6
  • Latest

ಎಲ್ಲೆಂದರಲ್ಲಿ ಮೀನು ಮಾರಾಟ: ಪ್ರತಿಭಟನೆಗೆ ಬಗ್ಗಿದ ಪ ಪಂ ಅಧಿಕಾರಿಗಳು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಎಲ್ಲೆಂದರಲ್ಲಿ ಮೀನು ಮಾರಾಟ: ಪ್ರತಿಭಟನೆಗೆ ಬಗ್ಗಿದ ಪ ಪಂ ಅಧಿಕಾರಿಗಳು!

AchyutKumar by AchyutKumar
in ಸ್ಥಳೀಯ

ಅತ್ಯಂತ ಅಪಾಯಕಾರಿ ರೀತಿಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವವರ ವಿರುದ್ಧ ಯಲ್ಲಾಪುರ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮoಗಳವಾರ ಪ ಪಂ ವಿಶೇಷ ಸಾಮಾನ್ಯ ಸಭೆ ನಡೆದಿದ್ದು, ಸಭೆ ಆರಂಭಕ್ಕೂ ಮುನ್ನ `ಅಕ್ರಮ ಮೀನು ಮಾರಾಟ ನಿಲ್ಲಿಸಬೇಕು’ ಎಂದು ಕೆಲ ಪ ಪಂ ಸದಸ್ಯರು ಪಟ್ಟು ಹಿಡಿದರು. ಈ ಹಿನ್ನಲೆ ಪ ಪಂ ಸಿಬ್ಬಂದಿ ಮೀನು ಮಾರಾಟ ತಡೆದರು.

ADVERTISEMENT

`ಯಲ್ಲಾಪುರ ಪಟ್ಟಣದ ಜೋಡುಕೆರೆ, ತಟಗಾರ ಕ್ರಾಸ್ ಸೇರಿ ಅನೇಕ ಕಡೆ ಮೀನು ಮಾರಾಟ ನಡೆಯುತ್ತಿದೆ. ಮೀನು ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ನಿರ್ಮಿಸಿದರೂ ರಸ್ತೆ ಬದಿ ಮೀನು ಮಾರಾಟ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗ ಅತಿಕ್ರಮಣವಾಗಿದ್ದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಜೊತೆಗೆ ವಾಹನಗಳ ಅಪಘಾತವೂ ಹೆಚ್ಚಾಗಿದೆ’ ಎಂದು ಪ ಪಂ ಸದಸ್ಯರು ವಿವರಿಸಿದರು. ಸೋಮೇಶ್ವರ ನಾಯ್ಕ ಅವರ ಧರಣಿಗೆ ಪ ಪಂ ಸದಸ್ಯರಾದ ನಾಗರಾಜ ಅಂಕೋಲೇಕರ್, ಶ್ಯಾಮಲಿ ಪಾಠಣಕರ್, ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ ಹಾಗೂ ಶ್ರೀನಿವಾಸ ಗಾಂವ್ಕರ್ ಧ್ವನಿಗೂಡಿಸಿದರು.

`ರಸ್ತೆ ಪಕ್ಕದ ಜಾಗ ಅತಿಕ್ರಮಿಸಿ ಮೀನು ಮಾರಾಟ ಮಾಡುವುದರಿಂದ ಇನ್ನೂ ಅನೇಕ ಸಮಸ್ಯೆಗಳು ಉದ್ಬವವಾಗಿದೆ. ಮೀನು ಮಾರಾಟ ಸ್ಥಳದ ತ್ಯಾಜ್ಯ ಸಮೀಪದ ಕೆರೆ ನೀರಿಗೆ ಮಿಶ್ರಣವಾಗುತ್ತಿದೆ. ಜೊತೆಗೆ ಅಲ್ಲಿನ ದೇವಾಲಯದ ವಾತಾವರಣ ಸಹ ಹಾಳಾಗುತ್ತಿದೆ. ಅನಧಿಕೃತ ಮೀನು ಮಾರಾಟ ಸ್ಥಳ ಸ್ವಚ್ಛತೆ ಇಲ್ಲದ ಕಾರಣ ಆ ಪ್ರದೇಶ ಗಬ್ಬೆದ್ದಿದ್ದು, ರೋಗ ಹರಡುವ ಆತಂಕವಿದೆ’ ಎಂದು ಅಧಿಕಾರಿಗಳ ಬಳಿ ವಿವರಿಸಿದರು.

Advertisement. Scroll to continue reading.

ಈ ಹಿನ್ನಲೆ ಸಭೆಯ ಅಜೆಂಡಾ ಓದುವ ಮುನ್ನ ಅಧಿಕಾರಿಗಳು ಅಕ್ರಮ ಮೀನು ಮಾರಾಟ ಪ್ರದೇಶಕ್ಕೆ ತಮ್ಮ ಸಿಬ್ಬಂದಿ ಕಳುಹಿಸಿಕೊಟ್ಟರು. ಅಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಈ ಬಗ್ಗೆ ಫೋಟೋ-ವಿಡಿಯೋವನ್ನು ಸಭೆಯಲ್ಲಿ ಪ್ರದರ್ಶಿಸಿದ ನಂತರ ಮುಂದಿನ ವಿಷಯದ ಕುರಿತು ಚರ್ಚೆ ನಡೆಯಿತು. ಆದರೂ, ಅಕ್ರಮ ಮೀನು ಮಾರಾಟಕ್ಕೆ ಶಾಶ್ವತವಾಗಿ ತಡೆಯೊಡ್ಡಬೇಕು ಎಂದು ಪಟ್ಟು ಹಿಡಿದವರ ಆಕ್ರೋಶ ಕಡಿಮೆ ಆಗಲಿಲ್ಲ.

Advertisement. Scroll to continue reading.

`ಈ ದಿನ ಅಕ್ರಮ ಮೀನು ಮಾರಾಟವನ್ನು ಪಟ್ಟಣ ಪಂಚಾಯತ ತಡೆದಿದೆ. ಇದು ಮತ್ತೆ ಮರುಕಳಿಸಿದರೆ ಪಟ್ಟಣ ಪಂಚಾಯತ ಕಚೇರಿ ಎದುರು ಮೀನು ಮಾರಾಟ ನಡೆಸಿ ಪ್ರತಿಭಟಿಸುವುದು ಖಚಿತ’ ಎಂದು ಸೋಮೇಶ್ವರ ನಾಯ್ಕ ಎಚ್ಚರಿಸಿದರು.

Previous Post

ಮರಕ್ಕೆ ಬಡಿದ ಬಸ್ಸು: ಸಮಯ ಪ್ರಜ್ಞೆ ಮೆರೆದ ಆಂಬುಲೆನ್ಸ ಚಾಲಕರು!

Next Post

GST ಹೆಸರಿನಲ್ಲಿ ವಂಚನೆ: 9 ಬಾರಿ ವಂಚನೆಗೆ ಒಳಗಾದ ಮಾಜಿ ಸೈನಿಕ!

Next Post

GST ಹೆಸರಿನಲ್ಲಿ ವಂಚನೆ: 9 ಬಾರಿ ವಂಚನೆಗೆ ಒಳಗಾದ ಮಾಜಿ ಸೈನಿಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ