6
  • Latest
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಮನಸಿಗೆ ಬೇಸರ: ಕ್ರಿಮಿನಾಶಕ ಸೇವಿಸಿದ ರೆಸಾರ್ಟ ಕಾರ್ಮಿಕನ ಬದುಕು ಅಂತ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನಸಿಗೆ ಬೇಸರ: ಕ್ರಿಮಿನಾಶಕ ಸೇವಿಸಿದ ರೆಸಾರ್ಟ ಕಾರ್ಮಿಕನ ಬದುಕು ಅಂತ್ಯ!

AchyutKumar by AchyutKumar
April 6, 2025
in ಸ್ಥಳೀಯ
advt advt advt
ADVERTISEMENT

ಹೊನ್ನಾವರ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದರಿಂದ ಅವರು ಕ್ರಿಮಿನಾಶಕ ಸೇವಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಯಾವ ಕಾರಣಕ್ಕೆ ಬೇಸರವಾಯಿತು? ಎಂದು ಯಾರಿಗೂ ತಿಳಿಸಿಲ್ಲ.

ಹೊನ್ನಾವರದ ಖಾರ್ವಾದ ನಾಥಗೇರಿಯಲ್ಲಿ ಆದಿತ್ಯ ನಾಯ್ಕ (34) ವಾಸವಾಗಿದ್ದರು. ಬಾಡದ ರೆಸಾರ್ಟಿನಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 1ರ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಮನೆ ಮೇಲಿನ ಅಟ್ಟದಲ್ಲಿ ಆದಿತ್ಯ ನಾಯ್ಕ ನಿದ್ರಿಸುತ್ತಿದ್ದರು.

ADVERTISEMENT
ADVERTISEMENT

ಮರುದಿನ ನಸುಕಿನ 4 ಗಂಟೆ ವೇಳೆಗೆ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿದ್ದರು. ಗಿಡಗಳಿಗೆ ಹೊಡೆಯುವುದಕ್ಕಾಗಿ ತಂದಿರಿಸಿದ್ದ ಕ್ರಿಮಿನಾಶಕ ಆದಿತ್ಯ ಅವರನ್ನು ಅಸ್ವಸ್ಥರನ್ನಾಗಿಸಿತು. ಆದಿತ್ಯ ನಾಯ್ಕ ಅಸ್ವಸ್ಥರಾಗಿರುವುದನ್ನು ನೋಡಿದ ಅವರ ತಂದೆ ತಿಮ್ಮಪ್ಪ ನಾಯ್ಕ `ಏನಾಯಿತು?’ ಎಂದು ಪ್ರಶ್ನಿಸಿದರು.

ಆಗ, `ಮನಸ್ಸಿಗೆ ಬೇಸರವಾಗಿ ಕ್ರಿಮಿನಾಶಕ ಸೇವಿಸಿದೆ’ ಎಂದು ಆದಿತ್ಯ ನಾಯ್ಕ ಉತ್ತರಿಸಿದರು. ಇದರಿಂದ ಕಂಗಾಲಾದ ತಿಮ್ಮಪ್ಪ ನಾಯ್ಕ ಅವರು ತಮ್ಮ ಇನ್ನೊಬ್ಬ ಪುತ್ರ ಅಜಯ ನಾಯ್ಕ ಹಾಗೂ ಪತ್ನಿ ಸುಶೀಲ ನಾಯ್ಕ ಜೊತೆ ಸೇರಿ ಆದಿತ್ಯ ನಾಯ್ಕರನ್ನು ಆಸ್ಪತ್ರೆಗೆ ದಾಖಲಿಸಿದರು. ಹೊನ್ನಾವರದ ಸೆಂಟ್ ಇಗ್ನೇಶಿಯನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.

ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆದಿತ್ಯ ನಾಯ್ಕರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಏಪ್ರಿಲ್ 5ರಂದು ಅವರು ಸಾವನಪ್ಪಿದರು.

Advertisement. Scroll to continue reading.

ಹಳ್ಳಕ್ಕೆ ಬಿದ್ದ ಬೈಕು: ಯುವತಿ ಸಾವು!

ಮುಂಡಗೋಡದ ಮೈನಳ್ಳಿ ಬಳಿಯಿರುವ ಹಳ್ಳದಲ್ಲಿ ಬೈಕ್ ಬಿದ್ದ ಪರಿಣಾಮ ಯುವತಿಯೊಬ್ಬರು ಸಾವನಪ್ಪಿದ್ದಾರೆ.

ಕಾರವಾರದ ಹಬ್ಬುವಾಡದಲ್ಲಿ ಪೆಂಟಿoಗ್ ಕೆಲಸ ಮಾಡುತ್ತಿದ್ದ ರಫೀಕ್ ಶೇಖ್ ಅವರು ಮುಂಡಗೋಡಿನ ಗುಂಜಾವತಿಯ ಲತಿಪಾ ನವಾಜ್ ಖಾನ್ (31) ಅವರ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಏಪ್ರಿಲ್ 5ರಂದು ಮುಂಡಗೋಡಿನ ಮೈನಳ್ಳಿ ಗ್ರಾಮದಲ್ಲಿ ಕುದುರೆನಾಳ ಹಳ್ಳದ ತಿರುವಿನಲ್ಲಿ ಬೈಕು ಅಪಘಾತವಾಯಿತು.

ಆ ಬೈಕು ಅಲ್ಲಿದ್ದ ಕುದುರೆನಾಳ ಹಳ್ಳದಲ್ಲಿ ಬಿದ್ದ ಪರಿಣಾಮ ಹಿಂದೆ ಕೂತಿದ್ದ ಗುಂಜಾವತಿಯ ಲತಿಪಾ ನವಾಜ್ ಖಾನ್ ಅವರಿಗೆ ಪೆಟ್ಟಾಯಿತು. ಗಂಭೀರ ಗಾಯಗೊಂಡ ಅವರು ಅಲ್ಲಿಯೇ ಸಾವನಪ್ಪಿದರು. ರಫೀಕ್ ಶೇಖ್ ಅವರ ಮುಖ, ಕಾಲುಗಳಿಗೆ ಸಹ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ.

ಕಳ್ಳರ ಕೈ ಚಳಕ: ಪ್ರವಾಸಕ್ಕೆ ಬಂದವರಿಗೆ ಪ್ರಯಾಸ

ಕುಮಟಾದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಆರ್ ರಜನೀಶ ಅವರಿಗೆ 90 ಸಾವಿರ ರೂ ನಷ್ಟವಾಗಿದೆ. ಅವರು ವಾಸವಾಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ ವಿವಿಧ ವಸ್ತುಗಳನ್ನು ಕದ್ದು ಪರಾರಿಯಾದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಎಂ ಎಲ್ ಮೋಟಾರ್ಸಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಆರ್ ರಜನೀಶ ಅವರು ಏಪ್ರಿಲ್ 4ರಂದು ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸೀ ಶೋರ್ ಕಫೆಯಲ್ಲಿ ಅವರು ರೂಂ ಪಡೆದಿದ್ದರು. ಅವರು ಹೊರಗಡೆ ಹೋದಾಗ ಅಪರಿಚಿತರೊಬ್ಬರು ಆಗಮಿಸಿ ರೂಮಿನಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ.

ಸೀ ಶೋ ರೂಮಿನಲ್ಲಿ ಕೆಲಸ ಮಾಡುವ ಮನೋಜ ಹಾಗೂ ಪ್ರಮೋದ ಅವರು ಆರ್ ರಜನೀಶ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. `ನಿಮ್ಮ ರೂಮಿಗೆ ಯಾರೋ ಬಂದು ಹೋದ ಹಾಗಾಯಿತು. ನಿಮ್ಮ ವಸ್ತುಗಳು ಸರಿಯಾಗಿದೆಯಾ? ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು. ಅದಾದ ನಂತರ ಆರ್ ರಜನೀಶ ಅವರು ತಮ್ಮ ಬ್ಯಾಗಿನ ಪರಿಶೀಲನೆ ಮಾಡಿದ್ದು, ಆಗ ಹಣ ಸೇರಿ ವಿವಿಧ ವಸ್ತು ಕಾಣೆಯಾಗಿರುವುದು ಗಮನಕ್ಕೆ ಬಂದಿತು.

10 ಸಾವಿರ ರೂ ಹಣ, ಕಿವಿಯೋಲೆ, ವಾಚ್, ಮೊಬೈಲ್, ಕನ್ನಡಕ ಸೇರಿ 90 ಸಾವಿರ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ಆರ್ ರಜನೀಶ ಅವರು ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

ಖಾಸಗಿ ಶಾಲೆ: ದುಬಾರಿ ಶುಲ್ಕದ ಮೇಲೆ ಕಳ್ಳರ ಕಣ್ಣು!

ಭಟ್ಕಳದ ನೌನಿಹಾಲ್ ಸೆಂಟ್ರಲ್ ಸ್ಕೂಲ್’ನಲ್ಲಿ ಕಳ್ಳತನ ನಡೆದಿದೆ. ಮಕ್ಕಳ ಅಡ್ಮೀಶನ್ ಹಣವನ್ನು ಕಳ್ಳರು ದೋಚಿದ್ದಾರೆ.

ಭಟ್ಕಳದ ಕಿದ್ವಾಯಿ ರಸ್ತೆಯಲ್ಲಿ ನೌನಿಹಾಲ್ ಸೆಂಟ್ರಲ್ ಸ್ಕೂಲ್ ನಡೆಯುತ್ತಿದೆ. ಅಲ್ಲಿ ಏಪ್ರಿಲ್ 3ರ ಸಂಜೆ 6 ಗಂಟೆ ನಂತರ ಈ ಕಳ್ಳತನ ನಡೆದಿದೆ. ಏಪ್ರಿಲ್ 5ರಂದು ಶಾಲೆಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಶಾಲೆಗೆ ನುಗ್ಗಿದ ಕಳ್ಳರು ಮೊದಲು ಕಚೇರಿಯ ಬಾಗಿಲು ಒಡೆದಿದ್ದಾರೆ. ಅದಾದ ನಂತರ ಟೆಬಲ್ ಡ್ರಾವರಿನಲ್ಲಿದ್ದ ಹಣವನ್ನು ಎಗರಿಸಿದ್ದಾರೆ. ಒಟ್ಟು 2.26 ಲಕ್ಷ ರೂ ಹಣ ನಾಪತ್ತೆಯಾಗಿದೆ. `ಮಕ್ಕಳು ಅಡ್ಮಿಶನ್ ಮಾಡಿಸಿದ ಹಣ ಇದಾಗಿದ್ದು, ಅದನ್ನು ಹುಡುಕಿಕೊಡಿ’ ಎಂದು ನೌನಿಹಾಲ್ ಸೆಂಟ್ರಲ್ ಸ್ಕೂಲಿನ ಪೈನಾನ್ಸಿಯಲ್ ಸೆಕ್ರೆಟರಿ ಮಹಮದ್ ಕೋಲಾ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

ಸಾಗವಾನಿ ಸಾಗಾಟ: ಮೂವರ ಸೆರೆ-ಇಬ್ಬರು ಪರಾರಿ!

Next Post

ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!

Next Post
Cricket there.. betting here Man arrested for money hunting!

ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!

Movie song at Devi Utsav: Stabbed with a knife because the song stopped!

ತವರಿಗೆ ಹೋದ ಹೆಂಡತಿ - ಮಾವನ ಮನೆಗೆ ಬಂದ ಪತಿ: ಧರ್ಮದೇಟು ನೀಡಿ ಅತಿಥಿ ಸತ್ಕಾರ!

ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಗೋಕರ್ಣ: ಉಪಾಧ್ಯರ ಕಾರಿಗೆ ಬಸ್ಸು ಡಿಕ್ಕಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.