6
  • Latest
One dealer.. another driver These two were the marijuana buyers caught that day!

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!

AchyutKumar by AchyutKumar
April 21, 2025
in ಸ್ಥಳೀಯ
One dealer.. another driver These two were the marijuana buyers caught that day!
advt advt advt
ADVERTISEMENT

ಶಿರಸಿ ಜೂ ಸರ್ಕಲ್ ಬಳಿಯ ಆನೆಹೊಂಡ ಕೆರೆ ಅಂಚಿನಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಕಿರಣಕುಮಾರ್ ಹಾಗೂ ವ್ಯಾಪಾರಿ ರಕ್ಷಿತ್ ಬೆಳಗಾಂವ್ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಆ ಇಬ್ಬರಿಗೂ ಕಾನೂನು ಪಾಠ ಮಾಡಿದ ಪೊಲೀಸರು ಗಾಂಜಾ ನಶೆ ಬಿಡಿಸಿದ್ದಾರೆ.

ಸೋಮವಾರ ಸಂಜೆ ಶಿರಸಿ ನಗರಠಾಣೆ ಪಿಎಸ್‌ಐ ನಾಗಪ್ಪ ಬಿ ಅವರು ನಗರ ಸಂಚಾರ ನಡೆಸುತ್ತಿದ್ದರು. ಆನೆಹೊಂಡಕ್ಕೆ ಹೋಗುವ ರಸ್ತೆ ಬದಿ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ಬಂದಿತು. ಈ ಹಿನ್ನಲೆ ತಮ್ಮ ಪೊಲೀಸ್ ತಂಡದೊoದಿಗೆ ಅವರು ಅಲ್ಲಿ ತೆರಳಿದರು.

Advertisement. Scroll to continue reading.
ADVERTISEMENT
ADVERTISEMENT

ಶಿರಸಿಯ ಗಣೇಶನಗರ ಕಿರಣಕುಮಾರ ಸುಭಾಷ ಜೋಗಳೆಕರ್ ಹಾಗೂ ಅರೆಕೊಪ್ಪದ ರಕ್ಷಿತ್ ರಾಮು ಬೆಳಗಾಂವ ಅಲ್ಲಿ ನಶೆಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಶಿವಲಿಂಗ ತುಪ್ಪದ ಹಾಗೂ ರಾಜಶೇಖರ ಅಂಗಡಿ ಸೇರಿ ಆ ಇಬ್ಬರನ್ನು ಒಂದಷ್ಟು ಹೊತ್ತು ಮಾತನಾಡಿಸಿದರು.

Advertisement. Scroll to continue reading.

ಪೊಲೀಸರ ಪ್ರಶ್ನೆಗೆ ಉತ್ತರಿಸುವಷ್ಟು ತಾಳ್ಮೆ ಅವರಿಗಿರಲಿಲ್ಲ. ಗಾಂಜಾ ಸೇವನೆಯ ಅನುಮಾನದ ಹಿನ್ನಲೆ ನಾಗಪ್ಪ ಬಿ ಅವರು ಆ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದರು. ಪೊಲೀಸರ ನಿರೀಕ್ಷೆಯಂತೆ ಅವರಿಬ್ಬರೂ ಗಾಂಜಾ ಸೇವಿಸಿದನ್ನು ವೈದ್ಯರು ದೃಢಪಡಿಸಿದರು. ತಕ್ಷಣ ಆ ಇಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದರು.


ಬೈಕಿಗೆ ಗುದ್ದಿದ ನ್ಯಾನ್ಯೋ ಕಾರು

ಕಾರವಾರದ ಅರ್ಜುನ್ ಟಾಕೀಸ್ ಮುಂದೆ ನ್ಯಾನ್ಯೋ ಕಾರು ಬೈಕಿಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಓಡಿಸುತ್ತಿದ್ದ ಸಾಯಿಕಟ್ಟಾದ ಜಯಾನಂದ ಮೇತ್ರಿ ಅವರ ಮೂಗಿನ ಮೂಳೆ ಮುರಿದಿದೆ. ಕೋಡಿಬೀರ ದೇವಸ್ಥಾನ ಹತ್ತಿರದ ರೋಶನ್ ಪೇರುಳಕರ್ ಅವರು ಏಪ್ರಿಲ್ 21ರಂದು ಜೋರಾಗಿ ಕಾರು ಓಡಿಸುತ್ತಿದ್ದರು. ಪೊಲೀಸ್ ಅಧೀಕ್ಷಕರ ಕಚೇರಿ ಬಳಿಯಿಂದ ಅರ್ಜುನ್ ಟಾಕೀಸ್ ಕಡೆ ಹೋಗುತ್ತಿದ್ದ ಅವರ ನ್ಯಾನ್ಯೋ ಕಾರು ಕಾರವಾರದಿಂದ ಕೋಡಿಭಾಗದ ಕಡೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಯಿತು. ಪರಿಣಾಮ ಜಯಾನಂದ ಮೇತ್ರಿ ಅವರ ಮೂಗಿಗೆ ಪೆಟ್ಟಾಯಿತು. ಈ ಅಪಘಾತದ ಬಗ್ಗೆ ಸಾಯಿಕಟ್ಟಾದ ಕೃಷ್ಣಾನಂದ ಮೇತ್ರಿ ಪೊಲಿಸ್ ದೂರು ನೀಡಿದರು.


ಬೈಕಿಗೆ ಗುದ್ದಿದ ರಿಕ್ಷಾ: ಕೈ ಮೂಳೆ ಮುರಿತ

ಕಾರವಾರದ ಬಿಣಗಾ ಟನಲ್ ಬಳಿ ರಿಕ್ಷಾವೊಂದು ಬೈಕಿಗೆ ಗುದ್ದಿದ್ದರಿಂದ ಬೈಕ್ ಸವಾರ ತೋಕು ಗೌಡ ಅವರ ಕೈ ಮುರಿದಿದೆ. ಏಪ್ರಿಲ್ 19ರಂದು ಬಿಣಗಾ ಸೀತಾನಗರದ ರಿಕ್ಷಾ ಚಾಲಕ ಶಿವಾ ವಡ್ಡರ್ ಬಿಣಗಾದಿಂದ ಕಾರವಾರದ ಕಡೆ ವೇಗವಾಗಿ ರಿಕ್ಷಾ ಓಡಿಸುತ್ತಿದ್ದರು. ಟನಲ್ ಬಳಿ ಹೋಗುತ್ತಿದ್ದ ಬೈಕ್ ಹಿಂದಿಕ್ಕಲು ಅವರು ರಿಕ್ಷಾ ವೇಗ ಹೆಚ್ಚಿಸಿದರು. ಆಗ ಆ ರಿಕ್ಷಾ ಬೈಕಿಗೆ ಗುದ್ದಿದ್ದು, ಬೈಕು ಓಡಿಸುತ್ತಿದ್ದ ಅಮದಳ್ಳಿ ಬಾಳೆರಾಶಿಯ ತೋಕು ಗೌಡ ಅವರು ನೆಲಕ್ಕೆ ಬಿದ್ದರು. ಪರಿಣಾಮ ಕೈ ಮೂಳೆ ಮುರಿಯಿತು. ರಿಕ್ಷಾ ಚಾಲಕ ಶಿವಾ ವಡ್ಡರ್ ವಿರುದ್ಧ ತೋಕು ಗೌಡರ ಮಗ ಮಂಜುನಾಥ ಗೌಡ ಪೊಲೀಸ್ ದೂರು ನೀಡಿದರು.

ShareSendTweetShare
ADVERTISEMENT
Previous Post

ಅಪರೂಪದ ದರ್ಶನ: ಬುಸುಗುಟ್ಟು ಬೆದರಿಸಿದ ಬಿಳಿ ಕಾಳಿಂಗ!

Next Post

ಸಮುದ್ರದ ಅಂಚಿನಲ್ಲಿ ರಕ್ತದ ಅಲೆ: ಗೋವಾದ ಹೊಟೇಲಿನಲ್ಲಿ ಸಿಕ್ಕಿಬಿದ್ದ ಕೊಲೆಗಾರ!

Next Post
A wave of blood on the seashore A murderer caught in a Goa hotel!

ಸಮುದ್ರದ ಅಂಚಿನಲ್ಲಿ ರಕ್ತದ ಅಲೆ: ಗೋವಾದ ಹೊಟೇಲಿನಲ್ಲಿ ಸಿಕ್ಕಿಬಿದ್ದ ಕೊಲೆಗಾರ!

Abnormal death of lake fish

ಕೆರೆ ಮೀನಿನ ಅಸಹಜ ಸಾವು

Save January.. Light up Brahminy The sacred thread that unites Brahmins!

ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ: ಬ್ರಾಹ್ಮಣರನ್ನು ಒಂದುಗೂಡಿಸಿದ ಪವಿತ್ರ ದಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.