6
  • Latest
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಯಲ್ಲಾಪುರ ಹೆದ್ದಾರಿಯಲ್ಲಿ ಹಂದಿ ಕಾಟ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ ಹೆದ್ದಾರಿಯಲ್ಲಿ ಹಂದಿ ಕಾಟ!

AchyutKumar by AchyutKumar
April 14, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರದ ಡೊಮಗೇರಿಯಿಂದ ಹುಲಿಗನಕೊಪ್ಪ ಕಡೆ ಹೋಗಬೇಕಿದ್ದ ಬೈಕಿಗೆ ಹಂದಿ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಧಾರವಾಡದ ಸಂಜು ಯಮ್ಮಿ ಹಾಗೂ ಕಿರವತ್ತಿ ಖಾರೆವಾಡದ ರೊಂಗು ಕೊಕ್ಕರೆ ಮಾರ್ಚ 25ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ರಾತ್ರಿ 8.30ರ ಆಸುಪಾಸಿಗೆ ಡೊಮಗೇರಿ ಕ್ರಾಸಿನ ಬಳಿ ಹಂದಿ ಎದುರಾಯಿತು. ಆ ರಾತ್ರಿ ರಸ್ತೆ ದಾಡುತ್ತಿದ್ದ ಹಂದಿಗೆ ಬೈಕು ಗುದ್ದಿತು. ಪರಿಣಾಮ ಸಂಜು ಯಮ್ಮಿ ಬೈಕಿನಿಂದ ಬಹುದೂರ ಹಾರಿ ಬಿದ್ದರು. ರೊಂಗು ಕೊಕ್ಕರೆ ಬೈಕಿನ ಅಡಿಗೆ ಬಿದ್ದರು. ಸಂಜು ಯಮ್ಮಿ ಅವರು ಗಂಭೀರವಾಗಿ ಗಾಯ ಮಾಡಿಕೊಂಡರು. ರಂಗು ಕೊಕ್ಕರೆ ಚಿಕ್ಕಪುಟ್ಟ ಪೆಟ್ಟು ಮಾಡಿಕೊಂಡು ಬಚಾವಾದರು.

ADVERTISEMENT
ADVERTISEMENT

ಚಿಕಿತ್ಸೆ ಪಡೆದ ರೊಂಗು ಕೊಕ್ಕರೆ ಹಿರಿಯರ ಹಂದಿ ಕಾಟದ ಬಗ್ಗೆ ವಿವರಿಸಿದರು. ಅಪಘಾತದ ಬಗ್ಗೆ ಪೊಲೀಸ್ ದೂರು ನೀಡುವಂತೆ ಊರಿನವರು ಹೇಳಿದ ಕಾರಣ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು.

Advertisement. Scroll to continue reading.

ಭಾಗ್ವತರ ಕಾರಿಗೆ ಬುಲೆರೋ ಡಿಕ್ಕಿ!

ಕುಮಟಾದ ವ್ಯಾಪಾರಿ ಸೀತಾರಾಮ ಭಾಗ್ವತ್ ಅವರ ಕಾರು ಹೊನ್ನಾವರದಲ್ಲಿ ಅಪಘಾತವಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ.

Advertisement. Scroll to continue reading.

ಕುಮಟಾ ಬಂದರು ರಸ್ತೆಯ ಸೀತಾರಾಮ ಭಾಗ್ವತ್ ಅವರು ಏಪ್ರಿಲ್ 13ರ ರಾತ್ರಿ ಹೊನ್ನಾವರಕ್ಕೆ ಬಂದಿದ್ದರು. ಇಲ್ಲಿನ ಶ್ರೀಕುಮಾರ ಪೆಟ್ರೋಲ್ ಬಂಕ್ ಎದುರು ಅವರು ಕಾರು ತಿರುಗಿಸುವ ಪ್ರಯತ್ನ ಮಾಡಿದರು. ಕಾರಿನ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸುವಾಗ ಹಿಂದಿನಿoದ ಬಂದ ಬುಲೇರೋ ಗುಡ್ಸ್ ಕಾರಿಗೆ ಗುದ್ದಿತು. ಗುದ್ದಿದ ಬುಲೆರೋ ಚಾಲಕ `ತನಗೂ ಇದಕ್ಕೂ ಸಂಬoಧವೇ ಇಲ್ಲ’ ಎಂಬoತೆ ವರ್ತಿಸಿದರು. ಕಾರಿನ ಒಳಗಿದ್ದವರಿಗೆ ಏನಾಯಿತು? ಎಂದು ಸಹ ಆತ ಗಮನಿಸಲಿಲ್ಲ. ಬುಲೆರೋ ಸಹ ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಕಾರು ಜಖಂ ಆದ ಕಾರಣ ಸೀತಾರಾಮ ಭಾಗ್ವತ್ ಅವರು ಸಿಟ್ಟಾದರು. ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತ ಬುಲೆರೋ ಚಾಲಕನ ವಿರುದ್ಧ ದೂರು ನೀಡಿದರು.


ಶಿವಮೊಗ್ಗ ಸವಾರನ ದುಡುಕುತನ: ಸರ್ಕಾರಿ ಶಿಕ್ಷಕನ ಸೊಂಟಕ್ಕೆ ಗಾಯ!

ಕುಮಟಾದ ಬೆಟ್ಟುಳ್ಳಿಯ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥ ನಾಯ್ಕ ಅವರಿಗೆ ಅಂಕೋಲಾದಲ್ಲಿ ಅಪಘಾತವಾಗಿದೆ. ಶಿವಮೊಗ್ಗದ ಭೀಮರಗೌಡ ಅವರು ಮಂಜುನಾಥ ನಾಯ್ಕರ ಬೈಕಿಗೆ ತಮ್ಮ ಬೈಕ್ ಗುದ್ದಿ, ತಾವು ಪೆಟ್ಟು ಮಾಡಿಕೊಂಡಿದ್ದಾರೆ.

ಮoಜುನಾಥ ನಾಯ್ಕ ಅವರು ಏಪ್ರಿಲ್ 14ರಂದು ಅಂಕೋಲಾ ವಂದಿಗೆ ಡಿಪೋ ಕ್ರಾಸಿನ ಬಳಿ ಸಂಚರಿಸುತ್ತಿದ್ದರು. ಅವರ ಬೈಕಿನಲ್ಲಿ ಗೋವಿಂದ ಗೌಡ ಅವರು ಜೊತೆಯಾಗಿದ್ದರು. ಕುಮಟಾದಿಂದ ಕಾರವಾರ ಕಡೆ ಹೋಗುತ್ತಿದ್ದ ಭೀಮರಗೌಡ ಅವರು ಶಿಕ್ಷಕ ಮಂಜುನಾಥ ನಾಯ್ಕರ ಬೈಕಿಗೆ ತಮ್ಮ ಬೈಕ್ ಡಿಕ್ಕಿ ಹೊಡೆದರು. ಎರಡು ಬೈಕಿನವರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡರು. ಈ ಪೈಕಿ ಮಂಜುನಾಥ ನಾಯ್ಕ ಅವರ ಬಲ ಕೈ ಹಾಗೂ ಸೊಂಟಕ್ಕೆ ಗಾಯವಾದವು. ಮಂಜುನಾಥ ನಾಯ್ಕ ಅವರ ಜೊತೆಗಿದ್ದ ಗೋವಿಂದ ಗೌಡ ಅವರು ಅಪಘಾತದಲ್ಲಿ ಗಾಯಗೊಂಡರು. ಅಪಘಾತಕ್ಕೆ ಕಾರಣರಾದ ಭೀಮರಗೌಡ ಅವರು ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದರು.

ShareSendTweetShare
ADVERTISEMENT
Previous Post

ಕಳಪೆ ಕಾಮಗಾರಿ: ಶಿರಸಿ ಶಾಸಕರ ಕೈ’ಗೆ ಅಂಟಿದ ರಸ್ತೆ ಡಾಂಬರು!

Next Post

ಅಪಘಾತ: ಆ ದಿನ ಗಾಯಗೊಂಡಿದ್ದ ವ್ಯಕ್ತಿ ಇನ್ನಿಲ್ಲ

Next Post
ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಅಪಘಾತ: ಆ ದಿನ ಗಾಯಗೊಂಡಿದ್ದ ವ್ಯಕ್ತಿ ಇನ್ನಿಲ್ಲ

A stranger wearing shoes entered the temple Thief of Sai Mandir caught on CCTV camera!

ಭಯವೂ ಇಲ್ಲ.. ಭಕ್ತಿಯೂ ಇಲ್ಲ | ದೇಗುಲದ ಒಳಗೆ ಬೂಟು ಧರಿಸಿ ಬಂದ ಆಗಂತುಕ: ಸಿಸಿ ಕ್ಯಾಮರಾದಲ್ಲಿ ಸಿಕ್ಕಿಬಿದ್ದ ಸಾಯಿ ಮಂದಿರದ ಕಳ್ಳ!

Ambedkar Jayanti MLA-Minister-MP who didn't come even when called!

ಅಂಬೇಡ್ಕರ್ ಜಯಂತಿ: ಕರೆದರೂ ಕಾರ್ಯಕ್ರಮಕ್ಕೆ ಬಾರದ ಶಾಸಕ-ಸಚಿವ-ಸಂಸದ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.