6
  • Latest
Lack of legal knowledge is also a reason for not getting the right

`ಹಕ್ಕು ಸಿಗದಿರಲು ಕಾನೂನು ಜ್ಞಾನ ಕೊರತೆಯೂ ಕಾರಣ’

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

`ಹಕ್ಕು ಸಿಗದಿರಲು ಕಾನೂನು ಜ್ಞಾನ ಕೊರತೆಯೂ ಕಾರಣ’

AchyutKumar by AchyutKumar
March 10, 2025
in ರಾಜ್ಯ
Lack of legal knowledge is also a reason for not getting the right
advt advt advt
ADVERTISEMENT

`ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿ ಬುಡಕಟ್ಟು ಜನಾಂಗದವರು ಸೋತಿದ್ದು, ಈವರೆಗೂ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ’ ಎಂದು ಸಿದ್ದಿ ಸಮುದಾಯದವರು ಕಾನೂನು ಜಾಗೃತಿ ಜಾಥಾದಲ್ಲಿ ಅಸಮಧಾನವ್ಯಕ್ತಪಡಿಸಿದರು. `ಕಾನೂನು ತಿಳುವಳಿಕೆಯೊಂದಿಗೆ ಹೋರಾಟ ನಡೆಸಿದರೆ ಎಂದಿಗೂ ಸೋಲಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ ವೇಳೆ ನೆರೆದಿದ್ದವರನ್ನು ಸಮಾಧಾನ ಮಾಡಿದರು.

ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಾಲಯದ ಸಂಭಾಗಣದಲ್ಲಿ ಸೋಮವಾರ ಅರಣ್ಯ ಜಾಗೃತಿ ಜಾಥಾ ನಡೆದಿದ್ದು, ಅಲ್ಲಿಗೆ ಆಗಮಿಸಿದವರು ಪ್ರಶ್ನೆಗಳ ಸುರಿಮಳೆ ಸುರಿದರು. `ಸಾಗುವಳಿ ಮಾಡುತ್ತಿದ್ದೇವೆ. ಅರ್ಜಿ ಕೊಟ್ಟಿದ್ದೇವೆ. ಜಿಪಿಎಸ್ ಆಗಿಲ್ಲ. ಕಾಯ್ದೆ ಬಗ್ಗೆ ಅಧಿಕಾರಿಗಳು ಹೇಳುತ್ತಿಲ್ಲ’ ಎಂಬುದನ್ನು ಸೇರಿ ಸಾಕಷ್ಟು ಸಮಸ್ಯೆಗಳ ಬಗ್ಗೆ ವಿವರಿಸಿದರು. `ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದಿದೆ. ಆದರೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ ತಪ್ಪಿಲ್ಲ. ಹಕ್ಕು ಪತ್ರ ನೀಡಿದವರಿಗೆ ಪಹಣ ಪತ್ರದಲ್ಲಿ ಹೆಸರು ದಾಖಲಾಗಿಲ್ಲ. ಬುಡಕಟ್ಟು ಜನಾಂಗದ ಭೂಮಿ ಹಕ್ಕುದಾರರಿಗೆ ಸರಕಾರದ ಸೌಲಭ್ಯ ಸಿಗುತ್ತಿಲ್ಲ’ ಎಂಬುದರ ಬಗ್ಗೆ ಹೇಳಿಕೊಂಡರು.

Advertisement. Scroll to continue reading.
ADVERTISEMENT
ADVERTISEMENT

`ಕಾನೂನು ಜಾರಿಗೆ ಬಂದು 18 ವರ್ಷವಾದರೂ ಜಿಲ್ಲೆಯಲ್ಲಿ ಶೇ 10ರಷ್ಟು ಅರಣ್ಯವಾಸಿಗಳ ಅರ್ಜಿ ಮಂಜೂರಾಗಿಲ್ಲ. ಶೇ 72ರಷ್ಟು ಅರಣ್ಯವಾಸಿಗಳ ಜಿಪಿಎಸ್ ಸರಿಯಾಗಿಲ್ಲ. ಜಿಲ್ಲೆಯಲ್ಲಿ 87,757 ಅರ್ಜಿ ಸಲ್ಲಿಕೆಯ ಪೈಕಿ 69,733 ಅರ್ಜಿಗಳು ತಿರಸ್ಕಾರವಾಗಿದೆ. 2,852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂದು ರವೀಂದ್ರ ನಾಯ್ಕ ಸಭೆಯಲ್ಲಿದ್ದವರಿಗೆ ಮಾಹಿತಿ ನೀಡಿದರು.

Advertisement. Scroll to continue reading.

`ಅರಣ್ಯವಾಸಿಗಳ ಅರಣ್ಯ ಭೂಮಿ ಮಂಜೂರಿಗೆ ಕಾನೂನು ತಿಳುವಳಿಕೆ ಅವಶ್ಯ. ಕಾನೂನು ಜ್ಞಾನದ ಕೊರತೆಯೂ ಭೂಮಿ ಹಕ್ಕಿನಿಂದ ವಂಚಿತರಾಗಲು ಮುಖ್ಯ ಕಾರಣ’ ಎಂದವರು ಮನವರಿಕೆ ಮಾಡಿದರು. ಸಂಘಟನೆ ತಾಲೂಕಾ ಅಧ್ಯಕ್ಷ ಬೀಮಶಿ ವಾಲ್ಮಕೀ, ಮಹೇಶ ಮರಾಠಿ, ಭಾಸ್ಕರ ಗೌಡ, ವಿನೋದ ತಳಕೇರಿ, ಚಂದ್ರು ಪೂಜಾರಿ, ಬೀರಪ್ಪ ಬಿಳ್ಕಿ, ಕೃಷ್ಣ ನಾಯರ್, ನರಸಿಂಹ ನಾಯ್ಕ ಮೊದಲಾದವರು ಈ ಮಾತಿಗೆ ತಲೆಯಾಡಿಸಿದರು.

ShareSendTweetShare
ADVERTISEMENT
Previous Post

ಬಿಜೆಪಿ ಅಧ್ಯಕ್ಷನ ಅಪ್ಪ ಕಾಂಗ್ರೆಸ್ ಫಲಾನುಭವಿ!

Next Post

ತಲೆ ಒಡೆದ ಟಾಕ್ಟರ್ ಟಯರ್ ಗಾಳಿ!

Next Post
A tractor tire with a broken head is deflated!

ತಲೆ ಒಡೆದ ಟಾಕ್ಟರ್ ಟಯರ್ ಗಾಳಿ!

ಪಾದಚಾರಿಗೆ ಗುದ್ದಿದ KSRTC ಬಸ್ಸು!

Chennaiyya who stabbed a man gets 10 years in prison!

ಚಾಕು ತಿವಿದ ಚೆನ್ನಯ್ಯನಿಗೆ 10 ವರ್ಷ ಜೈಲು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.