6
  • Latest

GST ಹೆಸರಿನಲ್ಲಿ ವಂಚನೆ: 9 ಬಾರಿ ವಂಚನೆಗೆ ಒಳಗಾದ ಮಾಜಿ ಸೈನಿಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

GST ಹೆಸರಿನಲ್ಲಿ ವಂಚನೆ: 9 ಬಾರಿ ವಂಚನೆಗೆ ಒಳಗಾದ ಮಾಜಿ ಸೈನಿಕ!

AchyutKumar by AchyutKumar
in ಸ್ಥಳೀಯ

ಆನ್‌ಲೈನ್ ಟ್ರೆಡಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಿವೃತ್ತ ಸೈನಿಕ ದಿಗಂಬರ ಗಾವಡೆ 30 ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿರುವ ಬಗ್ಗೆ ವಂಚಕರ ಮಾತು ನಂಬಿ ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಸಿಕ್ಕಿರುವ ಲಾಭಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಹೇಳಿ ವಂಚಕರು 2,22,017.86ರೂ ಪಡೆದು ವಂಚಿಸಿದ್ದು, ಮತ್ತೆ 45 ಸಾವಿರ ರೂಪಾಯಿ ನೀಡುವಂತೆ ದುಂಬಾಲು ಬಿದ್ದಿದ್ದಾರೆ!

ADVERTISEMENT

ಜೊಯಿಡಾದ ತಿನೈಘಾಟ್ ಬಳಿ ದಿಗಂಬರ ಗಾವಡೆ ವಾಸಿಸುತ್ತಾರೆ. 40 ವರ್ಷದ ಅವರಿಗೆ ಆನ್‌ಲೈನ್ ಟ್ರೇಡಿಂಗ್ ಅಂದರೆ ಅಪಾರ ಆಸಕ್ತಿ. ಆಳ್ನಾವರದ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಅವರು ಅದೇ ಖಾತೆ ಮೂಲಕ ವ್ಯವಹಾರ ನಡೆಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಟೆಲಿಗ್ರಾಮ್ ಆಫ್ ಕಾಣಿಸಿದ ಗುಂಪು ಸೇರಿಕೊಂಡರು.

ಜನವರಿ 3ರಂದು `ಡಬಲ್ ಮನಿ’ ಬಳಗದವರು ದಿಗಂಬರ ಗಾವಡೆ ಅವರನ್ನು ಅದ್ಧೂರಿಯಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು. ಮೊದಲು 3 ಸಾವಿರ ರೂ ಹೂಡಿಕೆ ಮಾಡುವಂತೆ ಅವರನ್ನು ಪ್ರೇರೇಪಿಸಿದರು. ತಕ್ಷಣ ದಿಗಂಬರ ಗಾವಡೆ 3 ಸಾವಿರ ರೂ ಹೂಡಿಕೆ ಮಾಡಿದರು. ಆದರೆ, 3 ಸಾವಿರ ರೂಪಾಯಿಯ ಸ್ಲಾಟ್ ಮುಗಿದ ಕಾರಣ 5 ಸಾವಿರ ಪಾವತಿ ಮಾಡಬೇಕು ಎಂದು ಮಹಾರಾಷ್ಟದ ಪದ್ಮಸಿಂಹ ಪಾಟೀಲ್ ಎಂಬಾತರು ಸೂಚಿಸಿದರು. ಇದನ್ನು ನಂಬಿದ ಅವರು ಅದೇ ದಿನ 5 ಸಾವಿರ ರೂ ಪಾವತಿಸಿದರು.

Advertisement. Scroll to continue reading.

ಮರು ದಿನವೇ ದಿಗಂಬರ ಗಾವಡೆ ಅವರಿಗೆ 85359ರೂ ಲಾಭ ಸಿಕ್ಕಿತು. ಅದಕ್ಕಾಗಿಯೂ 18672ರೂ GST ಪಾವತಿಸಬೇಕು ಎಂದು ಗುಂಪಿನಲ್ಲಿದ್ದವರು ಹೇಳಿದರು. ಅದರ ಪ್ರಕಾರ ತೆರಿಗೆಯನ್ನು ಸಹ ಮಾಜಿ ಸೈನಿಕರು ನಿಷ್ಟೆಯಿಂದ ಪಾವತಿಸಿದರು. ಅದಾದ ನಂತರ 106765ರೂ ಲಾಭ ಎಂದು ತಿಳಿಸಿದ ವಂಚಕರು ಮತ್ತೆ ಜಿಎಸ್‌ಟಿ ನೆಪದಲ್ಲಿ 26691ರೂ ವಸೂಲಿ ಮಾಡಿದರು. ಆಗ, ದಿಗಂಬರ ಗಾವಡೆ ಅವರಿಗೆ ಅನುಮಾನ ಬಂದಿತು. ಅದಾಗಿಯೂ ಅವರು ಕಳುಹಿಸಿದ ಆಧಾರ್ ಕಾರ್ಡ ಹಾಗೂ ಪಾನ್ ಕಾರ್ಡ ಪೋಟೋ ನೋಡಿ ವಂಚಕರ ಮಾತು ನಂಬಿದರು.

Advertisement. Scroll to continue reading.

ಅದಾದ ನಂತರ ಮತ್ತೆ 148687ರೂ ಲಾಭ ಸಿಕ್ಕಿದ್ದು, ಜನವರಿ 6ರಂದು ಜಿಎಸ್‌ಟಿ ನೆಪದಲ್ಲಿ 33454ರೂ ಪಾವತಿಸಿದರು. ಎಲ್ಲಾ ಹಣವನ್ನು ಯುಪಿಐ ಮೂಲಕ ಪಾವತಿಸುವುದಾಗಿ ಹೇಳಿದ ವಂಚಕರು ಅವರ ಯುಪಿಐ ಐಡಿ ಪಡೆದು ಮತ್ತೆ ವಂಚಿಸಿದರು. `ಪೆಮೆಂಟ್ ಪೆಂಡಿ0ಗ್’ ಎಂಬ ನಕಲಿ ಫೋಟೋ ರವಾನಿಸಿ ಪೆಂಡಿ0ಗ್ ಜಾರ್ಜಸ್ ಎಂದು 42895ರೂ ವಸೂಲಿ ಮಾಡಿದರು.

ಅದಾದ ನಂತರ ಮತ್ತೆ 233546ರೂ ಲಾಭ ಬಂದಿರುವುದಾಗಿ ತಿಳಿಸಿ, 19 ರಂದು ತೆರಿಗೆ ಎಂದು 44686ರೂ ವಸೂಲಿ ಮಾಡಿದರು. ಜ 22ರಂದು ಸಹ 317453ರೂ ಲಾಭ ದೊರೆತಿರುವುದಾಗಿ ತಿಳಿಸಿ ತೆರಿಗೆ ಎಂದು 47618ರೂ ವಸೂಲಿ ಮಾಡಿದರು. ಇದೆಲ್ಲ ಹಣವನ್ನು ದಿಗಂಬರ ಗಾವಡೆ ಖಾಸಗಿ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಅದಾಗಿಯೂ ಮ್ಯಾನೇಜರ್ ಕಮಿಷನ್ ಹಣ 45 ಸಾವಿರ ರೂ ಕೊಡಬೇಕು ಎಂದು ವಂಚಕರು ಬೇಡಿಕೆ ಇಟ್ಟರು.

ಜಿಎಸ್‌ಟಿ ಹೆಸರಿನಲ್ಲಿಯೇ 222017ರೂ ಕಳೆದುಕೊಂಡಿದ್ದ ದಿಗಂಬರ ಗಾವಡೆ ಸೈಬರ್ ವಂಚನೆ ಆಗುರುವ ಬಗ್ಗೆ ಅರಿತು 1930ಗೆ ಫೋನ್ ಮಾಡಿದರು. ಅದಾದ ನಂತರ ರಾಮನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು.

Previous Post

ಎಲ್ಲೆಂದರಲ್ಲಿ ಮೀನು ಮಾರಾಟ: ಪ್ರತಿಭಟನೆಗೆ ಬಗ್ಗಿದ ಪ ಪಂ ಅಧಿಕಾರಿಗಳು!

Next Post

ಆಕಸ್ಮಿಕ ಬೆಂಕಿ: ಸಾಲು ಸಾಲು ಅಡಿಕೆ ಮರ ಭಸ್ಮ!

Next Post

ಆಕಸ್ಮಿಕ ಬೆಂಕಿ: ಸಾಲು ಸಾಲು ಅಡಿಕೆ ಮರ ಭಸ್ಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ