6
  • Latest
Rare sighting A white-tailed deer threatened with its roar!

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

AchyutKumar by AchyutKumar
in ರಾಜ್ಯ
Rare sighting A white-tailed deer threatened with its roar!

ಅತ್ಯoತ ವಿಷಕಾರಿ ಹಾವುಗಳಲ್ಲಿ ಕಾಳಿಂಗ ಸರ್ಪವೂ ಒಂದಾಗಿದ್ದು, ಅಂಕೋಲಾದಲ್ಲಿ ಅಪರೂಪದ ಬಿಳಿ ಬಣ್ಣದ ಕಾಳಿಂಗ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿದ ಹಾವನ್ನು ಅರಣ್ಯ ಸಿಬ್ಬಂದಿ ಹಾಗೂ ಉರಗ ತಜ್ಞರು ಸೇರಿ ಹರಸಾಹಸದಿಂದ ಹಿಡಿದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಪ್ಪು ಬಣ್ಣದ ಕಾಳಿಂಗ ಸರ್ಪ ಸಾಮಾನ್ಯ. ಆದರೆ, ಬಿಳಿ ಬಣ್ಣದ ಸರ್ಪವನ್ನು ನೋಡಿದವರಿರಲಿಲ್ಲ. ಅಂಕೋಲಾದ ಸುಂಕಸಾಳದಲ್ಲಿ ಈ ಅಪರೂಪದ ಕಾಳಿಂಗ ಕಾಣಿಸಿಕೊಂಡಿದ್ದು, ಅಲ್ಲಿನ ಜನ ಆತಂಕದಿoದಲೇ ಕಣ್ತುಂಬಿಕೊoಡರು. ಇಲ್ಲಿನ ಪ್ರದೀಪ್ ದೇಶಭಂಡಾರಿ ಅವರ ಮನೆ ಬಳಿ ಈ ದಿನ ಕಾಳಿಂಗ ಆಗಮಿಸಿತ್ತು. ಅದನ್ನು ನೋಡಿದ ಮನೆಯವರು ಆಘಾತಕ್ಕೆ ಒಳಗಾಗಿದ್ದರು. ಅವರ್ಸಾದ ಮಹೇಶ ನಾಯ್ಕ ಹಾಗೂ ಗಗನ ನಾಯ್ಕ ಆಗಮಿಸಿ ಜನರ ಭಯ ದೂರ ಮಾಡಿದರು.

ಈ ಹಾವು ಮೊದಲು ಸುಲಭವಾಗಿ ಕೈಗೆ ಸಿಗಲಿಲ್ಲ. ಉರಗ ತಜ್ಞರು ಹೂಡಿದ ಎಲ್ಲಾ ತಂತ್ರಗಳು ಇಲ್ಲಿ ವಿಫಲವಾಗಿದ್ದವು. ಮೊದಲು ಮನೆ ಬಳಿಯಿದ್ದ ಹಾವು ಹಿಡಿಯಲು ಹೋದಾಗ ಸಮೀಪದ ಮರ ಏರಿತು. ಮರದಿಂದ ಕೆಳಗೆ ಇಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಥಮ ಹಂತದಲ್ಲಿ ಅದು ಪ್ರಯೋಜನಕ್ಕೆ ಬರಲಿಲ್ಲ. ಮರದಿಂದ ಇಳಿದ ನಂತರವೂ ಸಂದಿ-ಗೊoದಿಗಳಲ್ಲಿ ನುಸುಳಿ ಹಾವು ತಪ್ಪಿಸಿಕೊಂಡಿತು.

Advertisement. Scroll to continue reading.

ಕಾಳಿoಗ ಬುಸುಗುಡುವ ಶಬ್ದ ಕೇಳಿ ಅಲ್ಲಿದ್ದವರ ಉಸಿರಾಟದ ಶಬ್ದ ಹೆಚ್ಚಾಯಿತು. ಎದುರಿಗೆ ಬಂದ ಜನರಿಗೆ ಆ ಹಾವು ಹೆಡೆ ಎತ್ತಿ ಹೆದರಿಸಿತು. ಪದೇ ಪದೇ ಆಕ್ರೋಶದಲ್ಲಿದ್ದ ಹಾವನ್ನು ಉರಗ ತಜ್ಞರು ಸಮಾಧಾನ ಮಾಡಿದರು. ಕೊನೆಗೆ ತಾವು ತಂದಿದ್ದ ಬೆತ್ತದ ರಿಂಗ್ ಹಾಗೂ ಹುಕ್ಕಿನ ನೆರವಿನಿಂದ ಹಾವು ಚೀಲದ ಒಳಗೆ ಬರುವಂತೆ ಪ್ರಯತ್ನಿಸಿದರು. ಆದರೆ, ಅದಕ್ಕೆ ಕಾಳಿಂಗ ಒಪ್ಪಲಿಲ್ಲ. ಒಮ್ಮೆ ಚೀಲದ ಬಳಿ ಬಂದಿದ್ದ ಹಾವು ಅಲ್ಲಿಂದ ತಪ್ಪಿಸಿಕೊಂಡು ಮತ್ತೊಂದು ಮರದತ್ತ ಸಾಗಿತು.

Advertisement. Scroll to continue reading.

ಆ ಮರಕ್ಕೆ ಅಡ್ಡಲಾಗಿ ನಿಂತ ಮಹೇಶ ನಾಯ್ಕರು 20 ಅಡಿ ಉದ್ದದ ಪ್ಲಾಸ್ಟಿಕ್ ಪೈಪಿನಲ್ಲಿ ಹಾವು ನುಸುಳುವಂತೆ ಮಾಡಿದರು. ಹಾವು ಪೈಪಿನ ಒಳಗೆ ಪ್ರವೇಶಿಸಿದ ನಂತರ ಇನ್ನೊಂದು ತುದಿ ಬಂದ್ ಮಾಡಿ ಅದಕ್ಕೆ ಚೀಲ ಕಟ್ಟಿದರು. 10 ಅಡಿ ಉದ್ದದ ಹಾವನ್ನು ಹಿಡಿದು ಅವರು ಕಾಡಿಗೆ ಬಿಟ್ಟರು.

 

Previous Post

ಮದ್ಯನ ನಶೆ | ಮಹಿಳೆಯರ ಮದ್ಯೆ ಸಿಕ್ಕಿ ಬಿದ್ದ ಪ್ರಯಾಣಿಕ: ಶಕ್ತಿ ಪ್ರದರ್ಶನ!

Next Post

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

Next Post
One dealer.. another driver These two were the marijuana buyers caught that day!

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ