ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟಾಕ್ಟರ್ ಮೂಲಕ ಸಾಗಿಸುತ್ತಿದ್ದ ಹಿಟಾಚಿ ಟಾಕ್ಟರ್ಸಹಿತ ಪಲ್ಟಿಯಾಗಿದ್ದು, ಹಿಟಾಚಿ ಆಪರೇಟರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಹಳಿಯಾಳ ಯಲ್ಲಾಪುರ ರಸ್ತೆಯಲ್ಲಿ ಫೆಬ್ರವರಿ 4ರಂದು ಈ ಅಪಘಾತ ನಡೆದಿದೆ. ತಾಟವಾಳ ಸೇತುವೆಗಿಂತ 2ಕಿಮೀ ಹಿಂದೆ ಟಾಕ್ಟರ್ ಜೊತೆ ಹಿಟಾಚಿ ಪಲ್ಟಿಯಾಗಿದೆ.
ಹಿಟಾಚಿ ಆಪರೇಟರ್ ಸಂದೀಪ ಗಿರಿ ಎಂಬಾತರು ಟಾಕ್ಟರಿನಲ್ಲಿ ಹಿಟಾಚಿಯನ್ನಿರಿಸಿಕೊಂಡು ಟಾಕ್ಟರ್ ಓಡಿಸುತ್ತಿದ್ದರು. ಇನ್ನೊಬ್ಬ ಹಿಟಾಚಿ ಆಪರೇಟರ್ ಪವನ್ ಶರ್ಮಾ ಸಹ ಆ ಟಾಕ್ಟರಿನಲ್ಲಿ ಕುಳಿತಿದ್ದರು.
ಸಂದೀಪ ಗಿರಿ ಟಾಕ್ಟರನ್ನು ವೇಗವಾಗಿ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಸಂದೀಪ ಗಿರಿ ಸಾವನಪ್ಪಿದ್ದಾರೆ. ಪವನ್ ಶರ್ಮಾ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಈ ಇಬ್ಬರು ಆಪರೇಟರ್ ಬಿಹಾರದವರಾಗಿದ್ದು, ಹಿಟಾಚಿ ಕೆಲಸಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಅಪಘಾತ ಹಾಗೂ ಸಾವು-ನೋವಿನ ಬಗ್ಗೆ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




