟೋ ಹಾಗೂ ಪೃತಿಕೃತಿಗೆ ಬೆಂಕಿ ಹಚ್ಚಿದರು. ಈ ವೇಳೆ `ಹಾಲು ಕುಡಿಯುವ ಮಗುವಿಗೆ ಧಿಕ್ಕಾರ’ ಎಂಬ ಧ್ವನಿಯೊಂದು ಕೇಳಿಸಿತು. `ಅನಂತಮೂರ್ತಿ ಹೆಗಡೆ ಅವರಿಗೆ ಹೋರಾಟ ಮಾಡುವ ಹಕ್ಕಿದೆ. ಆದರೆ, 30 ವರ್ಷದಿಂದ ಜನಸೇವೆ ಮಾಡುತ್ತಿರುವ ಭೀಮಣ್ಣ ನಾಯ್ಕ ವಿರುದ್ಧ ಆಧಾರರಹಿತ ಆರೋಪ ಮಾಡುವ ಹಕ್ಕು ಅವರಿಗಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು. `ಅನಂತಮೂರ್ತಿ ಹೆಗಡೆ ಕ್ಷಮೆ ಕೇಳುವವರೆಗೂ ಹೋರಾಟ ನಿರಂತರ’ ಎಂದು ಎಚ್ಚರಿಸಿದರು.

Advertisement. Scroll to continue reading.

ಪೊಲೀಸರಿಗೆ ಪತ್ರ
`ರಾಜ್ಯದ 224 ಶಾಸಕರು ಸುಳ್ಳು ಹೇಳುವವರು ಎಂದು ಬಿಂಬಿಸಿದಲ್ಲದೇ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಹೆಚ್ಚಿನ ಸುಳ್ಳು ಹೇಳುವವರು’ ಎಂದು ಹೇಳಿಕೆ ನೀಡಿದ ಬಗ್ಗೆ ಆಕ್ಷೇಪಿಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಅನಂತಮೂರ್ತಿ ಹೆಗಡೆ ವಿರುದ್ಧ ಪೊಲೀಸರಿಗೆ ಪತ್ರ ಬರೆದಿದ್ದಾರೆ. `ಜನರಲ್ಲಿ ಗೊಂದಲ ಹುಟ್ಟಿಸಿ ದೊಂಬೆ ಎಬ್ಬಿಸುವ ಪ್ರಯತ್ನ ಈ ಹೇಳಿಕೆ ಹಿಂದೆ ಅಡಗಿದೆ’ ಎಂದವರು ದೂರಿದ್ದಾರೆ.

Previous Post

ಬಡ್ಡಿ ಮಕ್ಕಳಿಗೆ ಮಂಡೆಬಿಸಿ!

Next Post

ಜನಪ್ರತಿನಿಧಿಗಳಿಲ್ಲದ ಸಾಮಾನ್ಯ ಸಭೆ: ಬರೀ ಸಪ್ಪೆ ಸಪ್ಪೆ!

Next Post

ಜನಪ್ರತಿನಿಧಿಗಳಿಲ್ಲದ ಸಾಮಾನ್ಯ ಸಭೆ: ಬರೀ ಸಪ್ಪೆ ಸಪ್ಪೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ