6
  • Latest
Various strategies for reservation Caste certificate for non-Scheduled people!

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

AchyutKumar by AchyutKumar
March 17, 2025
in ದೇಶ - ವಿದೇಶ
Various strategies for reservation Caste certificate for non-Scheduled people!
advt advt advt
ADVERTISEMENT

ಪರಿಶಿಷ್ಟ ಜಾತಿಯವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಯವರು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ. ಭಾನುವಾರ ಮಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನೇಕ ಮುಖಂಡರು ಭಾಗವಹಿಸಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗದ ಅಧ್ಯಕ್ಷ ಕಿಶೋರ ಭಾಯಿ ಮಖ್ವಾನಾ ಅವರು ಪರಿಶಿಷ್ಟರ ಕುಂದು-ಕೊರತೆ ಆಲಿಸಿದ್ದು, ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ. `ಕರಾವಳಿ ಭಾಗದಲ್ಲಿ ಪರಿಶಿಷ್ಟರಲ್ಲದವರಿಗೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸಿಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕ್ರಮವಾಗುತ್ತಿಲ್ಲ’ ಎಂದು ಮುಖಂಡರಾದ ಸುಭಾಷ್ ಕಾನಡೆ ಅವರು ವಿವರಿಸಿದರು.

ADVERTISEMENT
ADVERTISEMENT

`ಪರಿಶಿಷ್ಟರಲ್ಲದಿದ್ದರೂ ಹಿಂದುಳಿದ ವರ್ಗದ ಪಟ್ಟಿಯ ಮೀನುಗಾರ ಸಮುದಾಯದ ಮೊಗೇರರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಬಿ ಆರ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಯವರಿಗೆ ನೀಡಿದ ಸೌಲಭ್ಯವನ್ನು ಮೊಗೇರ ಸಮುದಾಯದವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರಿಶಿಷ್ಟರಿಗೆ ನೀಡಿದ ಸೌಲಭ್ಯ ಅವರಿಗೆ ಮಾತ್ರ ಸೀಮಿತವಾಗಿರಬೇಕು’ ಎಂದು ಮುಖಂಡರಾದ ಸುಂದರ್ ಮೇರಾ, ತುಳಸಿದಾಸ ಪಾವಸ್ಕರ ಅವರು ಮನವರಕೆ ಮಾಡಿದರು.

Advertisement. Scroll to continue reading.
Advertisement. Scroll to continue reading.

`ರಾಜ್ಯ ಸರ್ಕಾರ ಬಜೆಟ್ ಅಧೀವೇಶನದಲ್ಲಿ ಮೀನುಗಾರಿಕೆ ಮಾಡುವ ಪರಿಶಿಷ್ಟರಿಗೆ ವಾಹನ ಖರೀದಿ ಸಾಲ, ಬೋಟ್ ರಿಪೇರಿಗೆ ಸಬ್ಸಿಡಿ ಘೋಷಿಸಿದೆ. ಮೊಗೇರ ಜಾತಿಯ ಹೆಸರಿನಲ್ಲಿ ಮೀನುಗಾರರು ಪಡೆದಿರುವ ಈ ಪ್ರಮಾಣಪತ್ರವೇ ಅಕ್ರಮವಾಗಿದ್ದರಿಂದ ಈ ಯೋಜನೆ ಮೂಲಕ ಸಕ್ರಮಗೊಳಿಸುವ ಹುನ್ನಾರ ತಡೆಯಬೇಕು’ ಎಂದು ಆಗ್ರಹಿಸಿದರು.

`ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮಂತ್ರಾಲಯದಿAದ ಸಮೀಕ್ಷೆ ನಡೆಸಲಾಗಿದ್ದು, ಸಮಿತಿ ಅಧ್ಯಕ್ಷ ಕರಿಯಾ ಮುಂಡಾ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅಲ್ಲಿನ ಶಿಫಾರಸ್ಸಿನ ಪ್ರಕಾರ ಪ್ರತಿ ರಾಜ್ಯದಲ್ಲಿಯೂ ಅನುಭವಿ ವಕೀಲರನ್ನು ಎಡಿಷನಲ್ ಎಡ್ವೊಕೇಟ್ ಜನರಲ್ ಎಂದು ನಾಮಕರಣ ಮಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಬೇಕು’ ಎಂದು ಪ್ರಮುಖರಾದ ಸೀತಾರಾಮ ಕೊಂಚಾಡಿ, ರವೀಂದ್ರ ಮಂಗಳ, ಅಶೋಕ ಕೊಂಚಾಡಿ ಒತ್ತಾಯಿಸಿದರು.

`ಉದ್ಯೋಗ ವಿಷಯದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಾತಿ ಪ್ರಮಾಣಪತ್ರ ಪರಿಶೀಲನೆ ನಡೆದ ನಂತರ ಸಿಂಧುತ್ವ ಪ್ರಮಾಣಪತ್ರ ನೀಡಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ನೀಡಲಾಗುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯಿಸದ ಕಾರಣ ಪರಿಶಿಷ್ಟರಲ್ಲದವರು ಸುಳ್ಳು ಪ್ರಮಾಣ ಪತ್ರ ಪಡೆದು ಚುನಾವಣೆ ಎದುರಿಸುತ್ತಿದ್ದಾರೆ. ಅಲ್ಲಿಯೂ ಜಾತಿ ಪ್ರಮಾಣ ಪತ್ರದ ಪುನರ್ ಪರಿಶೀಲನೆ ನಡೆಯಬೇಕು’ ಎಂದು ಸಭೆಯಲ್ಲಿದ್ದ ಕಿರಣ ಶಿರೂರ ಹಾಗೂ ಸಂತೋಷ ಚಂದಾವರ ಆಗ್ರಹಿಸಿದರು.

ShareSendTweetShare
ADVERTISEMENT
Previous Post

ಕತ್ತಲ ರಾತ್ರಿಯಲ್ಲಿ ಸೂರ್ಯ-ಚಂದ್ರನ ಆಟ: ಖಾಕಿ ಕಂಡು ದೂರ ದುಷ್ಪಪಡೆ!

Next Post

ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!

Next Post
Tourist fraudster caught before he could escape!

ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!

Forest rights Farmers' association sparks against misleading president!

ಅರಣ್ಯ ಹಕ್ಕು: ದಿಕ್ಕು ತಪ್ಪಿಸುವ ಅಧ್ಯಕ್ಷರ ವಿರುದ್ಧ ರೈತ ಸಂಘದ ಕಿಡಿ!

Hammer attack on brother: He is the murderer!

ಅಣ್ಣನ ಮೇಲೆ ಸುತ್ತಿಗೆ ಪ್ರಯೋಗ: ಅವನೇ ಕೊಲೆಗಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.