6
  • Latest
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಹೊಟ್ಟೆನೋವು: ಆಸ್ಪತ್ರೆಗೆ ದಾಖಲಿಸಿದ್ದ ರೋಗಿ ಪರಾರಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಟ್ಟೆನೋವು: ಆಸ್ಪತ್ರೆಗೆ ದಾಖಲಿಸಿದ್ದ ರೋಗಿ ಪರಾರಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹೊಟ್ಟೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಂಕೋಲಾದ ನಾಗಪ್ಪ ಗೌಡ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಯಾಮಾರಿಸಿ ಪರಾರಿಯಾಗಿದ್ದಾರೆ. ಗೌಡರ ಕುಟುಂಬದವರು ಇದೀಗ ಅವರ ಹುಡುಕಾಟ ನಡೆಸಿದ್ದಾರೆ.

ಅಂಕೋಲಾದ ಅಲಗೇರಿ ಬಳಿಯ ಬಡಗೇರಿಯಲ್ಲಿ ನಾಗಪ್ಪ ಗೌಡ (41) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಮದ್ಯ ವ್ಯಸನ ಚಟಕ್ಕೆ ಅಂಟಿಕೊAಡಿದ್ದರು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿoದ ಅವರ ತಂದೆ ಬೀರಾ ಗೌಡ ಅವರು ನಾಗಪ್ಪ ಗೌಡರನ್ನು ಹೊನ್ನಾವರದ ಆಸ್ಪತ್ರೆಗೆ ಕರೆತಂದಿದ್ದರು.

ADVERTISEMENT
ADVERTISEMENT

ಏಪ್ರಿಲ್ 26ರಂದು ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ನಾಗಪ್ಪ ಗೌಡ ಅವರು ಉಪಾಯವಾಗಿ ಅಲ್ಲಿಂದ ತಪ್ಪಿಸಿಕೊಂಡರು. ಎಲ್ಲಿ ಹುಡುಕಿದರೂ ನಾಗಪ್ಪ ಗೌಡ ಅವರು ಸಿಗಲಿಲ್ಲ. ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಸಂಜೆ 4.30ರ ವೇಳೆಗೆ ಅವರು ಆಸ್ಪತ್ರೆಯಿಂದ ಹೊರಹೋಗಿದ್ದು ಗಮನಕ್ಕೆ ಬಂದಿದ್ದು, ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ. ಅಂಕೋಲಾದ ಮನೆಗೆ ಸಹ ನಾಗಪ್ಪ ಗೌಡರು ಮರಳಲಿಲ್ಲ. ಹೀಗಾಗಿ ಬೀರಾ ಗೌಡ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಸಹ ನಾಗಪ್ಪ ಗೌಡರ ಹುಡುಕಾಟ ನಡೆಸಿದ್ದಾರೆ.


ಅನಾರೋಗ್ಯ: ಬಾವಿಗೆ ಹಾರಿ ಜೀವಬಿಟ್ಟ ಕಾರ್ಮಿಕ

ಯಲ್ಲಾಪುರದ ಕಂಪ್ಲಿ ಬಳಿಯ ಸಂತೋಷ ನಾಯ್ಕ ಅವರು ಅದೇ ಊರಿನ ನಾರಾಯಣ ಹೆಗಡೆ ಅವರ ಒಡೆತನದ ಬಾವಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ.

ಕಂಪ್ಲಿ ಬೂಮಸರದಲ್ಲಿ ಸಂತೋಷ ನಾಯ್ಕ (39) ಅವರು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದರು. ಅವರ ಪತ್ನಿ ವಿದ್ಯಾ ನಾಯ್ಕ ಅವರು ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದರು. ಈ ನಡುವೆ ಸಂತೋಷ ನಾಯ್ಕ ಅವರಿಗೆ ಅನಾರೋಗ್ಯ ಕಾಡಿತು. ವಿವಿಧ ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದರೂ ಅವರು ಗುಣಮುಖರಾಗಲಿಲ್ಲ.

ಮೂರು ತಿಂಗಳ ಕಾಲ ನಿರಂತರ ಚಿಕಿತ್ಸೆಪಡೆದರೂ ರೋಗವಾಸಿಯಾಗದ ಕಾರಣ ಸಂತೋಷ ನಾಯ್ಕ ಅವರು ಬೇಸರಿಸಿಕೊಂಡಿದ್ದರು. ಇದೇ ವಿಷಯವಾಗಿ ಚಿಂತಿಸುತ್ತಿದ್ದ ಅವರು ಮಾನಸಿವಾಗಿ ಕುಗ್ಗಿದ್ದು, ಖಿನ್ನತೆಗೆ ಒಳಗಾದರು. ಏಪ್ರಿಲ್ 27ರಂದು ನಾರಾಯಣ ಹೆಗಡೆ ಅವರ ಮನೆ ಬಳಿ ತೆರಳಿದ ಸಂತೋಷ ನಾಯ್ಕರು ಅಲ್ಲಿದ್ದ ಬಾವಿಗೆ ಹಾರಿ ಸಾವನಪ್ಪಿದರು. ಸಂಜೆ ವೇಳೆ ಅವರ ಶವ ನೋಡಿದ ಊರಿನವರು ಅದನ್ನು ಮೇಲೆತ್ತಿದರು. ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವಿದ್ಯಾ ನಾಯ್ಕ ಅವರು ಪ್ರಕರಣ ದಾಖಲಿಸಿದರು.


ಜಾನುವಾರು ಮೇವು ನೀಡಲು ಹೋದವ ಉಪವಾಸ: ಸಾವು!

Advertisement. Scroll to continue reading.

ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಿಗೆ ಮೇವುಣಿಸಲು ತೆರಳಿದ್ದ ಹಳಿಯಾಳದ ಸಾವೇರ ಸಿದ್ದಿ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.

ಹಳಿಯಾಳದ ಹೊಸೂರು ಬಳಿಯ ಜತಗಾದಲ್ಲಿ ಸಾವೇರ್ ಸಿದ್ದಿ (75) ವಾಸವಾಗಿದ್ದರು. ಏಪ್ರಿಲ್ 26ರಂದು ಸಂಜೆ ಅವರು ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದರು. ಆ ದಿನ ಬೆಳಗ್ಗೆಯಿಂದ ಅವರು ಆಹಾರ ಸೇವಿಸಿರಲಿಲ್ಲ. ಬದಲಾಗಿ, ಮದ್ಯ ಸೇವನೆ ಮಾಡಿದ್ದು ಅದೇ ಗುಂಗಿನಲ್ಲಿದ್ದರು. ಏಪ್ರಿಲ್ 27ರ ಮರುದಿನ ನೋಡಿದಾಗ ಕೊಟ್ಟಿಗೆಯಲ್ಲಿನ ಮಂಚದ ಮೇಲೆ ಸಾವೇರ ಸಿದ್ದಿ ಶವವಾಗಿದ್ದರು. ಈ ಬಗ್ಗೆ ಅವರ ಮಗ ಮಿಂಗಲ್ ಸಿದ್ದಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

Advertisement. Scroll to continue reading.

ದಟ್ಟ ಕಾಡಿನಲ್ಲಿ ಕೋಳಿ ಅಂಕ: 13 ಬೈಕ್ ವಶ

ಶಿರಸಿ ಕಾಗೇರಿ ಬೆಟ್ಟಕೊಪ್ಪದ ಭೂತೇಶ್ವರ ದೇವಾಲಯ ಹಿಂದಿನ ಕಾಡಿನಲ್ಲಿ ಕೋಳಿ ಅಂಕನಡೆಸುತ್ತಿದ್ದ ಕಾನಗೋಡಿನ ಗಣೇಶ ನಾಯ್ಕ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿದ ಹಲವು ಜನ ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ಪೊಲೀಸರು ಅವರ ಬೈಕುಗಳನ್ನು ವಶಕ್ಕೆಪಡೆದಿದ್ದಾರೆ.

ಏಪ್ರಿಲ್ 27ರಂದು ಮಧ್ಯಾಹ್ನ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ಪಿಎಸ್‌ಐ ಸಂತೋಷಕುಮಾರ ಎಂ ಅವರಿಗೆ ಮಾಹಿತಿ ಸಿಕ್ಕಿತು. ಈ ಹಿನ್ನಲೆ ಅವರು ತಮ್ಮ ತಂಡದೊoದಿಗೆ ಭೂತೇಶ್ವರ ದೇವಾಲಯ ಹಿಂದಿನ ಅರಣ್ಯ ಪ್ರದೇಶಕ್ಕೆ ತೆರಳಿದರು. ಅಲ್ಲಿ ಕೆಲ ಬೈಕುಗಳು ನಿಂತಿದ್ದವು. ಗಣೇಶ ನಾಯ್ಕ ಅವರು ಕೋಳಿಗಳನ್ನು ಹಿಡಿದು ಜೂಜಾಡಿಸುತ್ತಿದ್ದರು. ಪೊಲೀಸರನ್ನು ಕಂಡ ಉಳಿದವರು ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಜೂಜಾಟಕ್ಕೆ ಬಳಿಸಿದ್ದ 5920ರೂ ಹಣ ಹಾಗೂ 13 ಬೈಕುಗಳನ್ನು ವಶಕ್ಕೆಪಡೆದರು. ಗಣೇಶ ನಾಯ್ಕ ಅವರ ಬಳಿಯಿಂದ ಹುಂಜವನ್ನು ಪೊಲೀಸರು ಜಪ್ತು ಮಾಡಿದರು.

ShareSendTweetShare
ADVERTISEMENT
Previous Post

ನೀರಿಗೆ ಹೋದ ನಾರಿ.. ಕೆರೆಗೆ ಬಿದ್ದು ಜಲಸಮಾಧಿ!

Next Post

ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!

Next Post
The former chocolate merchant is now a big terrorist His side job is raising children!

ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!

The damaged road is finally repaired First success for Ananthamurthy's struggle!

ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಅನಂತಮೂರ್ತಿ ಹೋರಾಟಕ್ಕೆ ಮೊದಲ ಯಶಸ್ಸು!

A fight over a road An elderly couple fights for justice!

ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.