ಮೂರು ತಿಂಗಳ ಗೋಕರ್ಣ ವಾಸ ಮುಗಿಸಿ ಮೂರು ದಿನದ ಹಿಂದೆ ತಮಿಳುನಾಡಿಗೆ ತೆರಳಿದ್ದ ಜರ್ಮನಿಯ ಮೈಕಲ್ ತಮ್ಮ 77ನೇ ವಯಸ್ಸಿನಲ್ಲಿ ಒಂಟಿ ಸಲಗ ದಾಳಿಯಿಂದ ಸಾವನಪ್ಪದ್ದಾರೆ.
ಕಳೆದ 25 ವರ್ಷಗಳಿಂದ ಮೈಕಲ್ ಗೋಕರ್ಣಕ್ಕೆ ಬರುತ್ತಿದ್ದರು. 3-4 ತಿಂಗಳು ಇಲ್ಲಿ ಉಳಿದು ತಮ್ಮ ಪ್ರವಾಸ ಮುಂದುವರೆಸುತ್ತಿದ್ದರು. ಹೀಗಾಗಿ ಗೋಕರ್ಣದ ಅನೇಕ ಹೊಟೇಲ್-ಅಂಗಡಿಕಾರರಿಗೆ ಅವರು ಪರಿಚಿತರಾಗಿದ್ದರು. ಮೊನ್ನೆ ಗೋಕರ್ಣ ಯಾತ್ರೆ ಮುಗಿಸಿದ ಅವರು ತಮಿಳುನಾಡಿಗೆ ತೆರಳಿದ್ದರು.
ಬೈಕ್ ಓಡಿಸುವ ಹವ್ಯಾಸ ಹೊಂದಿದ್ದ ಮೈಕಲ್ ಗೋಕರ್ಣಕ್ಕೆ ಬಂದಾಗಲೂ ಬೈಕ್ ರೈಡ್ ಮಾಡುತ್ತಿದ್ದರು. ಬುಧವಾರ ಬೈಕ್ ಮೂಲಕವೇ ತಮಿಳುನಾಡು ಕಡೆ ಹೊರಟಿದ್ದರು. ಕೊಯಿಮುತ್ತೂರು ಬಳಿ ಆನೆ ಅವರ ಮೇಲೆ ದಾಳಿ ಮಾಡಿತು. ಬೈಕು ಬಿಟ್ಟು ಕಾಡಿನ ಕಡೆ ಹೋದರೂ ಆನೆ ಅಟ್ಟಿಸಿಕೊಂಡು ಬಂದು ಅವರನ್ನು ಸಾಯಿಸಿತು.
ಹಿಂದಿನಿ0ದ ಬೈಕಿನಲ್ಲಿ ಸಂಚರಿಸುತ್ತಿದ್ದವರು ಈ ಆನೆ ದಾಳಿಯ ವಿಡಿಯೋ ಮಾಡಿದ್ದಾರೆ. ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಪ್ರವಾಸಿಗರು ಆತಂಕವ್ಯಕ್ತಪಡಿಸಿದ್ದಾರೆ.




