6
  • Latest
Tourist fraudster caught before he could escape!

ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!

AchyutKumar by AchyutKumar
in ರಾಜ್ಯ
Tourist fraudster caught before he could escape!

ವಸತಿಗೃಹ, ಬಾಡಿಗೆ ಬೈಕ್ ಹಾಗೂ ಬಸ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಲು ಯತ್ನಿಸಿದ್ದ ಪ್ರವಾಸಿಗನನ್ನು ಗೋಕರ್ಣದ ಜನ ತಡೆದಿದ್ದಾರೆ. ಆತ ವಂಚಿಸಲು ಯತ್ನಿಸಿದ ಎಲ್ಲಾ ಹಣವನ್ನು ಅವರವರಿಗೆ ನೀಡಿದ ನಂತರವೇ ಬಿಟ್ಟು ಕಳುಹಿಸಿದ್ದಾರೆ.

ADVERTISEMENT

ಆಂದ್ರ ಪ್ರದೇಶ ಮೂಲದ ವಿನೀತ್ ಕೃಷ್ಣ ಎಂಬಾತರು 15 ದಿನಗಳ ಹಿಂದೆ ಗೋಕರ್ಣಕ್ಕೆ ಬಂದಿದ್ದರು. ವಸತಿಗೃಹದಲ್ಲಿ ವಾಸವಾಗಿದ್ದ ಅವರು ಅಲ್ಲಿ ಹಣ ಪಾವತಿ ಮಾಡಿರಲಿಲ್ಲ. ಜೊತೆಗೆ ಬಾಡಿಗೆ ಬೈಕ್ ಪಡೆದು ಅಲ್ಲಿ-ಇಲ್ಲಿ ಸುತ್ತಾಟ ನಡೆಸಿದ್ದರು. ಆದರೆ, ಬೈಕಿನ ಬಾಡಿಗೆ ಸಹ ನೀಡಿರಲಿಲ್ಲ. ಈ ವೇಳೆ ಅನೇಕ ಗೂಡಂಗಡಿಕಾರರಿಗೆ ಸಹ ಆನ್‌ಲೈನ್ ಮೂಲಕ ಹಣ ಪಾವತಿಸಿರುವುದಾಗಿ ತಿಳಿಸಿ ವಸ್ತು ಖರೀದಿಸಿದ್ದರು. ಆದರೆ, ಆನ್‌ಲೈನ್ ಮೂಲಕ ಪಾವತಿಯಾದ ಹಣ ಗೂಡಂಗಡಿಕಾರರ ಖಾತೆಗೆ ಜಮಾ ಆಗಿರಲಿಲ್ಲ.

ಭಾನುವಾರ ಗೋಕರ್ಣದ ಮೇಲಿನಕೇರಿ ಬಳಿ ತಾವು ಪಡೆದಿದ್ದ ಬಾಡಿಗೆ ಬೈಕ್ ನಿಲ್ಲಿಸಿ ಬಸ್ ಹತ್ತಿದ್ದರು. ಬಸ್ ಸಿಬ್ಬಂದಿಗೂ ಬೆಂಗಳೂರು ತಲುಪಿದ ನಂತರ ಹಣ ಪಾವತಿಸುವ ಭರವಸೆ ನೀಡಿದ್ದರು. ಆದರೆ, ಮೇಲಿನಕೇರಿ ಬಳಿ ನಿಂತಿದ್ದ ಬೈಕ್ ಬಗ್ಗೆ ಅನುಮಾನವ್ಯಕ್ತಪಡಿಸಿದ ಅಲ್ಲಿನ ಜನ ವಿನೀತ್ ಕೃಷ್ಣ ಅವರನ್ನು ಅಡ್ಡಗಟ್ಟಿದರು. ಆಗ, ಬೈಕನ್ನು ಮಾಲಕರಿಗೆ ಒಪ್ಪಿಸದೇ, ಅದರ ಬಾಡಿಗೆ ಸಹ ಪಾವತಿಸದೇ ಪರಾರಿಯಾಗುತ್ತಿರುವುದು ಗಮನಕ್ಕೆ ಬಂದಿತು.

Advertisement. Scroll to continue reading.

ಜನ ಸೇರಿದ್ದರಿಂದ ಬೆದರಿದ ವಿನೀತ್ ಕೃಷ್ಣ 112 ಪೊಲೀಸರಿಗೆ ಫೋನ್ ಮಾಡಿದರು. `ತನಗೆ ರಕ್ಷಣೆ ಕೊಡಿ’ ಎಂದು ಪೊಲೀಸರಲ್ಲಿ ಮನವಿ ಮಾಡಿದರು. ಪೊಲೀಸರು ಬಂದು ಪರಿಶೀಲಿಸಿದಾಗ ವಿನೀತ್ ಕೃಷ್ಣ ಹಲವು ಕಡೆ ವಂಚಿಸಿರುವುದು ಗಮನಕ್ಕೆ ಬಂದಿತು. ಬಸ್ಸಿನ ಸಿಬ್ಬಂದಿ ಸಹ ಹಣ ಪಾವತಿಸದೇ ಬಸ್ ಹತ್ತಿದ ಬಗ್ಗೆ ತಿಳಿಸಿದರು.

Advertisement. Scroll to continue reading.

ವಸತಿಗೃಹಕ್ಕೆ 3200ರೂ ಹಾಗೂ ಬೈಕಿನ ಬಾಡಿಗೆ 7 ಸಾವಿರ ರೂ ಪಾವತಿಸುವಂತೆ ಸಂಬAಧಿಸಿದವರು ಪಟ್ಟುಹಿಡಿದರು. ಆಗ, ವಿನೀತ್ ಕೃಷ್ಣ ಶೇ 50ರಷ್ಟು ಹಣ ಪಾವತಿಸಿ, ಉಳಿದಿದನ್ನು `ನಾಳೆ ಆನ್‌ಲೈನ್ ಮೂಲಕ ಪಾವತಿಸುವೆ’ ಎಂದು ಭರವಸೆ ನೀಡಿದರು. ಆಗ, ಆನ್‌ಲೈನ್ ಮೂಲಕ ಪಾವತಿಸಿದ ಹಣ ಜಮಾ ಆಗದ ಬಗ್ಗೆ ಅನೇಕರು ದೂರಿದರು. `ಹಣ ಪಾವತಿಸುವವರೆಗೂ ಬಿಡುವುದಿಲ್ಲ’ ಎಂದು ಜನ ವಿನೀತ್ ಕೃಷ್ಣರಿಗೆ ಮುಂದೆ ಹೋಗಲು ಬಿಡಲಿಲ್ಲ.

ಕೊನೆಗೆ ಅನಿವಾರ್ಯವಾಗಿ ಪೂರ್ತಿ ಹಣ ಪಾವತಿಸಿ ವಿನೀತ್ ಕೃಷ್ಣ ಗೋಕರ್ಣದಿಂದ ತೆರಳಿದರು. ಬಸ್ ಸಿಬ್ಬಂದಿ ಸಹ ಹಣ ಪಾವತಿಸಿಕೊಂಡು ಅವರನ್ನು ಬೆಂಗಳೂರಿಗೆ ಕರೆದೊಯ್ದರು.

Previous Post

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

Next Post

ಅರಣ್ಯ ಹಕ್ಕು: ದಿಕ್ಕು ತಪ್ಪಿಸುವ ಅಧ್ಯಕ್ಷರ ವಿರುದ್ಧ ರೈತ ಸಂಘದ ಕಿಡಿ!

Next Post
Forest rights Farmers' association sparks against misleading president!

ಅರಣ್ಯ ಹಕ್ಕು: ದಿಕ್ಕು ತಪ್ಪಿಸುವ ಅಧ್ಯಕ್ಷರ ವಿರುದ್ಧ ರೈತ ಸಂಘದ ಕಿಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ