6
  • Latest
Even if you pay twice as much you wont get this taste Appe Midita!

ದುಪ್ಪಟ್ಟು ದುಡ್ಡು ಕೊಟ್ಟರೂ ಸಿಗದು ಈ ರುಚಿ: ಅಪ್ಪೆ ಮಿಡಿತ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ದುಪ್ಪಟ್ಟು ದುಡ್ಡು ಕೊಟ್ಟರೂ ಸಿಗದು ಈ ರುಚಿ: ಅಪ್ಪೆ ಮಿಡಿತ!

AchyutKumar by AchyutKumar
in ಲೇಖನ
Even if you pay twice as much you wont get this taste Appe Midita!

ಮಲೆನಾಡಿನಲ್ಲಿ ಮಾವಿನಕಾಯಿ ಹಂಗಾಮು ಪೂರ್ವದಲ್ಲಿಯೇ ಅಪ್ಪೆಮಿಡಿಗಾಗಿ ಹುಡುಕಾಟ ಶುರುವಾಗುತ್ತದೆ. ಪರಿಚಯಸ್ಥರ ಬಳಿ `ನನಗೆ ಇಷ್ಟು ಮಿಡಿ ಬೇಕು’ ಎಂಬ ಮುಂಗಡ ಬುಕ್ಕಿಂಗ್ ಸಹ ನಡೆಯುತ್ತದೆ. ಆದರೆ, `ಬೇಡಿಕೆಗೆ ತಕ್ಕ ಬೆಲೆ ಇದ್ದರೂ ಅಪ್ಪೆಮಿಡಿ ಮಾತ್ರ ಆ ಪ್ರಮಾಣದಲ್ಲಿ ಸಿಗುತ್ತಿಲ್ಲ’ ಎಂಬುದು ಪ್ರತಿ ವರ್ಷವೂ ಕೇಳಿಬರುವ ದೂರು!

ADVERTISEMENT

ಬಗೆ ಬಗೆಯ ಉಪ್ಪಿನಕಾಯಿಗಳಲ್ಲಿ ಅಪ್ಪೆಮಿಡಿಯ ಉಪ್ಪಿನಕಾಯಿಗೆ ವಿಶೇಷ ಮನ್ನಣೆ. ಅದರಲ್ಲಿಯೂ ಶಿರಸಿ ಸೀಮೆಯ `ಅನಂತನ ಅಪ್ಪೆಮಿಡಿ’ ನೂರಾರು ವರ್ಷಗಳಿಂದ ಪ್ರಸಿದ್ಧಿಪಡೆದಿದ್ದು, ದುಪ್ಪಟ್ಟು ದುಡ್ಡು ಕೊಟ್ಟರೂ ಈ ತಳಿಯ ಮಿಡಿ ಸಿಗುವುದು ಅಪರೂಪ. ಮಲೆನಾಡಿನ ಅಪ್ಪೆಮಿಡಿಗೆ ಈಚೆಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದೆ. ಆದರೆ, ಬೇಡಿಕೆಗೆ ತಕ್ಕ ಫಸಲು ಮಾರುಕಟ್ಟೆಗೆ ಬರುತ್ತಿಲ್ಲ. ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಫಸಲು ಬಂದಿದ್ದರೂ ಆ ಮರ ಏರಿ ಕಾಯಿ ಕೊಯ್ಯುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ ಬಹುತೇಕರ ಪಾಲಿಗೆ ಅಪ್ಪೆಮಿಡಿ `ಹುಳಿ’ಯಾಗಿಯೇ ಉಳಿದಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನಕಾಯಿಗಳು ಸಿಗುತ್ತಿದೆ. ಬೇರೆ ಬೇರೆ ಜಾತಿಯ ಮಾವುಗಳು ಬೆಳೆಯುವ ಮುನ್ನವೇ ಕೊಯ್ದು ಅದನ್ನು ಅಪ್ಪೆಮಿಡಿ ಹೆಸರಿನಲ್ಲಿ ಮಾರಾಟ ಮಾಡುವ ಕೆಲಸವೂ ನಡೆದಿದೆ. ಒಂದು ಅಪ್ಪೆಮಿಡಿಗೆ 5ರೂಪಾಯಿಯಿಂದ 10ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಇಲ್ಲಿ `ಮೊದಲು ಬಂದವರಿಗೆ ಮಾತ್ರ ಆದ್ಯತೆ’ ಎಂಬ ರೀತಿಯಲ್ಲಿ ಲಭ್ಯತೆಗೆ ಅನುಸಾರವಾಗಿ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಅಪ್ಪೆಮಿಡಿ ಪೇಟೆಯ ರಸ್ತೆಬದಿಯಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅಷ್ಟೂ ಮಾರಾಟವಾಗುತ್ತಿದೆ.

Advertisement. Scroll to continue reading.

ಅದರಲ್ಲಿಯೂ, ಅನಂತನ ಅಪ್ಪೆಮಿಡಿ ಹುಡುಕಿ ದಾಂಡೇಲಿ, ಜೊಯಿಡಾ, ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಮಾರುಕಟ್ಟೆಗೆ ನಾನಾ ಭಾಗದ ಜನ ಬರುತ್ತಾರೆ. ಬನವಾಸಿ, ಮಳಗಿ, ಮುಂಡಗೋಡ ಭಾಗದಲ್ಲಿ ಸಹ ಇದೀಗ ಅಪ್ಪೆಮಿಡಿ ಗಿಡ ನಾಟಿ ನಡೆದಿದೆ. ಆದರೆ, ಅನಂತನ ಅಪ್ಪೆಮಿಡಿ ಸದ್ಯಕ್ಕೆ ಕೆಲವರ ಮನೆ ಬಳಕೆಗೆ ಮಾತ್ರ ಸೀಮಿತವಾಗಿದೆ. ಇದರೊಂದಿಗೆ ಉಪ್ಪಿನಕಾಯಿ ಕಂಪನಿಗಳು ಸಹ ಅಪ್ಪೆಮಿಡಿಯ ಹಿಂದೆ ಬಿದ್ದಿದ್ದು, ಕಂಪನಿಗಳಿಗೆ ಅಗತ್ಯವಿರುವಷ್ಟು ಮಿಡಿ ಎಂದಿಗೂ ಸಿಕ್ಕ ಉದಾಹರಣೆಗಳಿಲ್ಲ.

Advertisement. Scroll to continue reading.

ನೈಸರ್ಗಿಕವಾಗಿ ಬೆಳೆಯುತ್ತಿದ್ದ ಅಪ್ಪೆಮಿಡಿಗಳ ಮರ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ, ವಾತಾವರಣ ವೈಫಲ್ಯ ಸೇರಿ ವಿವಿಧ ಕಾರಣಗಳಿಂದ ಮರಕ್ಕೆ ಅನುಗುಣವಾಗಿ ಫಸಲು ಬರುತ್ತಿಲ್ಲ. ಹೀಗಾಗಿ ಕೆಲವರು ಅಪ್ಪೆಮಿಡಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಆದರೆ, ಅದರಲ್ಲಿ ಸಹ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬಿಡುತ್ತಿಲ್ಲ. ಹೀಗಾಗಿ ಪ್ರತಿ ವರ್ಷವೂ ಅಪ್ಪೆಮಿಡಿ ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೇಡಿಕೆಗೆ ತಕ್ಕ ಮಿಡಿ ಸಿಗುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನ ಬೆಟ್ಟಗುಡ್ಡಗಳನ್ನು ಅಲೆದಾಡುತ್ತಾರೆ. ಹೊಳೆ ಅಂಚಿನಲ್ಲಿನ ಅಪ್ಪೆಮಿಡಿ ಸಂಗ್ರಹಿಸಿ ಬೆಳಗ್ಗೆ 7 ಗಂಟೆಯ ಒಳಗೆ ಅದನ್ನು ಪೇಟೆಗೆ ತರುತ್ತಾರೆ. ಇಲ್ಲಿನ ವ್ಯಾಪಾರಿಗಳು ಅದನ್ನು ಖರೀದಿಸಿ, ನಂತರ ತಮ್ಮ ಖಾಯಂ ಗ್ರಾಹಕರಿಗೆ ಒದಗಿಸುತ್ತಾರೆ. ಕೆಲವೊಮ್ಮೆ ಬುಡಕಟ್ಟು ಜನರು ನೇರವಾಗಿ ಕೆಲ ಮನೆಗಳಿಗೆ ತೆರಳಿ ಮಾವಿನ ಮಿಡಿ ಮಾರಾಟ ಮಾಡುತ್ತಾರೆ. ಮಾಳಂಜಿ, ಹಳದೋಟ, ನಂದಗಾರ ತಳಿಯ ಅಪ್ಪೆಮಿಡಿ ಕೃಷಿಯೂ ಈಚೆಗೆ ಜನ ಮನ್ನಣೆಗಳಿಸಿದೆ.

`ಹೇಗಾದರೂ ಮಾಡಿ ಅಪ್ಪೆಮಿಡಿ ಸಂಗ್ರಹಿಸಬೇಕು. ಈ ವರ್ಷಕ್ಕೆ ಆಗುವಷ್ಟು ಉಪ್ಪಿನಕಾಯಿ ಸಿದ್ದಪಡಿಸಬೇಕು’ ಎಂಬ ಆತುರ ಅನೇಕರದ್ದು. `ನಮ್ಮನೆ ಮದುವೆ-ಮುಂಜಿಗೆ ಅಪ್ಪೆಮಿಡಿ ಉಪ್ಪಿನಕಾಯಿ ಬಡಿಸಬೇಕು’ ಎಂಬ ಬಯಕೆ ಹಲವರದ್ದು. `ನಿಮಗೆ ಅಪ್ಪೆಮಿಡಿ ಸಿಕ್ಕಿತಾ?’ `ಎಲ್ಲಿ ಸಿಕ್ಕಿತು?’ `ಯಾರು ಕೊಟ್ಟರು?’ `ಉಪ್ಪಿನ ಕಾಯಿ ಹಾಕಾಯ್ತ?’ ಎಂಬ ಪ್ರಶ್ನೆಗಳು ಮದುವೆ-ಮುಂಜಿ ಸೇರಿ ಎಲ್ಲಾ ಬಗೆಯ ನೆಂಟರ ಮನೆಯಲ್ಲಿಯೂ ಚರ್ಚಿತ ವಿಷಯ! ಕೊನೆಗೆ `ನಮಗೂ ಸ್ವಲ್ಪ ಮಿಡಿ ಕೊಡಿ’ ಎಂಬ ನಯವಾದ ಬೇಡಿಕೆ. ಅಪ್ಪೆ ಮಿಡಿ ಸಿಗದೇ ಇದ್ದರೆ ಜೀರಿಗೆ ಮಿಡಿ ಅಥವಾ ಸಾದಾ ಮಾವಿನ ಮಿಡಿಯ ಉಪ್ಪಿನಕಾಯಿ ಉಣಬಡಿಸುವುದು ಎಲ್ಲರಿಗೂ ಅನಿವಾರ್ಯ.

Previous Post

ಕಳ್ಳ.. ಮಳ್ಳ.. ಸುಳ್ಳ: ಕಾರವಾರದಲ್ಲಿ ಸಿಕ್ಕಿಬಿದ್ದ ಜೊಯಿಡಾದ ಕಳ್ಳ!

Next Post

`ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಾವು.. ನೀವು!

Next Post
`ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಾವು.. ನೀವು!

`ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಾವು.. ನೀವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ